ಏಸೂರು ಮರೆತರೂ ಈಸೂರು ಮರೆಯುವಂತಿಲ್ಲ…

ಭಾರತದ ಸ್ವಾತಂತ್ರ್ಯ ಹೋರಾಟ,ಅಸ್ಪ್ರಶ್ಯತೆ ನಿವಾರಣೆ,ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ಮಹತ್ಮಾಗಾಂಧಿಯವರ ಹೆಸರು ಚಿರಸ್ಥಾಯಿ.ಹಿಂದಿನ ಶತಮಾನದಲ್ಲಿ ಜಾಗತಿಕ ನಾಯಕರಾದ ಭಾರತೀಯ ಯಾರು ಎಂದರೆ ಅದಕ್ಕೆ ಉತ್ತರ ಗಾಂಧಿ ಎನ್ನುವ ನಿಜ ಫಕೀರನ ಹೆಸರು ಬರುವುದು ಪಕ್ಕಾ. ಇಂಥ ಗಾಂಧಿ ಎಲ್ಲೋ ಕೂತು, ಯಾವುದೋ ಊರಿನಲ್ಲಿ ಹೋರಾಟ ಮಾಡುತ್ತಾ ಕರೆ ಕೊಟ್ಟರೆ ಇಡೀ ಭಾರತ ಆ ಕರೆಗೆ ಓಗುಡುತಿತ್ತು. ಇಂಥದ್ದೇ ಒಂದು ಮಹತ್ವದ ಕರೆ ಕ್ವಿಟ್‌ ಇಂಡಿಯಾ, ೧೯೪೨ ರಲ್ಲಿ ಮಹಾತ್ಮಾಗಾಂಧೀಜಿ ಬ್ರಟೀಷರೇ ಭಾರತ ಬಿಟ್ಟು ತೊಲಗಿ ಎಂದಾಗ ಎದ್ದದ್ದು ಸುನಾಮಿ.

ದೇಶಕ್ಕೆ ದೇಶವೇ ಎದ್ದು ನಿಂತು ಬ್ರಟೀಷರಿಗೆ ಕ್ವಿಟ್‌ ಇಂಡಿಯಾ ಎಂದಿತು. ಆಗ ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪುಟ್ಟ ಗ್ರಾಮ ಈಸೂರು ೨೦೦ ಜನ ಹೋರಾಟಗಾರರೊಂದಿಗೆ ಬ್ರಿಟೀಷರ ವಿರುದ್ಧ ಹೂಂಕರಿಸಿತು. ಅದು ೧೯೪೨ ರ ಸೆಪ್ಟೆಂಬರ್‌ ೨೭ ರ ದಿನ ಬ್ರಿಟೀಷ್‌ ಸರ್ಕಾರದ ಒಬ್ಬ ಅಮಲ್ಧಾರ ಮತ್ತು ಸಬ್‌ ಇನ್‌ ಸ್ಪೆಕ್ಟರ್‌ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಅವರನ್ನು ಕೊಂದೇ ಬಿಟ್ಟರು.

ಬ್ರಟೀಷರಿಗೆ ತೆರಿಗೆ ಕೊಡುವುದಿಲ್ಲ ಎಂದು ಪ್ರಾರಂಭವಾದ ಸ್ಥಳಿಯರ ಚಳವಳಿ ಈಸೂರನ್ನು ಸ್ವತಂತ್ರ ಗ್ರಾಮ ಎಂದು ಘೋಶಿಸುವ ವರೆಗೆ ಮುಂದುವರಿಯಿತು. ಮಾರನೇ ದಿನ ಸೆ.೨೮ ಬ್ರಟೀಷ್‌ ಸೇನೆ ಈಸೂರಲ್ಲಿ ದಂಗೆ ಮಾಡಿ ಹೋರಾಟಗಾರರನ್ನು ಹೊಡೆದು ಓಡಿಸಿ ಮಹಿಳೆಯರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ಇದೇ ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ೨೦೦ ಜನರಲ್ಲಿ ೫ ಜನರನ್ನು ಗಲ್ಲಿಗೇರಿಸಲಾಯಿತು.

೨೫ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದು ಈಸೂರು ದಂಗೆ, ಮಾರಣಹೋಮದ ಕತೆ. ಅಂದು ಜೀವತೆತ್ತ ಕೆ.ಗುರಪ್ಪ,ಮಲ್ಲಪ್ಪ,ಸೂರ್ಯನಾರಾಯಣ ರಾವ್‌, ಹಾಲಪ್ಪ ಸೇರಿದ ೫ ಜನ ಮಣ್ಣು ಸೇರಿದರು ಉಳಿದ ೨೫ ಜನರು ಜೀವಿತಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದವರು ಸ್ವಾತಂತ್ರ್ಯಾ ನಂತರ ಮರಳಿ ಮನೆ ಸೇರಿದರು ಈ ಹೋರಾಟ ಭಾರತದ ಸ್ವಾತಂತ್ರ್ಯ ಹೋರಾಟದ ಮೈಲುಗಲ್ಲು. ಪರಕೀಯ ಆಡಳಿತದ ಪರತಂತ್ರದಿಂದ ಸ್ವತಂತ್ರ ಗ್ರಾಮವಾದ ಈಸೂರು ಹೀಗೆ ಸ್ವಯಂ ಸ್ವತಂತ್ರ ಗ್ರಾಮ ಎಂದು ಘೋಶಿಸಿಕೊಂಡ ಮೊದಲ ಊರು ಈ ಈಸೂರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *