ಬಿ.ಜೆ.ಪಿ. ತಾಲೂಕಾ ಕಾರ್ಯಕಾರಿಣಿ ಸಭೆಯಲ್ಲಿ ಟಾರ್ಗೆಟ್‌ ಆದ ವ್ಯಕ್ತಿ ಯಾರು?

ಸಿದ್ಧಾಪುರ ತಾಲೂಕಿನ ಬಿ.ಜೆ.ಪಿ. ಮಂಡಳದ ಕಾರ್ಯಕಾರಿಣಿ ಸಭೆ ಇಲ್ಲಿಯ ಲಯನ್ಸ್‌ ಬಾಲಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಭೆಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಗಿರೀಶ್‌ ಪಟೇಲ್‌ ಮತ್ತು ಮಾರ್ಕಂಡೆ ಎಂದಿನಂತೆ ದೇಶ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರುತ್ತಲೇ ಸುವರ್ಣಯುಗ ಪ್ರಾರಂಭವಾಯಿತು ಎಂದು ಭಾಷಣ ಮಾಡಿದರು. ಮಾಧ್ಯಮದವರ ಎದುರು ತಾಲೂಕಾ ಕಾರ್ಯಕಾರಿಣಿಗೆ ಬಂದ ಕಾರ್ಯಕರ್ತರು ಶಾಂತಚಿತ್ತರಾಗಿ ಕುಳಿತುಕೊಂಡು ವಿನಯ ಪ್ರದರ್ಶಿಸಿದರು.

ತಾಲೂಕಾ ಕಾರ್ಯಕಾರಿಣಿ ಸಭೆ ಸದ್ಘಾಟನಾ ಕಾರ್ಯಕ್ರಮ ಮುಗಿಯುತ್ತಲೇ ಮಾಧ್ಯಮ ಪ್ರತಿನಿಧಿಗಳು ಹೊರನಡೆಯುತಿದ್ದಂತೆಯೇ ತಾಲೂಕಾ ಕಾರ್ಯಕಾರಿಣಿ ಸಭೆ ಪ್ರಾರಂಭವಾಗುವುದಕ್ಕೂ ಶಿಸ್ತಿನ ಪಕ್ಷದ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆಯುವುದಕ್ಕೂ ಸರಿ ಹೋಯಿತು.

ಬಿ.ಜೆ.ಪಿ.ಗೆ ವಲಸೆ ಬಂದ ಕೆಲವು ಕಾರ್ಯಕರ್ತರು ಮುಖಂಡರಿಗೆ ಮೂಲ ಕಾರ್ಯಕರ್ತರಿಗಿಂತ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ ಎಂದು ಆಕ್ಷೇಪಿಸಿದ ಕಾರ್ಯಕರ್ತರು ಎರಡ್ಮೂರು ದಶಕಗಳಿಂದ ಪಕ್ಷಕ್ಕೆ ಅಧಿಕಾರವಿಲ್ಲದಿದ್ದಾಗ ಕಷ್ಟದಿಂದ ಪಕ್ಷ ಕಟ್ಟಿದವರು ನಾವು ಈಗ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ಆದ್ಯತೆ ನೀಡಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದರ ಪರಿಣಾಮ ಕೆಟ್ಟದಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದರು.

ಇದರ ಹಿಂದೆಯೇ ತಕರಾರು ಎತ್ತಿದ ಚುನಾಯಿತ ಪ್ರತಿನಿಧಿಗಳು ರಾಜ್ಯ ಸರ್ಕಾರದ ವಿ.ಸ. ಸಭಾಪತಿ ಮತ್ತು ಸ್ಥಳಿಯ ಶಾಸಕರು ಬಿ.ಜೆ.ಪಿ. ಜನಪ್ರತಿನಿಧಿಗಳಲ್ಲಿ ಕೆಲವರಿಗೆ ಬೆಣ್ಣೆ ಹಲವರಿಗೆ ಸುಣ್ಣ ಎನ್ನುವ ತಾರತಮ್ಯದ ನೀತಿ ಅನುಸರಿಸುತಿದ್ದಾರೆ. ಪಕ್ಷದ ಚಿನ್ಹೆಯಡಿ ಮತ ಕೇಳಿದ ನಮಗೆ ಜನರ ಬಳಿ ಹೋಗಲು ಮುಖವೆಲ್ಲಿದೆ. ಅಕ್ರಮ ಮದ್ಯ ಮಾರಾಟ ವಿರೋಧಿಸಿ ಚುನಾವಣೆ ಗೆದ್ದವರು ನಾವು ಈಗ ನಮ್ಮ ಮುಖಂಡರೇ ಅಕ್ರಮ ಮದ್ಯ, ಕಮೀಷನ್‌ ವ್ಯವಹಾರಕ್ಕೆ ನಿಂತರೆನಮ್ಮ ಸ್ಥಿತಿ ಏನಾಗಬೇಕು.?

ಪಕ್ಷದ ಎಲ್ಲಾ ವೇದಿಕೆಗಳಲ್ಲಿ ಸರ್ಕಾರದ ಸಾಧನೆ ಹೇಳಿ ಎನ್ನುತ್ತೀರಿ ಸಿಲಿಂಡರಿಗೆ ಐದು ನೂರು ರೂಪಾಯಿ ಬೆಲೆ ಇದ್ದಾಗ ಉಜ್ವಲ ಗ್ಯಾಸ್‌ ಕೊಟ್ಟಿರಿ, ಗ್ಯಾಸ್‌ ಬಳಕೆದಾರರಿಗೆ ಸಬ್ಸಿಡಿ ಕೊಟ್ಟು ಈಗ ಗ್ಯಾಸ ಸಿಲಿಂಡರ್‌ ಬೆಲೆ ಹನ್ನೊಂದು ನೂರು ರೂಪಾಯಿ ಏರಿಸಿ ಈಗ ಉಚಿತ ಸಿಲಿಂಡರೂ ಇಲ್ಲ, ಸಹಾಯಧನವೂ ಇಲ್ಲ ಮಾಡಿದರೆ ಜನಸಾಮಾನ್ಯರು ನಮ್ಮನ್ನು ಪ್ರಶ್ನಿಸುವುದಿಲ್ಲವೆ?

ಪ್ರತಿ ಚುನಾವಣೆಯಲ್ಲಿ ರಾಷ್ಟ್ರೀಯತೆ, ಹಿಂದುತ್ವ ಎಂದು ಮತ ಕೇಳುತ್ತೇವೆ ಅಧಿಕಾರ ಬಂದಾಗ ಹಿಂದುಳಿದವರು ಹಿಂದೆ ಉಳ್ಳವರು ಮುಂದೆ ಹೋಗುವುದಾದರೆ ಜನ ನಮ್ಮನ್ನು ನಂಬುವುದಾದರೂ ಹೇಗೆ ಎನ್ನುವ ಪ್ರಶ್ನೆಗಳಿಗೆ ಬಿ.ಜೆ.ಪಿ. ಮುಖಂಡರು,ಅತಿಥಿಗಳು ನಿರುತ್ತರರಾದರು. ಈ ವಿರೋಧ ಬರೀ ಕಾರ್ಯಕಾರಿಣಿ ಸಭೆಗೆ ಮೀಸಲಲ್ಲ ಪಕ್ಷಪಾತ, ಗುಂಪುಗಾರಿಕೆ ಬೆಳೆಸಿ ಚುನಾವಣೆ ಸಮಯದಲ್ಲಿ ಎದುರಾಳಿ ನಾಯಕರನ್ನು ಖರೀದಿಸಿ ಚುನಾವಣೆ ಎದುರಿಸುವ ತಂತ್ರ ಸಫಲವಾಗಬೇಕಾದರೆ ಸ್ಥಳಿಯ ಅಭ್ಯರ್ಥಿಗಳನ್ನು ಬದಲಾಯಿಸಬೇಕು. ಪಕ್ಷದ ಪ್ರಮುಖರು ಈ ವಿಚಾರಗಳನ್ನು ಪಕ್ಷದ ಉನ್ನತ ಮಟ್ಟದ ಸಭೆಗಳಲ್ಲಿ ಪ್ರಸ್ಥಾ ಪಿಸಿ ಈ ವ್ಯವಸ್ಥೆ ಬದಲಾಯಿಸದಿದ್ದರೆ ನಮ್ಮ ಪಕ್ಷ, ನಾಯಕತ್ವಕ್ಕೆ ಉಳಿಗಾಲವಿಲ್ಲ ಎನ್ನುವ ಅಸಮಾಧಾನ ಸ್ಫೋಟಿಸುವ ಮೂಲಕ ಸಿದ್ದಾಪುರ ಬಿ.ಜೆ.ಪಿ ಪಕ್ಷದ ಪ್ರಮುಖ ಜನಪ್ರತಿನಿಧಿಗಳೊಂದಿಗೆ ಇಲ್ಲ ಎನ್ನುವುದನ್ನು ಸಾಬೀತುಮಾಡಿದೆ.

ಬಿ.ಜೆ.ಪಿ. ಪಕ್ಷದ ಈ ಅಂತ:ಕಲಹ:, ಬಂಡಾಯ ವಾಸ್ತವಿಕವಾಗಿ ಯಾರ ವಿರುದ್ಧ ಎನ್ನುವುದು ಬಿ.ಜಿ.ಪಿ. ನಾಯಕರಿಗೂ ತಿಳಿದಿದೆ. ಕಾರ್ಯಕರ್ತರಿಗೂ ಸ್ಪಷ್ಟವಿದೆ. ನಮ್ಮ ಓದುಗರು, ಜನಸಾಮಾನ್ಯರಿಗೆ ಈಗ ಎದ್ದಿರುವ ಯಾರು ಆ ನಾಯಕ? ಯಾವ ನಾಯಕರ ವಿರುದ್ಧ ಈ ಬಂಡಾಯ ಎನ್ನುವ ಪ್ರಶ್ನೆಗೆ ಉತ್ತರ ನಿಮ್ಮ ಊಹೆಗೆ ಬಿಟ್ಟಿದ್ದು?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *