ರಮಣೀಯ ನಿಸರ್ಗತಾಣ ಹೊನ್ನೆಮರಡು!

ಪ್ರಕೃತಿ,ಅರಣ್ಯ, ನೀರು ಇರುವ ಪ್ರದೇಶಗಳೆಂದರೆ ಪ್ರವಾಸಿಗರಿಗೆ ಮೆಚ್ಚಿನ ಸ್ಥಳ. ಪಿಕ್‌ ನಿಕ್‌, ಟೂರ್‌ ಹೋಗುವವರ ಆಯ್ಕೆ ಕೂಡಾ ನೈಸರ್ಗಿಕ ಆಕರ್ಷಣೆಗಳೇ ಹೆಚ್ಚಿರುವುದು ಸಾಮಾನ್ಯ. ಇಂಥ ಸ್ಥಳಗಳಲ್ಲಿ ಪ್ರವಾಸಿಗರು ಬಂದು ಅಲ್ಲಿಯ ವಾತಾವರಣ ಕಲುಷಿತ ಮಾಡುತ್ತಿರುವುದಕ್ಕೆ ನೂರಾರು ದೃಷ್ಟಾಂತಗಳು ದೊರೆಯುತ್ತವೆ.ಆದರೆ ನೀವಿಲ್ಲಿ ನೋಡುತ್ತಿರುವ ಹೊನ್ನೆಮರಡು ಇವಕ್ಕೆಲ್ಲಾ ಅಪವಾದ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಈ ಹಿನ್ನೀರಿನ ಪ್ರದೇಶ ವಾಸ್ತವದಲ್ಲಿ ಸ್ವರ್ಗ ಸದೃಶ ಎಂದರೆ ಉತ್ಪ್ರೇಕ್ಷೆಯಲ್ಲ. ಇಲ್ಲಿರುವ ಹಿನ್ನೀರು ಸೃಷ್ಟಿಸಿರುವ ಕಾಡುದ್ವೀಪಗಳು,ಹಿನ್ನೀರಿನ ಅಲೆಗಳ ಮೊರೆತ ಎಂಥವರಲ್ಲೂ ರಸಿಕತ್ವ, ಕವಿತ್ವವನ್ನು ಎಚ್ಚರಿಸದೆ ಇರದು.


ಇಷ್ಟು ನೈಸರ್ಗಿಕ, ಸುಂದರ,ರಮಣೀಯ ಪ್ರದೇಶವೆಂದರೆ ಇಲ್ಲಿ ಪ್ರವಾಸಿಗರ ದಂಡು ಸಾಮಾನ್ಯ, ಬೇರೆ ಪ್ರದೇಶಗಳಂತೆ ಇಲ್ಲಿಯೂ ಪ್ರವಾಸಿಗರ ಆಟಾಟೋಪ ಎಂದುಕೊಂಡರೆ ನಿಮ್ಮ  ಅಭಿಪ್ರಾಯ, ಪೂರ್ವಾಗ್ರಹ ತಪ್ಪು ಯಾಕೆಂದರೆ ಇಲ್ಲಿ ನೀವು ಪ್ಲಾಸ್ಟಿಕ್‌, ಗಾಜು ಇತರ ಮಲಿನ ವಸ್ತುಗಳನ್ನು ಕಾಣಲು ಸಾಧ್ಯವಿಲ್ಲ.
ಈ ಪ್ರಕೃತಿ ಸೊಬಗಿನಲ್ಲಿ ಭಾರತೀಯ ಸಾಹಸ ಸಮನ್ವಯ ಕೇಂದ್ರ ನಡೆಸುವ ದಂಪತಿಗಳು ಈ ಪ್ರದೇಶದಲ್ಲಿ ಪ್ರವಾಸಿಗರು ತೊಂದರೆ ಮಾಡದಂತೆ, ಮಾಲಿನ್ಯ ಮಾಡದಂತೆ ತಡೆದಿದ್ದಾರೆ.


ವರ್ಷದಲ್ಲಿ ಹಲವು ಬಾರಿ ಇಲ್ಲಿ ಜಲಸಾಹಸ ಕ್ರೀಡೆ,ನೆಲ-ಜಲಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಯೋಜಿಸುವ ಭಾರತೀಯ ಸಾಹಸ ಸಮನ್ವಯ ಕೇಂದ್ರ ಉಳಿದ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಆಟಾಟೋಪ ನಿಯಂತ್ರಿಸುತ್ತದೆ. ಹೊರ ಪ್ರದೇಶದಿಂದ ಬರುವವರು, ಸ್ಥಳಿಯರಿಗೆ ಇಲ್ಲಿಯ ಪ್ರಕೃತಿಯಲ್ಲಿ ಅನುಚಿತ ಕೆಲಸ, ನಡವಳಿಕೆ ನಡೆಸದಂತೆ ಎಚ್ಚರಿಕೆ ನೀಡುವ ಸಂಸ್ಥೆಯ ಸಿಬ್ಬಂದಿಗಳು ಈ ಪ್ರದೇಶವನ್ನು ಉತ್ತಮ ನಿಸರ್ಗವನ್ನಾಗಿ ಕಾಪಾ ಡಿಕೊಂಡು ಬಂದಿದೆ.


ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡುರಾಷ್ಟ್ರ, ಅಂತರಾಷ್ಟೀಯ ನಿಸರ್ಗ ಪ್ರೀಯರನ್ನು ಆಕರ್ಷಿಸುತ್ತಿದೆ. ಹೊರ ಪ್ರದೇಶದ ಪ್ರವಾಸಿಗರು ಈ ಸೊಬಗಿಗೆ ಮನಸೋತರೆ, ಸ್ಥಳೀಯರು ಇಲ್ಲಿಯ ಸಹಜತೆಗೆ ಬೆರಗಾಗುತ್ತಾರೆ. ಪ್ರವಾಸಿಗರಿಗೆ ಇದು ನೈಸರ್ಗಿಕ ಅದ್ಭುತವಾದರೆ ಇದನ್ನು ಸಹಜವಾಗಿ ಉಳಿಸಿದ ನೊಮಿಟೋ ಮತ್ತು ಸ್ವಾಮಿ ದಂಪತಿಗಳಿಗೆ ಇಲ್ಲಿಯ ಸರಳತೆ, ಸಹಜತೆಯ ನೈಸರ್ಗಿಕ ವಾತಾವರಣ ಕಾಯುವುದು ಬದ್ಧತೆ ಮತ್ತು ವೃತ.
ರಾಜ್ಯದ ಸುಂದರ ಪ್ರವಾಸಿ ತಾಣವನ್ನು ನೈಸರ್ಗಿಕವಾಗಿ ಉಳಿಸಿದ ಭಾರತೀಯ ಸಾಹಸ ಸಮನ್ವಯ ಕೇಂದ್ರಕ್ಕೆ ನೀವೂ ಕೂಡಾ ಧನ್ಯವಾದ ಹೇಳದೆ ಉಳಿಯಲಾರಿರಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *