ಅರಣ್ಯ ಅತಿಕ್ರಮಣದಾರನಿಂದ ಅರಣ್ಯ ಸಿಬ್ಬಂಯ ಮೇಲೆ ಹಲ್ಲೆ

ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್‌ ಬಾಳೆಕೈ ಬಿಳೇಗೋಡಿನ ಅರಣ್ಯ ಅತಿಕ್ರಮಣದಾರ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೊಲೆಪ್ರಯತ್ನ ನಡೆಸಿರುವ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಳೇಗೋಡಿನ ಮಾಬ್ಲೇಶ್ವರ ಚಂದು ಮರಾಠೆ ಉಪ ವಲಯ ಅರಣ್ಯ ಅಧಿಕಾರಿ ರಾಜೇಶ್‌ ಗೌಡ ರ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.

ದಿ : 17/11/2022 ರಂದು 12:30 ಗಂಟೆಗೆ ಶ ರಾಜೇಶ ತಂದೆ ಮಂಜುನಾಥ ಗೌಡ , ಪ್ರಾಯ : 29 ವರ್ಷ , ಉದ್ಯೋಗ : ಅರಣ್ಯ ರಕ್ಷಕ ( ಫಾರಸ್ಥ ಗಾರ್ಡ ) , ಸಾ|| ಕಾನಗೋಡ , ಹೊನ್ನಾವರ ಹಾಲಿ ಕಾನಸೂರ , ತಾ : ಸಿದ್ದಾಪುರ , ಇವರು ಠಾಣಿಗೆ ಹಾಜರಾಗಿ , ಈ ದಿನ ಬೆಳಗ್ಗೆ ತಾನು , ಉಪ ವಲಯ ಅರಣ್ಯಾಧಿಕಾರಿಗಳಾದ ವಿಶ್ವನಾಥ ತಿಮ್ಮಪ್ಪ ನಾಯ್ಕ , ಗಾರ್ಡ ಮಣಿಕಂಠ , ಗಾರ್ಡ ರೋಹಿತ ನಾಯ್ಕ ಹಾಗೂ ವಾಚರ್ ಗೋಪಾಲ ನಾಯ್ಕ ರವರು ಸೇರಿಕೊಂಡು ಕಾನಸೂರು ಭಾಗದ ಅರಣ್ಯದಲ್ಲಿ ಗಸ್ತು ಕರ್ತವ್ಯಕ್ಕೆ ಹೋಗಿದ್ದಾಗ ಸಿದ್ದಾಪುರ ತಾಲೂಕಿನ ಬಾಳಕೈ ಗ್ರಾಮದ ಬಿಳೆಗೋಡ ಊರಿನ ಮಬ್ಲೆಶ್ವರ ಚಂದು ಮರಾಠಿ ಈತನು ಅವನ ಮಾಲ್ಕಿ ಜಾಗದ ಪಕ್ಷದಲ್ಲಿರುವ ಅರಣ್ಯ ಸರ್ವೆ ನಂ 25 ರಲ್ಲಿ ಅರಣ್ಯ ಅತಿಕ್ರಮಣ ಮಾಡಿ ಹೊಸ ಶೆಡ್ ನಿರ್ಮಿಸಿಕೊಂಡಿದ್ದನ್ನು ನೋಡಿ ಅತಿಕ್ರಮಣ ಮಾಡುವದು ತಪ್ಪು ಹೊಸ ಅತಿಕ್ರಮಣಕ್ಕೆ ಅವಕಾಶ ಇಲ್ಲ . ನೀನು ನಿನ್ನ ಮಾಲ್ಕಿ ಜಾಗದಲ್ಲಿ ಮನೆ ಕಟ್ಟಕೊ ಅಂತಾ ಹೇಳಿದಾಗ ಆತನು ಸಿಬ್ಬಂದಿಗಳ ಸಲಹೆಗೆ ಕಿಮ್ಮತ್ತು ಕೊಡದೆ ಏಕಾಏಕಿ ಸಿಟ್ಟಾದವನು ಫಾರೆಸ್ಥ ಮಕ್ಕಳಾ ನಿಮ್ಮದು ಬಹಳಾ ಆಯ್ತು , ನಿಮ್ಮಲ್ಲ ಒಬ್ಬರನ್ನು ತೆಗೆದರೆ ಇನ್ನು ಮುಂದೆ ಫಾರೆಸ್ಸಿನ ಮತ್ಯಾರೂ ನಮ್ಮ ಸುದ್ದಿಗೆ ಬರೋದಿಲ್ಲ . ನೀವು ಇಲ್ಲಂದ ಹೇಗೆ ಜೀವಂತ ವಾಪಸ್ ಹೋಗುತ್ತಿರಿ ಅಂತಾ ನೋಡುತ್ತೇನೆ . ನಿಮ್ಮನ್ನು ಕೊಂದೇ ಹಾಕುತ್ತೇನೆ ಅಂತಾ ಹೇಳದವನೇ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅವರ ಮೇಲೆ ಎರಗಿ ಅವನ ಕೈಯಲ್ಲಿದ್ದ ಕತ್ತಿಯನ್ನು ವಿಶ್ವನಾಥ ರವರ ಕುತ್ತಿಗೆಯನ್ನು ಕಡಿಯಲು ಬೀಸಿದ್ದು ತಪ್ಪಿಸಿಕೊಳ್ಳಲು ಅವರು ಬಲಗೈಯನ್ನು ಅಡ್ಡತಂದಿದ್ದರಿಂದ ಹತ್ತಿಯ ಏಟು ಬಲಗೈನ ಬೆರಳಿಗೆ ಅದ್ದು ಗಂಭೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ .

ಆನಂತರ ಅವನು ನನ್ನ ಮೇಲೆಯೂ ಎರಗಿ ಸೂಳೇ ಮಗನೇ ನಿನಗೂ ಬಿಡುವುದಿಲ್ಲ ಅಂತಾ ಹೇಳಿ ಕತ್ತಿಯಿಂದ ಕಡಿಯಲು ಬಂದಾಗ ನಾನು ಕೈಯನ್ನು ಅಡ್ಡ ಮಾಡಿದ್ದರಿಂದ ಕತ್ತಿ ನನ್ನ ಎಡಕೈಬೆರಳಿಗೆ ತಾಗಿ ರಕ್ತ ಗಾಯವಾಗಿರುತ್ತದೆ . ಅಷ್ಟರಲ್ಲ ನಮ್ಮೊಂದಿಗಿದ್ದ ಉಳಿದ ಸಿಬ್ಬಂದಿಗಳು ಮುಂದೆ ಬಂದು ಬಿಡಿಸಿಕೊಂಡಿದ್ದು , ಆಗ ಅವನು ಸೂಳೇ ಮಕ್ಕಳ ಧಮ್ ಇದ್ದರೆ ಇನ್ನೊಮ್ಮೆ ನನ್ನ ಜಾಗಕ್ಕೆ ಕಾಲಟ್ಟು ನೋಡಿ ನಿಮ್ಮನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡತರ ಮಾಡಿರುತ್ತಾನೆ . ಘಟನೆ ಆದಾಗ ಬೆಳಗ್ಗೆ 09:15 ಗಂಟೆ ಆಗಿತ್ತು ಈ ಬಗ್ಗ ಮಬ್ಲೆಶ್ವರ ತಂದೆ ಚಂದು ಮರಾಠಿ ಈತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *