

ಮೇ ೪ ರಂದು ಶಿರಸಿ,ಸಿದ್ಧಾಪುರಗಳಲ್ಲಿ ನಡೆಯಬೇಕಿದ್ದ ಶಿವರಾಜ್ ಕುಮಾರ್ ರೋಡ್ ಶೋ ಮೆರವಣಿಗೆಯನ್ನು ಮೇ ೫ ರ ಶುಕ್ರವಾರಕ್ಕೆ ಮುಂದೂಡಲಾಗಿದೆ. ಕನ್ನಡ ಚಿತ್ರರಂಗದ ಎವ್ವರ್ ಗ್ರೀನ್ ಹೀರೋ ಡಾ. ಶಿವರಾಜ್ ಕುಮಾರ ಮೇ ೫ ರ ಶುಕ್ರವಾರ ಬೆಳಿಗ್ಗೆ ಸಿದ್ಧಾಪುರ ಮತ್ತು ಅಪರಾನ್ಹ ಶಿರಸಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ತಮ್ಮ ನೆಚ್ಚಿನ ಹೀರೋ ಶಿವರಾಜ್ ಕುಮಾರರನ್ನು ತಮ್ಮ ಊರು, ಮನೆಯಂಗಳದಲ್ಲೇ ಕಣ್ತುಂಬಿಕೊಳ್ಳಲು ಕಾತರರಾಗಿರುವ ಅಭಿಮಾನಿಗಳುಈ ತಿಂಗಳ ಪ್ರಾರಂಭದಿಂದಲೇ ಶಿವರಾಜ್ ಕುಮಾರ್ ರೋಡ್ ಶೋ ನಿರೀಕ್ಷೆಯಲ್ಲಿದ್ದರು.

ಶಿರಸಿ-ಸಿದ್ಧಾಪುರ, ವರುಣಾ ಮತ್ತು ಸೊರಬಾ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರಗಳ ಶಿವರಾಜ್ ಕುಮಾರ ರೋಡ್ ಶೋ ಪೂರ್ವನಿರ್ಧರಿತವಾಗಿರಲಿಲ್ಲ. ಮೇ ೧ ರಂದೇ ಶಿರಸಿ-ಸಿದ್ಧಾಪುರಕ್ಕೆ ಬರಬೇಕಿದ್ದ ಶಿವರಾಜ್ ಕೊನೆಗೂ ಮೇ ೫ ರ ಶುಕ್ರವಾರ ರೋಡ್ ಶೋ ನಡೆಸಲಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






