ಯಲ್ಲಾಪುರ,ಬಿ.ಜೆ.ಪಿ. ಮಣಿಸಲು ಹರಸಾಹಸ ಹೆಬ್ಬಾರ್‌ ವಿರುದ್ಧ ಅರ್ಧಡಜನ್‌ ಅಭ್ಯರ್ಥಿಗಳು!

ಬುಡಕಟ್ಟುಗಳು,ಲಿಂಗಾಯತರು,ಹವ್ಯಕ ಬ್ರಾಹ್ಮಣರು,ನಾಮಧಾರಿಗಳು ಜೊತೆಗೆ ಸಕಲ ಜಾತಿ, ಜನವರ್ಗಗಳ ಮತದಾರರಿರುವ ಯಲ್ಲಾಪುರ ಕ್ಷೇತ್ರ ಮೂರು ತಾಲೂಕುಗಳನ್ನೊಳಗೊಂಡ ವಿಶಿಷ್ಟ ಕ್ಷೇತ್ರ.ಐತಿಹಾಸಿಕ ಬನವಾಸಿ ಹೋಬಳಿ ಶಿರಸಿ ಕ್ಷೇತ್ರದಲ್ಲಿದ್ದಾಗ ಬಂಗಾರಪ್ಪ ಕೈ ತೋರಿಸಿದವರು ಗೆಲ್ಲುತ್ತಾರೆ ಎನ್ನುವ ಪ್ರತೀತಿ ಈ ಬನವಾಸಿ ಕೇಂದ್ರಿತ ಶಿರಸಿ ಕ್ಷೇತ್ರದಲ್ಲಿತ್ತು. ಆದರೆ ಉಪಾಯಗಾರ ಕಾಗೇರಿ ವಿಶ್ವೇಶ್ವರ ಹೆಗಡೆ ಬನವಾಸಿ ಹೋಬಳಿಯನ್ನು ಶಿರಸಿ ಕ್ಷೇತ್ರದಿಂದ ಸರಿಸಿ ಯಲ್ಲಾಪುರಕ್ಕೆ ಜೋಡಿಸುವ ಮೂಲಕ ತನಗೆ ಗೆಲುವು ಒಲಿಯುವಂತೆ ಮಾಡಿಕೊಂಡ ಮೇಲೆ ಪಕ್ಕಾ ಬಯಲುಸೀಮೆಯ ಮುಂಡಗೋಡಿನೊಂದಿಗೆ ಬನವಾಸಿ ಸೇರಿ ಶಿರಸಿ ಮತ್ತು ಯಲ್ಲಾಪುರದ ರಾಜಕೀಯ ಚಿತ್ರಣವೇ ಬದಲಾದದ್ದು ರಾಜಕೀಯ ತಂತ್ರ ಅಥವಾ ಕುತಂತ್ರದ ಫಲ ಎಂದರೆ ತಪ್ಪಿಲ್ಲ.

ಮುಂಡಗೋಡು ಹಳಿಯಾಳ, ಯಲ್ಲಾಪುರ ಸೇರಿ ಮುಂಡಗೋಡ ಕ್ಷೇತ್ರವಾಗಿದ್ದ ಈಗಿನ ಯಲ್ಲಾಪುರ ದೇಶಪಾಂಡೆಯವರ ಹಿಡಿತವಿದ್ದ ಕ್ಷೇತ್ರವಾಗಿತ್ತು. ಪಕ್ಷ, ರಾಜಕೀಯ,ಜಾತಿ ಮೇಲಾಟಗಳಲ್ಲಿ ದೇಶಪಾಂಡೆಯವರನ್ನು ಮಣಿಸಲು ಹೆಣಗುತ್ತಿರುವ ಶಿವರಾಮ ಹೆಬ್ಬಾರ್‌ ಈ ಕ್ಷೇತ್ರದ ಪ್ರಮುಖ ನಾಯಕನಾಗಿರುವುದು ಈಗಿನ ವಿಶೇಶ.

ಇದೇ ಯಲ್ಲಾಪುರ ಕ್ಷೇತ್ರದಿಂದ ಎರಡು ಅವಧಿಗೆ ನಿರಂತರ ಮೂರು ಬಾರಿ ಆಯ್ಕೆಯಾಗಿರುವ ಶಿವರಾಮ ಹೆಬ್ಬಾರ್‌ ಮೊದಲೆರಡು ಬಾರಿ ಕಾಂಗ್ರೆಸ್‌ ನಿಂದ ಆಯ್ಕೆಯಾಗಿದ್ದರೆ ಉಪಚುನಾವಣೆಯಲ್ಲಿ ಬಿ.ಜೆ.ಪಿ.ಯಿಂದ ಗೆದ್ದು ಆ ಕ್ಷೇತ್ರದ ಸಾಂಪ್ರದಾಯಿಕ ಬಿ.ಜೆ.ಪಿ. ಹುರಿಯಾಳಾಗುತಿದ್ದ  ವಿ.ಎಸ್.ಪಾಟೀಲರ ವಿರುದ್ಧ ಕಾಂಗ್ರೆಸ್‌ ಜೊತೆ ಹೋರಾಟಮಾಡಬೇಕಾಗಿರುವುದು ಈ ಚುನಾವಣೆಯ ವಿಶೇಶ.

ಕಾಂಗ್ರೆಸ್‌ ನಿಂದ ಆಪರೇಶನ್‌ ಕಮಲಕ್ಕೊಳಗಾಗಿ ಬಿ.ಜೆ.ಪಿ. ಸೇರಿದ ಶಿವರಾಮ ಹೆಬ್ಬಾರ್‌ ಈ ಕ್ಷೇತ್ರದಲ್ಲಿ ೫ ವರ್ಷದ ಅವಧಿಯಲ್ಲಿ ಬಿ.ಜೆ.ಪಿ. ಯಿಂದ ಎರಡನೇ ಚುನಾವಣೆ ಎದುರಿಸುತಿದ್ದಾರೆ. ಮೊದಲ ಚುನಾವಣೆಯಲ್ಲಿ ಅಂದಿನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ರನ್ನು ೩೦ ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಪರಾಭವಗೊಳಿಸಿದ್ದ ಶಿವರಾಮ ಹೆಬ್ಬಾರ್‌ ರಿಗೆ ಆಗ ಬಿ.ಜೆ.ಪಿ. ಸರ್ಕಾರದ ಅಭಯವಿತ್ತು. ಬಿ.ಜೆ.ಪಿ. ಯಿಂದ ಉಪಚುನಾವಣೆಯಲ್ಲಿ ಗೆದ್ದು ಸಾವಿರಾರು ಕೋಟಿ ರೂಪಾಯಿಗಳ ಕೆಲಸ, ವೈಯಕ್ತಿಕ ಸಂಪತ್ತು ಪೇರಿಸಿಕೊಂಡಿರುವ ಹೆಬ್ಬಾರ್‌ ಹಣ ಬಲದ ಮುಂದೆ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.‌ ಪಾಟೀಲ್‌ ಅಥವಾ ಜಾತ್ಯಾತೀತ ಜನತಾದಳದ ನಾಗೇಶ್‌ ನಾಯ್ಕ ಲೆಕ್ಕಕ್ಕಿಲ್ಲ.

 ಆದರೆ ಜಾತಿ ಬಲ, ವಿದ್ಯೆ, ವಿನಯಗಳಿಂದ ಪರಸ್ಫರ ಪೂರಕ ಅಭ್ಯರ್ಥಿಗಳಂತಿರುವ ಈ ಇಬ್ಬರು ಈ ಕ್ಷೇತ್ರದ ಪ್ರಮುಖ ಲಿಂಗಾಯತ ಮತ್ತು ನಾಮಧಾರಿ ಸಮಾಜಗಳ ಪ್ರತಿನಿಧಿಗಳಾದರೆ ಹೆಬ್ಬಾರ್‌ ಈ ಕ್ಷೇತ್ರದ ಇನ್ನೊಂದು ಪ್ರಮುಖ ಸಮೂದಾಯ ಹವ್ಯಕ ಬ್ರಾಹ್ಮಣರನ್ನು ಪ್ರತಿನಿಧಿಸುತ್ತಾರೆ.

ವಿದ್ಯಾವಂತರಲ್ಲದ ಹೆಬ್ಬಾರ್ ಕೆಳಮಟ್ಟದಿಂದ ಒಂದೊಂದೇ ಹಂತ ಏರುತ್ತಾ ಜಿಲ್ಲೆಯ ಪ್ರಮುಖ ರಾಜಕಾರಣಿಯಾಗಿ ಅವತರಿಸಿರುವ ಅವರ ರಾಜಕೀಯ ಬದುಕಿನಲ್ಲಿ ಸಾಧನೆಯ ಮೈಲುಗಲ್ಲುಗಳ ಜೊತೆಗೆ ಕರಾಳ ಚರಿತ್ರೆಯೂ ಇದೆ.

ಮೂಲತ: ಅರಣ್ಯ ಗುತ್ತಿಗೆದಾರ,ನಂತರ ರಾಜಕೀಯ ಧುರೀಣ ಕೆಲವು ಸಮಯದ ರಾಜಕೀಯದ ನಡುವೆ ಅದಿರು ಉದ್ಯಮಿ, ನಂತರ ಶಾಸಕ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಅನುಭವ ಪಡೆದಿರುವ ಹೆಬ್ಬಾರ್‌ ರಾಜಕಾರಣದ ಹಿಂದಿನ ಶಕ್ತಿ ಅವರ ಜಾತಿ ಮತ್ತು ಹಣಬಲ. ಈ ಹಿಂದಿನ ಅವಧಿಯ ಸರ್ಕಾರ ಹಾಗೂ ಈ ಅವಧಿಗಳಲ್ಲಿ ಸರ್ಕಾರಿ ಅನುದಾನ ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆಂದುಕೊಳ್ಳುವ ಹೆಬ್ಬಾರ್‌ ಈ ಕ್ಷೇತ್ರಕ್ಕೆ ಅವಶ್ಯವಾಗಿದ್ದ ನೀರಾವರಿ, ರಸ್ತೆ ವ್ಯವಸ್ಥೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಣದ ಥೈಲಿ ತುಂಬಿಕೊಂಡಿರುವ ಹೆಬ್ಬಾರ್‌ ವಿರುದ್ಧ ಸ್ಫರ್ಧೆ ಮಾಡುವವರು ಒಂದಲ್ಲ ಎರಡು ಸಾರಿ ಯೋಚಿಸಿ ಹೆಜ್ಜೆ ಇಡುವ ಸಂದರ್ಭ ಆದರೆ ಇವರ ಎದುರಾಳಿಗಳಾದ ಡಾ.ನಾಗೇಶ್‌  ನಾಯ್ಕಹಾಗೂ ವಿ.ಎಸ್.‌ ಪಾಟೀಲ್‌ ಹೆಬ್ಬಾರ್‌ ರ ಹಣಬಲದೆದುರು ಜನಬಲದಿಂದ ಸೆಡ್ಡುಹೊಡೆದಿದ್ದಾರೆ.

ಯಲ್ಲಾಪುರದಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ ಜ್ವಲಂತ. ಬುಡಕಟ್ಟುಗಳಾದ ಸಿದ್ಧಿಗಳು,ಗೌಳಿಗಳು ಒಕ್ಕಲಿಗರು ಇತರ ಹಿಂದುಳಿದವರು, ಅಲ್ಪಸಂಖ್ಯಾತರೆಲ್ಲಾ ಸೇರಿ95 ಸಾವಿರಕ್ಕಿಂತ ಹೆಚ್ಚು ಅಹಿಂದ ಮತದಾರರಿದ್ದಾರೆ.ಈ ಅಹಿಂದ ಮತದಾರರನ್ನು ಯಾವಾಗಲೂ ಯಾರೂ ಕೇಳುವವರಿಲ್ಲ. ಯಾಕೆಂದರೆ ರಾಮಕೃಷ್ಣ ಹೆಗಡೆಯವರೊಂದಿಗೆ ದೇಶಪಾಂಡೆ,ಹೆಬ್ಬಾರ್‌, ವಿ.ಎಸ್.ಪಾಟೀಲ್‌ ಈ ವರೆಗೆ ಈ ಕ್ಷೇತ್ರ ಪ್ರತಿನಿಧಿಸಿದವರ್ಯಾರೂ ಕೆಳವರ್ಗದವರಲ್ಲ. ನಾಮಕಾವಾಸ್ಥೆ ವಿಧಾನ ಪರಿಷತ್‌ ಸದಸ್ಯರಾಗಿರುವ ಶಾಂತರಾಮ ಸಿದ್ಧಿ ಬಿಟ್ಟರೆ ಈ ಕ್ಷೇತ್ರದಲ್ಲಿ ಸರ್ಕಾರದ ನೇರ, ಪರೋಕ್ಷ ಫಲಾನುಭವಿಗಳೆಲ್ಲಾ ಮೇಲ್ವರ್ಗದವರೆ.

 ಇಂಥ ಕೆಳವರ್ಗದ ತಬ್ಬಲಿಗಳ ಕ್ಷೇತ್ರದಲ್ಲಿ ಜಾತಿ, ಧರ್ಮ, ಹಣ,ಬಾಹುಬಲಗಳನ್ನೆಲ್ಲಾ ಬಳಸಿ ಚುನಾವಣೆ ಗೆಲ್ಲುವ ಮೇಲ್ವರ್ಗದ ಜನ ಚುನಾವಣೆ ನಂತರ ಉಳಿದವರನ್ನು ಹಿಂದೂ ಮಾಡುವ ಜಾಣತನ ಈ ಕ್ಷೇತ್ರದಲ್ಲೂ ಮಾಮೂಲೇ. ಹಾಗಾಗಿ ಹೆಬ್ಬಾರ್‌ ಎದುರು ವಿ.ಎಸ್.‌ ಪಾಟೀಲ್‌ ಮತ್ತು ಡಾ.ನಾಗೇಶ್‌ ನಾಯ್ಕರಿಗೆ ಅಹಿಂದ ಮತಗಳನ್ನು ಬಾಚುವ ಅವಕಾಶ ಹೆಚ್ಚಿದೆ. ಈ ವಿದ್ಯಮಾನಗಳ ನಡುವೆ ಹೆಬ್ಬಾರರ ಹಣಬಲದ ಎದುರುಉಳಿದವರು ಸಪ್ಪೆಎನಿಸಿದರೂ ಕಾಂಗ್ರೆಸ್‌ ಗಾಳಿ,ವಿ.ಎಸ್‌, ಪಾಟೀಲ್‌ ಮತ್ತು ಡಾ. ನಾಗೇಶ್‌ ನಾಯ್ಕರಿಗೆ ಇರುವ ಕ್ಲೀನ್‌ ಇಮೇಜ್‌ ಹೆಬ್ಬಾರರಿಗೆ ಗೆಲುವು ಸುಲಭದ ತುತ್ತಾಗಲು ಬಿಡಲಾರವು.

ಬ್ರಷ್ಟತನ,ಕೊಲೆ ಆರೋಪ,ಅಕ್ರಮಗಳಿಕೆ ಹೀಗೆ ರಾಜಕೀಯದ ಯಾವ ಕೋನದಿಂದಲೂ ಹೆಬ್ಬಾರ್‌ ಉತ್ತಮ ಅಭ್ಯರ್ಥಿಯಲ್ಲ ಆದರೆ ಅವರಿಗಿರುವ ಜಾತಿ ಬಲ ಮತ್ತು ಹಣ ಎಲ್ಲವನ್ನೂ ಮುಚ್ಚಿಹಾಕಿದೆ. ಹೆಬ್ಬಾರ್‌ ವಿರುದ್ಧ ಮಾಜಿ ಶಾಸಕ ವಿ.ಎಸ್.‌ ಪಾಟೀಲ್‌,ಜೆ.ಡಿ.ಎಸ್.ನ ನಾಗೇಶ್‌ ನಾಯ್ಕ ತಮ್ಮ ನಿಷ್ಕಳಂಕಿತ ವ್ಯಕ್ತಿತ್ವ,ಪಕ್ಷಗಳ ಬಲ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆ.ಡಿ.ಎಸ ಅಭ್ಯರ್ಥಿಗಳಿಗೆ ಜಾತಿ ಬಲದ ಮತಗಳ ನಿರೀಕ್ಷೆಗಳಾದರೂ ಇವೆ ಆದರೆ ಉಳಿದ ಪಕ್ಷಗಳಿಂದ ಅಭ್ಯರ್ಥಿಗಳಾಗಿರುವ ಮೂರ್ನಾಲ್ಕು ಜನರಿಗೆ ಇಂಥ ಯಾವ ಭರವಸೆಗಳೂ ಇಲ್ಲ. ಪ್ರಮುಖ ಪಕ್ಷಗಳಿಗೆ ಅವುಗಳ,ಸಿಂಬಾಲ್‌, ಪಾರ್ಟಿ ಫಂಡಗಳ ಕನ್ನಡಿಯೊಳಗಿನ ಗಂಟಿನ ನಿರೀಕ್ಷೆಗಳಾದರೂ ಇವೆ. ಉಳಿದ ಅಭ್ಯ ರ್ಥಿಗಳು ಚುನಾವಣಾ ಚಟ ಅಥವಾ ಹೆಬ್ಬಾರ್‌ ರಿಂದ ದಕ್ಕಬಹುದಾದ ಹಣದ ಆಸೆಗೆ ನಾಮಿನೇಷನ್‌ ಮಾಡಿರುವಂತಿದೆ.

ಯಲ್ಲಾಪುರ ಕ್ಷೇತ್ರಕ್ಕೆ ಅನುದಾನದ ರುಚಿ ತೋರಿಸಿ ಹಣ ಮಾಡಿಕೊಂಡಿರುವ ಹೆಬ್ಬಾರ್‌ ಮುಖಂಡರು,ಮತದಾರರು ಕೆಲವು ನಾಮಕಾವಾಸ್ಥೆ ಅಭ್ಯರ್ಥಿಗಳಿಗೆ ಕಾಂಚಾಣದ ರುಚಿ ತೋರಿಸಿ ಚುನಾವಣೆ ಗೆದ್ದೇ ಬಿಟ್ಟರು ಎನ್ನುವ ವೈದಿಕ ಮಾಧ್ಯಮ ಇದರಿಂದ ಹೆಬ್ಬಾರ್‌ ರಿಗೆ ದಕ್ಕಬಹುದಾದ ಮತಗಳ ಪ್ರಮಾಣದ ಹೆಚ್ಚಳಕ್ಕೆ ಮಾಡಿರುವ ತಂತ್ರವಾಗಿ ಗೋಚರಿಸುತ್ತದೆ.

ಇಂಥ ತಂತ್ರ-ಮಂತ್ರಗಳಿಂದ ಗೆಲ್ಲಬಹುದು ಎಂದುಕೊಂಡಿರುವ ಹೆಬ್ಬಾರ್‌ ರಿಗೆ ಕಾಂಗ್ರೆಸ್‌ ಗಾಳಿ ಅವರ ಅಭ್ಯರ್ಥಿ ಪರ ಕೆಲಸ ಮಾಡದು ಎನ್ನುವುದು ನಂಬಿಕೆ. ಈ ನಂಬಿಕೆ ಹುಸಿಯಾದರೆ ಹೆಬ್ಬಾರ್‌ ವಿರೋಧಿಗಳಾದ ದೇಶಪಾಂಡೆ ಮತ್ತು ಸಾಯಿಗಾಂವ್ಕರ್‌ ನೇತೃತ್ವದ ಭೀಮಣ್ಣ ರ ಡಿ.ಸಿ.ಸಿ. ತಂಡಕ್ಕೆ ಸಮಾಧಾನ ಇದಾಗದಿದ್ದರೆ ಹೆಬ್ಬಾರ್‌ ಮತ್ತೆ ಅಲ್ಪಾಂತರದಿಂದ ಗೆಲ್ಲಬಹುದು. ಆದರೆ ಬಿ.ಜೆ.ಪಿ.ಗಿರುವ ವಿರೋಧ ಹೆಬ್ಬಾರ್‌ ರ ನಿರಂತರ ಗೆಲುವಿಗೆ ಅಡ್ಡಿ ಮಾಡಬಹುದು ಎನ್ನುವ ಸಾಧ್ಯತೆ ಹೆಬ್ಬಾರ್‌ ರನ್ನು ಹೆದರಿಸಿದೆಯಂತೆ! ಒಟ್ಟಾರೆ ಹೆಬ್ಬಾರ್‌ ಸುತ್ತ ಸುತ್ತುತ್ತಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಹೆಬ್ಬಾರ್‌ ತಪ್ಪಿದರೆ ಪಾಟೀಲ್‌ ಎನ್ನುವವರೆಗೆ ಬಂದು ನಿಂತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *