ಭಟ್ಟರ ಮಂತ್ರಕ್ಕೆ ಸಿದ್ಧರಾಮಯ್ಯನವರೂ ಉದುರಿ ಬಿದ್ದರೆ….!?

ವಿಶ್ವೇಶ್ವರ ಭಟ್ಟರ ವಿಶ್ವಾಸಕ್ಕೆ ಪಾತ್ರರಾಗಿ ವಿಲನ್‌ ಗಳಾದ ಕನ್ನಡದ ಅನೇಕ ಪ್ರಮುಖರ ಪಟ್ಟಿಯೇ ಇದೆ. ಇತ್ತೀಚೆಗೆ ಭಟ್ಟರ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಹೋಗಲಿದ್ದಾರೆ ಎನ್ನುವ ವಿಚಾರ ಬಹುಚರ್ಚೆಯ ವಿಷಯವಾಗಿದೆ.

ವಿಶ್ವೇ ಶ್ವರ ಭಟ್ಟರು ಮನುವಾದಿಗಳು ಎನ್ನುವ ವಿಚಾರದಲ್ಲಿ ಎರಡು ಮಾತುಗಳಿಲ್ಲ. ಅವರ ಹಿನ್ನೆಲೆ, ಅವರು ಬೆಳೆದು ಬಂದ ಪರಿಸರ, ಅವರ ಒಡನಾಟ ಇವೆಲ್ಲವುಗಳಿಗಿಂತ ಹೆಚ್ಚಾಗಿ ಭಟ್ಟರು ಬಿ.ಜೆ.ಪಿ. ಭಟರಾಗಿ ಬಹುಸಂಖ್ಯಾತರ ಭಾವನೆ,ಧೋರಣೆಗಳಿಗೆ ವಿರುದ್ಧವಾಗಿದ್ದರು ಎನ್ನುವುದು ಇಶ್ಯು.

ನಮ್ಮ ಪ್ರಗತಿ ಪರ ಸ್ನೇಹಿತರೆಲ್ಲಾ ಭಟ್ಟರ ಸ್ನೇಹಿತರನ್ನು ಸೈದ್ಧಾಂತಿಕ ಹಿನ್ನೆಲೆಯಿಂದ ಮಾತ್ರ ವಿಮರ್ಶಿಸಿದರೆ, ವಿರೋಧಿಸಿದರೆ ಅದನ್ನು ತಪ್ಪು ಎಂದು ಹೇಳಲಾದೀತೆ? ಅದೇನೇ ಇರಲಿ, ಮೊನ್ನೆ ಕೃಷ್ಣಪ್ರಸಾದ ಬರೆದ ಪ್ರಜಾವಾಣಿಯ ಅಂಕಣ ಈ ಭಟ್ಟರ ಪರಿವಾರ ಕನ್ನಡಿಗರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುವುದನ್ನು ಒಪ್ಪುವ,ಬೆಂಬಲಿಸುವ ಕೆಲವೇ ಬರಹಗಾರರಲ್ಲಿ ನಾನೂ ಒಬ್ಬ.

ವಿಚಾರ ಏನಪ್ಪಾ ಅಂದ್ರೆ ನಮ್ಮ ಭಾಗದ ಹೋರಿ ಸ್ವಾಮಿ ತನ್ನ ಘನ ಕಾರ್ಯಕ್ಕೆ ಬಂಧನಕ್ಕೊಳಗಾಗಬೇಕಿದ್ದ ಸಮಯದಲ್ಲಿ ಈ ಭಾರತೀಯ ಬಹುಜನವಿರೋಧಿ ಪರಿವಾರದ ಮನುವಾದಿಗಳು ಸಿದ್ಧರಾಮಯ್ಯನವರೊಂದಿಗೆ ಸಲುಗೆ ಬಳಸಿ ಹೋರಿ ಸ್ವಾಮಿಯನ್ನು ಬಚಾವು ಮಾಡಿಸಿದರು! ಎನ್ನುವುದು.

ಹೋರಿ ಸ್ವಾಮಿಯಿರಲಿ, ತಿರುಪತಿ, ಕಾಂಚಿ, ಕಾಮಕೋಟಿ,ಪೇಜಾವರ ಯಾರೂ ಈ ನೆಲದ ಕಾನೂನಿಗೆ ಅತೀತರಲ್ಲ. ಇವರನ್ನು ಸಿದ್ಧರಾಮಯ್ಯನವರಂಥ ಸಮಾಜವಾದಿ ರಕ್ಷಿಸಿದರು ಎನ್ನುವುದು ನಂಬಲರ್ಹ ಸುದ್ದಿಯೂ ಅಲ್ಲ. ಆದರೆ ಅದಕ್ಕೆ ದಾಖಲೆಗಳಿವೆ. ಸಿದ್ಧರಾಮಯ್ಯ ಯಾವ ಜಾತಿ, ಧರ್ಮ,ಮತಗಳ ಸಂಕುಚಿತತೆಗೆ ಸಿಲುಕದ ಸಿಡುಕಿನ ಸಮಾಜವಾದಿ. ಅಂಥವರನ್ನು ಮನುವಾದಿಗಳು ಬಳಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಮನುವಾದಿಗಳ ಸಮಯಸಾಧಕತನ,ಹಿಪೊಕ್ರಶಿ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಿದ್ಧರಾಮಯ್ಯನವರ ಹೃದಯವೈಶಾಲ್ಯ,ಉದಾರತೆ ಕೂಡಾ ಎನ್ನಬಹುದು! ಆದರೆ ಈಗ ರಾಜ್ಯದ ರಾಜಕೀಯ ವಿದ್ಯಮಾನ, ಅವಕಾಶ, ಅಧಿಕಾರಗಳ ಹಿನ್ನೆಲೆಯೊಂದಿಗೆ ಚರ್ಚಿಸುವುದಾದರೆ ಈ ನೆಲಮೂಲದ ಭಾರತೀಯ ಬಹುಸಂಖ್ಯಾತರ ಶೋಷಕರು, ವಿರೋಧಿಗಳಾದ ಮನುವಾದಿಗಳು ರಾಜ್ಯಮಟ್ಟದಲ್ಲಿ ಈಡಿಗರು ಸೇರಿದಂತೆ ಎಲ್ಲಾ ಅಹಿಂದ್ ಗಳನ್ನು ಹುಡುಹುಡುಕಿ ವಿರೋಧ, ವಿಮರ್ಶೆ, ಟೀಕೆ ಮಾಡುವ ಸಂದರ್ಭದಲ್ಲಿ ಮತಾಂಧ ಮೋದಿ ಪರಿವಾರದ ಆಪ್ತರಾದ ಈ ಗುಂಪನ್ನು ಸಿದ್ಧರಾಮಯ್ಯ ಬೆಂಬಲಿಸುವ ಮೂಲಕ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ಮನುವಾದಿಗಳು ಅಹಿಂದ್‌ ವಿರೋಧಿಗಳು ಅವರು ಹರಿಪ್ರಸಾದ್‌ ರಂಥ ಸೈದ್ದಾಂತಿಕ ಬದ್ದತೆಯ ಕಟ್ಟರ್‌ ಕಾಂಗ್ರೆಸ್ಸಿಗರನ್ನು ವಿರೋಧಿಸುವ ಸಂದರ್ಭದಲ್ಲಿ ಅವರ ವಿರೋಧ ಕಾಂಗ್ರೆಸ್‌ ಮತ್ತು ಸೋನಿಯಾ, ರಾಹುಲ್‌ ರತ್ತ ಎನ್ನುವುದು ಸ್ಪಸ್ಟ. ಸಿದ್ಧರಾಮಯ್ಯ ಮನುವಾದಿಗಳನ್ನು ಓಲೈಸುತ್ತಾ, ಹೋರಿಸ್ವಾಮಿಯಂಥವರನ್ನು ರಕ್ಷಿಸುತ್ತಾ ಯಾವ ಕಾಂಗ್ರೆಸ್‌, ಜಾತ್ಯಾತೀತತೆ ಕಟ್ಟಬಲ್ಲರು ಎನ್ನುವುದು ಪ್ರಶ್ನೆ?

ಭಾರತದ ಬಹುಸಂಖ್ಯಾತರ ಬೆವರನ್ನು ನಿಂದಿಸುವ ಮತೀಯವಾದಿ ಮನುವಾದಿ ಸಮಯಸಾಧಕರು ಸಿದ್ಧರಾಮಯ್ಯನಂಥವರನ್ನೂ ಬಳಸಿಕೊಂಡು ತಮ್ಮ ದುಷ್ಟಪರಿವಾರವನ್ನು ರಕ್ಷಿಸತೊಡಗಿದರೆ ಬೇಲಿಯೇ ಎದ್ದು ಹೊಲ ಮೇದಂತಾಗುವುದಿಲ್ಲವೆ? ನಮ್ಮ ನೆಚ್ಚಿನ ಸಿದ್ಧರಾಮಣ್ಣ , ಕಾಂಗ್ರೆಸ್‌, ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಅಹಿಂದ್‌ ವಿರೋಧಿಗಳೂ, ಸನಾತನ ವೈದಿಕ ವಂಚಕರೂ ಆದ ಮನುವಾದಿ ಪರಿವಾರ ನಿಮಗೂ ಎರಡು ಬಗೆಯುವ ಅವಕಾಶವಾದಿ ದೇಶದ್ರೋಹಿಗಳ ಗುಂಪು ಎನ್ನುವುದನ್ನು ನಿಮಗೆ ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಈಗ ನಿಮಗೆ ಟೀಕಾಕಾರರಾದವರು ಮಾಡುತಿದ್ದಾರೆ ಎನ್ನಬಹುದಷ್ಟೇ….

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

Latest Posts

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *