![](https://i0.wp.com/samajamukhi.net/wp-content/uploads/2023/08/ಮು.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2023/08/tms-add.jpg?resize=760%2C506&ssl=1)
ಸಿದ್ದಾಪುರ: ಸಮಾಜದ ಲೋಪ ದೋಷಗಳನ್ನು ಬಿಂಬಿಸಿ ಸಮಾಜವನ್ನು ಸನ್ನಡೆತೆಯತ್ತ ಕೊಂಡೊಯ್ಯಲು ನಾಟಕಗಳು ಸಹಕಾರಿ ಎಂದು ಹಿರಿಯ ವಕೀಲರಾದ ಎ ಪಿ ಭಟ್ಟ ಮುತ್ತಿಗೆ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧದ ರಂಗ ಸಂಚಾರ 23-24 ರ ಅಡಿಯಲ್ಲಿ ಹಮ್ಮಿಕೊಂಡ 36 ಅಲ್ಲ 63 ಎಂಬ ಹವಿಗನ್ನಡ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದ ಅಥಿತಿಗಳಾಗಿ ಅವರು ಮಾತನಾಡಿದರು.
ಹಿಂದಿನ ಜೀವನದ ಪದ್ಧತಿ, ಸಂಸ್ಕೃತಿಯನ್ನು ಅರಿಯಲು ಇಂದಿನ ಯುವಜನತೆ ನಾಟಕಗಳನ್ನು ನೋಡುವುದು ಅತ್ಯವಶ್ಯ. ಈ ದಿಶೆಯಲ್ಲಿ ರಂಗಸೌಗಂಧದ ಕಾರ್ಯ ಶ್ಲಾಘನೀಯ ಎಂದರು.
ಅಥಿತಿಗಳಾಗಿ ಭಾಗಿಯಾದ ಇಟಗಿ ರಾಮೇಶ್ವರ ದೇವಾಲಯದ ಮೊಕ್ತೇಸರ ಚಂದ್ರಶೇಖರ ಹೆಗಡೆ ಮತ್ತು ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೀಕಾಂತ ಹೆಗಡೆ ಗುಂಜಗೋಡು ಮಾತನಾಡಿದರು.
![](https://i0.wp.com/samajamukhi.net/wp-content/uploads/2023/08/ಬಿಳಗಿ-ಸ್ವಾ.jpg?resize=540%2C811&ssl=1)
ನಂತರ ಎನ್ ಎಸ್ ರಾವ್ ಮೂಲರಚನೆಯ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ 36 ಅಲ್ಲ 63 ಎಂಬ ಹವಿಗನ್ನಡ ನಾಟಕ ಪ್ರದರ್ಶನಗೊಂಡಿತು.
ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು. ರಾಮು ಅಂಕೋಲೆಕರ್ ವಂದಿಸಿದರು.
![](https://i0.wp.com/samajamukhi.net/wp-content/uploads/2023/08/ಮು.jpg?resize=704%2C468&ssl=1)
![](https://i0.wp.com/samajamukhi.net/wp-content/uploads/2023/08/kyadagi-add-1.jpg?resize=682%2C1024&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)