ತಳಿಸಂರಕ್ಷಕನೆಂದು ಮಾನ್ಯತೆ ಪಡೆದ ಗ್ರಾಮೀಣ ರೈತ ರಮಾಕಾಂತ ಹೆಗಡೆ

ತಾನಾಯಿತು ತನ್ನ ಕೆಲಸವಾಯಿತು ಎಂದು ತೆರೆಮರೆಯಲ್ಲಿ ಕೃಷಿ ಕಾಯಕ ಮಾಡುವುದು ಗ್ರಾಮೀಣ ರೈತನ ಸ್ವಭಾವ. ಹೀಗೆ ತನ್ನಷ್ಟಕ್ಕೆ ತಾನೇ ತೋಟಗಾರಿಕೆ ಮಾಡುತ್ತಾ ಕಾಳುಮೆಣಸು ಬೆಳೆದು ಸಸಿಯ ನರ್ಸರಿ ಮಾಡಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ರೈತರೊಬ್ಬರಿಗೆ ಈಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ.

ಸಿದ್ಧಾಪುರ ತಾಲೂಕಿನ ಕುಗ್ರಾಮ ಕಾನಸೂರು ಬಳಿಯ ಕೋಡ್ಸರ ಹುಣಸೆಕೊಪ್ಪದ ರೈತ ರಮಾಕಾಂತ ಹೆಗಡೆ ತನ್ನ ತೋಟದಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಾ ಕಾಳುಮೆಣಸಿನ ಸಸಿ ಮಾಡುವ ನರ್ಸರಿ ಪ್ರಾರಂಭಿಸಿ ಪ್ರಯೋಗಕ್ಕಿಳಿಯುತ್ತಾರೆ. ಈ ಪ್ರಯೋಗದಲ್ಲಿ ದೊರೆತ ಸಿಗಂದಿನಿ ಎನ್ನುವ ಕಾಳುಮೆಣಸಿನ ಬಳ್ಳಿ ಸಾಕಿ,ಸಸಿ ಮಾಡಿ ಮಾರಾಟಮಾಡುತಿದ್ದ ಈ ಕೃಷಿಕನಿಗೆ ತಾನು ಕಾಳುಮೆಣಸು ವೈವಿಧ್ಯದ ಒಂದು ವಿಶೇಶ ತಳಿಯನ್ನು ಸಲಹುತಿದ್ದೇನೆ ಎನ್ನುವ ಅರಿವೂ ಕೂಡಾ ಇರುವುದಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕೆ ಇಲಾಖೆ ಇಂಥ ರೈತರನ್ನು ಪ್ರೋತ್ಸಾಹಿಸುತ್ತಾ ಈ ಕುಗ್ರಾಮದ ರೈತ ಬೆಳೆಯುತ್ತಿರುವ ಕಾಳುಮೆಣಸಿನ ಪ್ರಭೇದ ವಿಶಿಷ್ಟ ತಳಿ ಎನ್ನುವುದನ್ನು ಗುರುತಿಸುತ್ತದೆ.

ಇಷ್ಟಾದ ನಂತರ ರಮಾಕಾಂತ ಹೆಗಡೆ ತೋಟಗಾರಿಕೆ ಇಲಾಖೆಯ ನಿರ್ಧೇಶನ, ಮಾರ್ಗದರ್ಶನದ ಮೇರೆಗೆ ತನ್ನ ತಳಿಯನ್ನು ರಾಷ್ಟ್ರಮಟ್ಟದ ವರೆಗೆ ಪರಿಚಯಿಸಿ ಅದರ ಪೇಟೆಂಟ್‌ ಪಡೆಯುತ್ತಾರೆ. ಈ ಸಾಧನೆ ಗಮನಿಸಿದ ಪ್ರೊಟಕ್ಷನ್‌ ಆಫ್‌ ಪ್ಲಾಂಟ್‌ ವೆರೈಟೀಸ್‌ ಎಂಡ್‌ ಫಾರಮರ್ಸ್‌ ರೈಟ್ಸ್‌ ಅಥೋರಿಟಿ ಪ್ಲಾಂಟ್‌ ಜಿನಾಮ್‌ ಸೇವಿಯರ್‌ ಫಾರಮರ್‌ ರಿವಾರ್ಡ್‌೨೦೨೦-೨೧ ಕ್ಕೆ ಆಯ್ಕೆ ಮಾಡುತ್ತದೆ.

ತಳಿಸಂವರ್ಧಕ ಕೃಷಿಕ ಎನ್ನುವ ರಾಷ್ಟ್ರೀಯ ಪ್ರಶಸ್ತಿ ನೀಡಿರುವ ನಿಗಮ ಪಕ್ಕಾ ಗ್ರಾಮೀಣ ರೈತನೊಬ್ಬನಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಕೊಡಿಸುವ ಮೂಲಕ ರೈತನ ಸಾಧನೆಗೆ ಗೌರವ ನೀಡಿದೆ.

ಈ ಪ್ರಶಸ್ತಿ, ಕೀರ್ತಿಯಿಂದ ತಮ್ಮ ಬದುಕು ಬದಲಾಗುವ ಜೊತೆಗೆ ರೈತರ ಸಹಾಯಕ್ಕೆ ದೊರೆಯಲು ಉತ್ತೇಜನ ದೊರೆಯಿತು ಎನ್ನುವ ಪ್ರಶಸ್ತಿ ಪುರಸ್ಕೃತ ರೈತ ರಮಾಕಾಂತ ಹೆಗಡೆ ಇಂಥ ಗೌರವ ಪ್ರಶಸ್ತಿಗಳು ತಮ್ಮಿಂದ ಮತ್ತಷ್ಟು ಉತ್ತಮ ಕೆಲಸ ಮಾಡಿಸುತ್ತವೆ ಎನ್ನುತ್ತಾರೆ ಈ ಗ್ರಾಮೀಣ ತಳಿಸಂರಕ್ಷಕ ಕೃಷಿಕ.ಸಾಮಾನ್ಯ ರೈತನಾಗಿದ್ದ ರಮಾಕಾಂತ ಹೆಗಡೆ ರಾಷ್ಟ್ರಮಟ್ಟದ ಗೌರವ ಪಡೆಯುವ ಮೂಲಕ ಗ್ರಾಮೀಣ ರೈತರ ಆತ್ಮವಿಶ್ವಾಸ ವರ್ಧಿಸಿದ್ದಂತೂ ಸತ್ಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *