ಕೆರೆಪುನಶ್ಚೇತನದ ಮೂಲಕ ಮಾದರಿಯಾದ ಹುಸೂರು ಗ್ರಾಮಸ್ಥರು

ಮಲೆನಾಡಿನಲ್ಲಿ ಇದೇ ಮೊದಲ ಬಾರಿ ಬರದ ಛಾಯೆ ಕಂಡಿದೆ. ಎರಡ್ಮೂರು ತಿಂಗಳು ಸುರಿಯುತಿದ್ದ ಮಳೆ ಈ ವರ್ಷ ಎರಡ್ಮೂರು ವಾರ ಕೂಡಾ ಬೀಳಲಿಲ್ಲ. ಮಳೆಯ ತೌರೂರು ಮಲೆನಾಡಿನಲ್ಲಿ ಮಳೆ ಕೊರತೆ ಅನೇಕ  ಆತಂಕಗಳಿಗೆ ಕಾರಣವಾಗಿದೆ. ಈ ಮುಂದಾಲೋಚನೆ ಮಲೆನಾಡಿನ ಜನರಿಗೆ ಜೀವಜಲದ ಮಹತ್ವ ತಿಳಿಸುತ್ತಿದೆ. ಮಳೆಗಾಲದ ಕೊನೆಯ ಅವಧಿಯ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ತುಂಬಿ- ತುಳುಕುತಿದ್ದ ಮಲೆನಾಡಿನ ಕೆರೆ ಕಟ್ಟೆಗಳು ಈ ವರ್ಷ ಮೊದಲಿನ ವೈಭವ ನೆನಪಿಸುವಂತಿಲ್ಲ. ಈ ಜಲಕ್ಷಾಮದ ಪರಿಣಾಮ ಅರಿತ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹುಸೂರಿನ ರೈತರು ಬರುವ ಬೇಸಿಗೆ ಕಾಲದ ನೀರಿನ ಬವಣೆ ಬಗ್ಗೆ ಯೋಚಿಸಿ ಈಗಾಗಲೇ ಕಾರ್ಯಪ್ರವೃತ್ತರಾಗಿ ಬರಲಿರುವ ಬರಕ್ಕೆ ಸೆಡ್ಡು ಹೊಡೆಯುವ ಪೂರ್ವತಯಾರಿ ನಡೆಸಿದ್ದಾರೆ.


ತಮ್ಮೂರಿನ ಪುರಾತನ ಹೆಗ್ಗೆರೆಯನ್ನು ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರದಿಂದ ಹೂಳು ತೆಗೆದು ದಂಡೆಕಟ್ಟಿ ಮೂವತ್ತು ಅಡಿ ಆಳದ ನೀರು ನಿಲ್ಲಿಸಿದ್ದಾರೆ. ಈ ಜಲಸಂರಕ್ಷಣೆ ಕೆಲಸಕ್ಕಾಗಿ ನಿರಂತರವಾಗಿ ದುಡಿದ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಏಳುವರೆ ಲಕ್ಷ ರೂಪಾಯಿಗೆ ಸ್ಥಳಿಯ ವಂತಿಗೆ ಸೇರಿಸಿ ಒಟ್ಟೂ ೧೫ ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ಸುಂದರ ಕೆರೆ ನಿರ್ಮಿಸಿದ್ದಾರೆ.
 ಈ ಕೆರೆ ಪುನಶ್ಚೇತನ ಕೆಲಸಕ್ಕೆ ಸ್ವಯಂಸೇವಕರಾಗಿ ದುಡಿದ ಸ್ಥಳೀಯರು ಇಂದು ಈ ಕೆರೆಯನ್ನು ಸ್ಥಳೀಯ ಆಡಳಿತಕ್ಕೆ ಶಾಸಕ ಭೀಮಣ್ಣ ನಾಯ್ಕರ ಮೂಲಕ ಹಸ್ತಾಂತರಿಸಿದರು.


ಈ ಕೆರೆ ಪುನಶ್ಚೇತನದಿಂದ ಹುಸೂರಿನ ೪೦೦ ಎಕರೆ ಜಮೀನಿಗೆ ನೀರು ಪೂರೈಸುವ ಮಾದರಿ ಕೆಲಸ ಈಗ ಪುರ್ಣಗೊಂಡಿದೆ. ಈ ಸಾಹಸದ ಕೆಲಸವನ್ನು ಮೆಚ್ಚಿರುವ ಜನಪ್ರತಿನಿಧಿಗಳು, ಅಧಿಕಾರಿವರ್ಗ ಇಂದು ವಿಶೇಶ ಕಾರ್ಯಕ್ರಮ ರೂಪಿಸಿ ನಮ್ಮೂರು ನಮ್ಮ ಕೆರೆ ಯೋಜನೆಯ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮಸ್ಥರನ್ನು ಅಭಿನಂದಿಸಿದರು. ಈ ಮಾದರಿ ಕೆಲಸದ ಕಾರಣಕ್ಕೆ ಹುಸೂರಿನ ಜನತೆ ಈಗ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *