ಭೂಮಿ ಉಳಿಸಿಕೊಳ್ಳುವುದು ಹೇಗೆ?

-ದೇವನೂರ ಮಹಾದೇವ

ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳಲು ನಾವಿಲ್ಲಿ ಆಲೋಚಿಸುತ್ತಿದ್ದೇವೆ. ಆದರೆ ಇಂದಿನ ಸರ್ಕಾರಗಳು ಭೂಮಿಯನ್ನೇ ಕೊಂದು ನೇತುಹಾಕುತ್ತಿವೆ. ಭೂಮಿಯ ಜೊತೆಗೆ ಯಾವುದೇ ನೈಸರ್ಗಿಕ ಸಂಪತ್ತಿಗೂ ಉಳಿಗಾಲವಿಲ್ಲದ ಕಡೆಗೆ ನಾವು ಚಲಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಜಾರಿಗೊಳಿಸಬೇಕೆಂದಿರುವ ಯಮಪಾಶದ ಜವರಾಯನಂತಿರುವ ಭೂಸ್ವಾಧೀನ ಸುಗ್ರೀವಾಜ್ಞೆ-ಇದೊಂದನ್ನೇ ನೋಡಿದರೂ ಸಾಕು. ಇಂಥ ಭೂಸ್ವಾಧೀನ ಸುಗ್ರೀವಾಜ್ಞೆ ಮನುಷ್ಯ ಮಾತ್ರದವರು ಮಾಡಲಾರರು. ಎದೆಯಲ್ಲಿ ಹೃದಯವಿಲ್ಲದ, ಮಿದುಳೊಳಗೆ ಮನಸ್ಸು ಇಲ್ಲದ ರೊಬೋಟ್ ಯಂತ್ರ ಮಾನವ ಮಾತ್ರ ಮಾಡಬಹುದಾದ ಕಾನೂನಿನಂತಿದೆ ಇದು.

ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಇಲ್ಲಿ ಚರ್ಚಿಸಲ್ಪಡುವ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದಂತೆ. ಭೂ ಹಂತಕರ ಪರವಾದ ಈ ಸರ್ಕಾರಗಳು ತಮ್ಮ ಭೂ ಹತ್ಯೆಯನ್ನು ಮರೆ ಮಾಚಲು ಭೂ ಫಲವತ್ತತೆ ಕಾಪಾಡುವ ಹೆಸರಲ್ಲಿ ಒಂದಿಷ್ಟು ಹಣ ಚೆಲ್ಲಬಹುದು, ಒಂದಿಷ್ಟು ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಲೂಬಹುದು. ಮಣ್ಣಿನ ಜೀವಂತಿಕೆ ಚರ್ಚಿಸುವತ್ತ ಗಮನ ಸೆಳೆದು ಮತ್ತಷ್ಟು ಭೂಮಿಯನ್ನು ನಿರಾಯಾಸ ಧ್ವಂಸ ಮಾಡಲೂಬಹುದು. ಇದು, ಭೂಮಿಯನ್ನು ಅಗೆದು ಬಗೆದು ಟಾರು ಮರಳು ಮಾಡಿ ಕೊಂದು ಅದರೊಳಗೆ ಜೀವ ಕಾಪಾಡುವ ಮಾತನಾಡಿದಂತಾಗುತ್ತದೆ. ಜೊತೆಗೆ ಇಂಥ ಸಮಸ್ಯೆಗಳನ್ನು ತಟ್ಟೆ ಮಾಡಿಕೊಂಡು ಒಂದಿಷ್ಟು ಜನಕ್ಕೆ ಹೊಟ್ಟೆಯಾಪ್ತಿ ನಡೆಯಬಹುದು ಅಷ್ಟೇ.

ಹಾಗಾದರೆ ಹೇಗೆ? ಭೂ ಜೀವಂತಿಕೆ ಕಾಪಾಡುವ ಸಮಸ್ಯೆಯನ್ನು ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಕ್ಕೆ ತಳಕು ಹಾಕಬೇಕಾಗಿದೆ. ಎರಡನ್ನೂ ಜೊತೆಗೂಡಿಸಿ ಒಂದೇ ಎಂಬಂತೆ ನೋಡಬೇಕಾಗಿದೆ. ನಾಳೆ ಈ ಭೂಮಿ ಉಳಿಸಿಕೊಂಡು ಬದುಕಿ ಬಾಳಬೇಕಾದ ವಿದ್ಯಾರ್ಥಿ ಯುವಜನತೆಯಲ್ಲಿ ಎಚ್ಚರ ಮೂಡಿಸಬೇಕಾಗಿದೆ; ಜನಾಂದೋಲನಕ್ಕೆ ಪ್ರೇರಣೆಯಾಗಬೇಕಾಗಿದೆ. ಇದಾಗದಿದ್ದರೆ ನಾವು ಬಿಳಿಬಟ್ಟೆ ವರದಿಗಾರರೋ ವಕ್ತಾರರೋ ಆಗಿಬಿಡುತ್ತೇವೆ.

ನಮ್ಮ ಮುಂದೆ ಎಷ್ಟು ಕತ್ತಲು ಇದೆ ಎಂದರೆ-ನೈಸರ್ಗಿಕ ಸಂಪತ್ತನ್ನು ಧ್ವಂಸಿಸುವ ಭೂ ಕೊಲೆಗಡುಕರ ಕೈಗೊಂಬೆಯಾಗಿ ಇಂದಿನ ರಾಜಕಾರಣ ಕುಣಿಯುತ್ತಿದೆ. ಹಿಂದೆ ರಾಜನ ಆಸ್ಥಾನವಿತ್ತು, ಅಲ್ಲಿ ನರ್ತಕಿಯರು ಕುಣಿಯುತ್ತಿದ್ದರು. ಇಂದು ಅಂಬಾನಿ-ಅದಾನಿ ಥರದವರ ಆಸ್ಥಾನದಲ್ಲಿ ಬಣ್ಣಬಣ್ಣದ ವೇಷಧರಿಸಿ ಕುಣಿಯುವ ನರ್ತಕಿಯರಂತೆ ನಮ್ಮ ಸರ್ಕಾರಗಳಾಗಿಬಿಟ್ಟಿವೆ. ಅಂದರೆ ಯಾರಿಗೋ ಮೇಸ್ತ್ರಿಗಳಂತೆ ಇಂದಿನ ಸರ್ಕಾರಗಳು ಕೆಲಸ ಮಾಡುತ್ತಿವೆ.

ಹೇಳಿ, ಭೂಮಿ ಉಳಿಸಿಕೊಳ್ಳುವುದು ಹೇಗೆ? ಆಮೇಲೆ ಅದರೊಳಗಿನ ಮಣ್ಣಿನ ಜೀವ ಉಳಿಸಿಕೊಳ್ಳುವುದು ಹೇಗೆ?

[ಅಂತಾರಾಷ್ಟ್ರೀಯ ಮಣ್ಣು ವರ್ಷದ ಅಂಗವಾಗಿ ನೇಸರ, ಸಾಯಿಲ್, ಪ್ರಿಸ್ಟೀನ್, ಸಂವಾದ, ಗ್ರೀನ್ ಪ್ರತಿಷ್ಠಾನಗಳು ಸಂಯುಕ್ತವಾಗಿ 15.3.2015 ಭಾನುವಾರ ಮೈಸೂರಿನ ರಂಗಾಯಣದಲ್ಲಿ ಆಯೋಜಿಸಿದ್ದ ‘ನಾವರಿಯದ ಮಣ್ಣಿನ ಲೋಕ’ ಕುರಿತ ಸಂವಾದ-ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರ ಭಾಷಣದ ಬರಹ ರೂಪ]

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *