ಬಿ.ಜೆ.ಪಿ.ಗೆ ಬಲಿಯಾದ ಶೂದ್ರರು… ಹೆಸರಿಗೆ ಹಿಂದುತ್ವ,ಮಾಡುವುದು ವೈದಿಕ ಕಪಟ, ಪಕ್ಷದ ಬಗ್ಗೆ ಪ್ರಾಮಾಣಿಕ ಕಾರ್ಯಕರ್ತರ ಆಕ್ರೋಶ ಸ್ಫೋಟ

ರಾಜ್ಯದ ಕರಾವಳಿ ಸೇರಿದಂತೆ ದೇಶದಾದ್ಯಂತ ಬಿ.ಜೆ.ಪಿ. ದೇವರು, ಧರ್ಮ ಬಳಸಿಕೊಂಡು ಬೆಳೆಯುತ್ತಿದೆ. ಆದರೆ ದೇವರು- ಧರ್ಮದ ಅಫೀಮಿಗೆ ಹುಚ್ಚರಾಗುವ ಶೂದ್ರರಿಗೆ ಬಿ.ಜೆ.ಪಿ.ಯಲ್ಲಿ ಅವಕಾಶವಿದೆಯೆ? ಅನುಕೂಲವಿದೆಯೆ ಎಂದರೆ ಉತ್ತರ ಇಲ್ಲ ಎನ್ನುವುದು ವಾಸ್ತವ ಸತ್ಯ. ಈ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ವಿಶೇಶವಾಗಿ ಉತ್ತರ ಕನ್ನಡದಲ್ಲಿ ಹಿಂದುತ್ವ, ರಾಮಜನ್ಮಭೂಮಿ ಎಂದು ದುಡಿದ ಶೂದ್ರರು ಅಬ್ಬೆಪಾರಿಗಳಂತೆ ಮಡಿಯುತಿದ್ದರೆ. ಪಕ್ಷ, ಆಡಳಿತದಲ್ಲಿ ಅವಕಾಶ ಪಡೆದು ಶೂದ್ರರನ್ನು ಭಾಷಣದ ಮೂಲಕ, ಬರವಣಿಗೆ ಮೂಲಕ ಮೂರ್ಖರನ್ನಾಗಿ ಮಾಡುತ್ತಿರುವ ಕಪಟ ವೈದಿಕತೆ ಹಿಂದುಳಿದ ವರ್ಗಗಳ ಬಿ,ಜೆ.ಪಿ.ಗೆ ಶಾಪವಾಗುತ್ತಿರುವ ಬಗ್ಗೆ ಬಿ.ಜೆ.ಪಿ. ವಲಯದಲ್ಲಿ ಅಂತ:ಕಲಹವಾಗಿ ಆಕ್ರೋಶ ಹೆಚ್ಚತೊಡಗಿದೆ.

ಈ ವಿದ್ಯಮಾನದ ಬೆನ್ನುಹತ್ತಿ ಸಮಾಜಮುಖಿ ಡಾಟ್‌ ನೆಟ್‌ ಸಂಪರ್ಕಿಸಿದ ಉತ್ತರ ಕನ್ನಡ ಜಿಲ್ಲೆಯ ಕೆಲವು ಬಿ.ಜೆ.ಪಿ. ಪ್ರಮುಖರು ಹಿಂದುತ್ವದ ಸೋಗಿನ ಆರೆಸ್ಸೆಸ್ ಮತ್ತು ಬಿ.ಜೆ.ಪಿ.ಯ ವೈದಿಕ ಕುತಂತ್ರದ ಬೂಟಾಟಿಕೆಯನ್ನು ಖಂಡತುಂಡ ವಾಗಿ ವಿರೋಧಿಸಿದರು.

ಕಾರವಾರದ ನಿಷ್ಠಾವಂಥ ಬಿ.ಜೆ.ಪಿ. ಕಾರ್ಯಕರ್ತರೊಬ್ಬರು ಮಾತನಾಡಿ ಬಿ.ಜೆ.ಪಿ. ಆರೆಸ್ಸೆಸ್‌ ಗಳು ಹಿಂದುಳಿದವರ ಶತ್ರುಗಳು ನಮ್ಮೂರಿನಲ್ಲೇ ನೋಡಿ ಆನಂದ ಅಸ್ನೋಟಿಕರ್‌ ಎಲ್ಲಿಂದಲೋ ಬಂದು ಟಿಕೇಟ್‌, ಅಧಿಕಾರ ಪಡೆಯುತ್ತಾರೆ.

ಅಸ್ನೋಟಿಕರ್‌ ರಂಥ ಶ್ರೀಮಂತರಿಗೆ ಬೇಡದ ಹಿಂದುತ್ವ, ರಾಮಮಂದಿರ ನಮಗೆ ಬೇಕೆ?

ಇವೆಲ್ಲಾ ಬೂಟಾಟಿಕೆ ನಾವು ಕಾರವಾರ ಅಂಕೋಲಾ ದಿಂದ ಮಂಗಳೂರಿನ ವರೆಗೆ ಮೀನುಗಾರರು ಬಹುಸಂಖ್ಯಾತರು ನಮಗೆ ಕೇಸರಿ ಧ್ವಜ ಕೊಟ್ಟು ನಮ್ಮನ್ನು ದುಡಿಸಿಕೊಂಡ ಬಿ.ಜೆ.ಪಿ. ಅಲ್ಪಸಂಖ್ಯಾತ ಗಂಗಾಧರ ಭಟ್ ರಿಗೆ ಅವಕಾಶ ನೀಡಿತು. ನಮ್ಮ ಮಹಾರುದ್ರ ಬಾನಾವಳಿಕರ್‌, ಪ್ರಸಾದ್‌ ಕಾರವಾರಕರ್‌ ಬಿ.ಜೆ.ಪಿ. ಹಿಂದುತ್ವ ಎನ್ನುತ್ತಾ ಪ್ರಾಣ ಕೊಟ್ಟರು. ಪ್ರತಿಚುನಾವಣೆಯಲ್ಲಿ ಒಂದೊಂದು ಗಿಮಿಕ್‌ ಮಾಡುವ ಬಿ.ಜೆ.ಪಿ. ನಮ್ಮ ಪರೇಶ್‌ ಮೇಸ್ತರನ್ನು ಬಳಸಿಕೊಂಡು ಅಧಿಕಾರ ಹಿಡಿಯಿತು. ಶಾಸಕರು, ಸಂಸದರು, ನಿಗಮಮಂಡಳಿಗಳಿಗೆ ಆಯ್ಕೆಯಾದವರು ಯಾರು? ಬಿ.ಜೆ.ಪಿ. ಯ ಬ್ರಾಮಣ್ಯ ಮುಸ್ಲಿಂರಿಗೆ ಮಾರಕವಲ್ಲ ಅದು ಬ್ರಾಹಣರನ್ನು ಬೆಳೆಸಿ ಹಿಂದುಳಿದವರನ್ನು ನಾಶ ಮಾಡುತ್ತೆ .

ಪ್ರಶ್ನಿಸಿದರೆ ಗಣಪತಿ ಉಳ್ವೇಕರ್‌, ಗೋವಿಂದ ನಾಯ್ಕರನ್ನು ತೋರಿಸುತ್ತೆ ಗೋವಿಂದ ನಾಯ್ಕರ ಸಮೂದಾಯದ ಜನಸಂಖ್ಯೆ ಎಷ್ಟು? ಗಣಪತಿ ಉಳ್ವೇಕರ್‌ ಸಮೂದಾಯದ ಜನಸಂಖ್ಯೆ ಎಷ್ಟು? ಲಾಭಪಡೆದ ಹೆಗಡೆ,ಭಟ್‌,ಶಾಸ್ತ್ರೀ,ನಾಯಕ್‌ ಗಳ ಜನಸಂಖ್ಯೆ ಎಷ್ಟು? ಇದು ಉತ್ತರ ಕನ್ನಡದ ಉದಾಹರಣೆ ಬಿ.ಜೆ.ಪಿ. ಆರೆಸ್ಸೆಸ್‌ ಸೇರಿ ಇಡೀ ಭಾರತದಲ್ಲಿ ಇದನ್ನೇ ಮಾಡುತ್ತಿವೆ. ನಾವು ಮೂರ್ಖರಾಗಿದ್ದು ಸಾಕು ಈ ಬಾರಿ ಬಿ.ಜೆ.ಪಿ.ಯಿಂದ ಹಿಂದುಳಿದ ವರ್ಗದವರಿಗೆ ಎಂ.ಪಿ. ಟಿಕೆಟ್‌ ನೀಡದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ. ಎಂದರು.

ಇದೇ ವಿಚಾರದ ಬಗ್ಗೆ ಮಾತನಾಡಿದ ಸಿದ್ಧಾಪುರದ ಹಿರಿಯ ಮುಖಂಡರೊಬ್ಬರು ನಾವು ಆರೆಸ್ಸೆಸ್‌, ಬಿ.ಜೆ.ಪಿ.ಗೆ ದುಡಿದು ಅನಂತಕುಮಾರ್‌ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆಗಳನ್ನು ನೂರಾರು ಕೋಟಿ ಒಡೆಯರನ್ನಾಗಿ ಮಾಡಿದೆವು. ಹಿಂದುತ್ವ, ರಾಷ್ಟ್ರೀಯತೆ, ದೇಶಭಕ್ತಿ ಎಂದು ನಟಿಸುವ ಕಪಟ ಮುಖಂಡರು ನೂರಾರು ಕೋಟಿ ಒಡೆಯರಾದರು. ನಾವು ಇವರ ಬ್ಯಾನರ್‌ ಕಟ್ಟಿ, ಇವರ ಪರವಾಗಿ ನಮ್ಮವರ ವಿರೋಧ ಕಟ್ಟಿಕೊಂಡು ಚುನಾವಣೆಯಲ್ಲಿ ಮಾಡಿದ ಕರ್ಚಿಗೆ ಇವರ ಮನೆ ಬಾಗಿಲು ಕಾಯಬೇಕು.

ಮೂವತ್ತು ವರ್ಷ ಅಧಿಕಾರದ ಲಾಭ ಪಡೆದುಕೊಂಡ ಇವರು ಇಲ್ಲಿ ಸೋತರ ಅಲ್ಲಿ, ಅಲ್ಲಿ ಸಿಗದಿದ್ದರೆ ಇಲ್ಲಿ ಎನ್ನುವ ನಾಟಕ ಮಾಡುತ್ತಾರೆ. ಉತ್ತರ ಕನ್ನಡದಲ್ಲಿ ಈ ಬಾರಿ ಹಿಂದುಳಿದವರಿಗೆ ಬಿ.ಜೆ.ಪಿ. ಎಂ.ಪಿ. ಟಿಕೇಟ್‌ ನೀಡದಿದ್ದರೆ ಇವರ ಹಿಂದುತ್ವ, ಮೋದಿ ಅಲೆ, ಚುನಾವಣಾ ರಾಷ್ಟ್ರೀಯತೆ ಎಲ್ಲ ಸುಳ್ಳುಗಳನ್ನೂ ನಾವೇ ಹೊರಗೆಳೆಯುತ್ತೇವೆ. ಈಗಿನ ಬಿ.ಜೆ.ಪಿ. ಕೆಲವರಿಗಾಗಿ ಬಹುಸಂಖ್ಯಾತರು ಬಲಿದಾನ ಮಾಡುವ ಅಮಾನವೀಯ ಪರಿವಾರವಾಗಿದೆ. ನಮಗೆ ಈಗ ವೈದಿಕರನ್ನು ಮೆರೆಸುವ ಸೂಡೋ ಹಿಂದುತ್ವ ಸಾಕಾಗಿದೆ. ಬಿ.ಜೆ.ಪಿ. ನಮಗೆ ಮರ್ಯಾದೆ ನೀಡದಿದ್ದರೆ ನಾವ್ಯಾಕೆ ಅವರ ದುಷ್ಟ, ಬ್ರಷ್ಟ, ಕಪಟ ಬೂಟಾಟಿಕೆಯಹಿಂದುತ್ವದ ರಾಜಕಾರಣಕ್ಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದರು. (ಮುಂದುವರಿಯಲಿದೆ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *