ಅನಂತನ ಓಡಿಸಿ….ಕ್ಷೇತ್ರ ಉಳಿಸಿ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಪ್ರಾರಂಭವಾಯ್ತು ಹೆಗಡೆ ವಿರೋಧಿ ಅಭಿಯಾನ!

ನಿರಂತರ ನಾಲ್ಕು ಬಾರಿ ಒಟ್ಟೂ ಐದು ಬಾರಿ ಹಿಂದಿನ ಕೆನರಾ ಮತ್ತು ಇಂದಿನ ಉತ್ತರ ಕನ್ನಡ ಸಂಸದರಾಗಿ ನಿಷ್ಕ್ರೀಯತೆ ಮತ್ತು ಅನಾಚಾರಗಳಿಂದ ಕುಖ್ಯಾತನಾಗಿರುವ ಅನಂತ ಕುಮಾರ ಹೆಗಡೆ ವಿರುದ್ಧ ʼಹೆಗಡೆ ಓಡಿಸಿ ಕ್ಷೇತ್ರ ಉಳಿಸಿʼ ಎನ್ನುವ ಅಭಿಯಾನ ಪ್ರಾರಂಭವಾದಂತಿದೆ.

ಒಮ್ಮೆಯೂ ಮುನ್ನೋಟ, ಅಭಿವೃದ್ಧಿ ಅಧಾರದಲ್ಲಿ ಮತ ಕೇಳದ ಅನಂತಕುಮಾರ ಹೆಗಡೆ ಪ್ರತಿ ಚುನಾವಣೆ ಮೊದಲು ಪ್ರಚೋದನಾಕಾರಿ ಅವಿವೇಕದ ಮಾತುಗಳಿಂದ ಮುಗ್ಧರ ಮನಗೆಲ್ಲುತಿದ್ದ! ಅನಂತ ಕುಮಾರ ತಂತ್ರ ಈ ಬಾರಿ ಅವರಿಗೇ ಉಲ್ಟಾ ಹೊಡೆದಂತಿದೆ.

ಪ್ರತಿಚುನಾವಣೆಯಂತೆ ಈ ಬಾರಿ ಕೂಡಾ ನಾನು ಸ್ಫರ್ಧಿಯಲ್ಲ ಎನ್ನುವ ಅವರ ಸಂಘದ ಸುಳ್ಳಿಗೆ ಈ ಬಾರಿ ಪ್ರಾರಂಭದಲ್ಲೇ ಹಿನ್ನಡೆಯಾಗಿ ತನ್ನ ಅನುಯಾಯಿಗಳ ಮೂಲಕ ತಾನೇ ಒತ್ತಾಯದ ಅಭಿಯಾನ ಮಾಡಿಸಿಕೊಂಡ ಹೆಗಡೆ ಚುನಾವಣೆ ಮೊದಲೇ ಅಪಹಾಸ್ಯಕ್ಕೆ ತುತ್ತಾದರು.

ರಾಮಮಂಂದಿರದ ನೆಪದಲ್ಲಿ ತನ್ನ ಮತಾಂಧ ರಾಜಕೀಯದ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ನಿಷ್ಪ್ರಯೋಜಕ ಸಂಸದ ಅನಂತ ಹೆಗಡೆ ವಿರುದ್ಧ ಪಕ್ಷದ ವಲಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೂಡಾ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅವಿವೇಕದ ಮಾತುಗಳಿಂದ ಚುನಾವಣೆ ಗೆಲ್ಲುವ ಕಾಲ ಮುಗಿಯಿತು ಎಂದು ಮನಗಂಡ ಬಿ.ಜೆ.ಪಿ. ಈ ಬಾರಿ ಅನಂತ ಬದಲು ಹೊಸ ಮುಖಕ್ಕೆ ಅವಕಾಶ ಕೊಡಲು ಸಿದ್ಧವಾಗಿದೆ. ಈ ಸುದ್ದಿ ಗ್ರಹಿಸಿದ ಅನಂತಕುಮಾರ ಮತ್ತೆ ಹಿಂದಿನಂತೆ ಬಾಷಣದ ಮೂಲಕ ಅಲೆ ಎಬ್ಬಿಸಿದರೆ ಮತ್ತೆ ಟಿಕೇಟ್‌ ಪಡೆದು ಇನ್ನೈದು ವರ್ಷ ಮೋದಿ ಭಜನೆಯಲ್ಲಿ ನಿದ್ರೆ ಮಾಡಬಹುದೆಂದುಕೊಂಡಿರುವ ಅನಂತ ಕುಮಾರ ತಂತ್ರ ಅರಿತ ಬಿ.ಜೆ.ಪಿ. ಕೂಡಾ ಈ ಬಾರಿ ನೀವು ಅಭ್ಯರ್ಥಿಯಲ್ಲ ಪಕ್ಷದ ಅನುಮತಿ ಇಲ್ಲದೆ ಸಭೆ ನಡೆಸಬೇಡಿ ಎಂದು ವಾರ್ನ್‌ ಮಾಡಿದೆಯಂತೆ.

ಹೀಗೆ ತನ್ನ ವೈದಿಕ ಕುತಂತ್ರದ ಮತಾಂಧ ರಾಜಕಾರಣಕ್ಕೆ ವಿರೋಧ ವ್ಯಕ್ತವಾಗುತಿದ್ದರೂ ಹುಂಬತನದಿಂದ ಕ್ಷೇತ್ರ ಪರ್ಯಟನೆ ಪ್ರಾರಂಭಿಸಿರುವ ಹೆಗಡೆಗೆ ಅವರ ಹಿರಿತನ ಲೆಕ್ಕಿಸದೆ ʼಮಗನೆ ಇಷ್ಟು ವರ್ಷ ಎಲ್ಲೊಗಿದ್ದಿ? ಚುನಾವಣೆ ಮೊದಲು ರಾಮ, ಹಿಂದುತ್ವ ನೆನಪಾಯಿತೆ? ಎಂದೆಲ್ಲಾ ನೇರವಾಗಿ ಪ್ರಶ್ನಿಸತೊಡಗಿದ್ದಾರೆ.

ಇದರಿಂದ ಶುಗರ್‌ ಹೆಚ್ಚಿಸಿಕೊಂಡಿರುವ ಹೆಗಡೆ ಚುನಾವಣೆ ಮೊದಲು ಮತ್ತೆ ಹಾಸಿಗೆ ಹಿಡಿದರೂಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಚರ್ಚೆಯಾಗುತ್ತಿದೆ.

ಸಕ್ರಾಂತಿ ಮಾರನೇ ದಿನ ಕಿತ್ತೂರಿನಲ್ಲಿ ಅನಂತಕುಮಾರ ಹೆಗಡೆಗೆ ತರಾಟೆಗೆ ಶುರುಹಚ್ಚಿಕೊಂಡ ಬಿ.ಜೆ.ಪಿ.ಯ ಹಿರಿಯ ಮುಖಂಡರು, ಮಾಜಿ, ಹಾಲಿ ಶಾಸಕರು ಅನಂತಕುಮಾರ ಕಾಲರ್‌ ಹಿಡಿದು ಹೆಗಡೆ ನಿನ್ನ ಲಾಗಾಯ್ತಿನ ಸನಾತನವಾದಿ ವೈದಿಕ ನಾಟಕ ನಮ್ಮೆದುರು ನಡೆಯಲ್ಲ. ಮಾನಮರ್ಯಾದೆ ಇದ್ದರೆ ಚುನಾವಣಾ ರಾಜಕಾರಣದಿಂದ ಹಿಂದೆ ಸರಿ ಇಲ್ಲದಿದ್ದರೆ ಈ ಚುನಾವಣೆಯಲ್ಲಿ ನಿನ್ನ ಚಟ್ಟ ಕಟ್ಟುತ್ತೇವೆ ಎಂದು ನೇರವಾಗಿ ಗದುಮಿದ್ದಾರೆ. ಇದರಿಂದ ಸಹನೆ ಕಳೆದುಕೊಂಡ ಪೇಪರ್‌ ಹುಲಿ ಹೆಗಡೆ ಅಂಡುಸುಟ್ಟ ಬೆಕ್ಕಿನಂತೆ ಮುಖಕೆಳಗೆ ಮಾಡಿ ಶಂಡನಂತೆ ಎದ್ದುಬಂದಿದ್ದಾನೆ ಎಂದು ಅವರ ಪಕ್ಷದವರೇ ಲೇವಡಿಮಾಡುವಂತಾಗಿದೆ.

ವಿಶೇಶವೆಂದರೆ ಈ ಬಾರಿ ಮತಾಂಧತೆಯ ಅವಿವೇಕದ ಚುನಾವಣೆ ತಂತ್ರದ ಮೂರನೇ ದರ್ಜೆಯ ಹೇಳಿಕೆ ಕೊಟ್ಟ ಅನಂತ ಹೆಗಡೆ ಪರವಾಗಿ ಶತಮೂರ್ಖ ಈಶ್ವರಪ್ಪ ಬಿಟ್ಟರೆ ಬಿ.ಜೆ.ಪಿ.ಯ ಮತ್ತ್ಯಾರೂ ಬೆಂಬಲಿಸಿಲ್ಲ. ಬದಲಾಗಿ ಬಹುತೇಕ ಬಿ.ಜೆ.ಪಿ. ಮುಖಂಡರು ಹೆಗಡೆ ಮಾತಿಗೆ ನಾವು ಪ್ರತಿಕ್ರೀಯಿಸಿದರೆ ಅವನಿಗೂ ತಮಗೂ ವ್ಯತ್ಯಾಸ ಉಳಿಯಲ್ಲ ಎಂದು ಈ ಗುಳ್ಳೆನರಿಯನ್ನು ಏಕಾಂಗಿ ಮಾಡಿದ್ದಾರೆ. ಕೆಲವು ಮತಿವಿಕಲ ಸಂಘಿ ಶನಿಗಳು ಮಾತ್ರ ಈ ಅವಿವೇಕಿಯ ಪರವಾಗಿ ವಕಾಲತ್ತು ವಹಿಸುತ್ತಿವೆ ಅಷ್ಟೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *