ರಾಮ ಬಂದ….ಅಯೋಧ್ಯೆಯಲ್ಲಿ….. (ಒಂದು ಲಹರಿ)

ಅಯೋಧ್ಯೆಯಲ್ಲಿ ತಳಿರು ತೋರಣಗಳಿಂದ ಶೃಂಗಾರಗೊಂಡ ಬೀದಿಯಲ್ಲಿ ಹೂವುಗಳು ಅರಳಿನಿಂತಂತೆ ಭಾಸವಾಗುತಿತ್ತು. ಅದೆಷ್ಟೋ ದಿನಗಳಿಂದ ತಯಾರಿಯಲ್ಲಿ ತೊಡಗಿದ್ದ ಸಹಸ್ರಾರು ಜನರು ದುಗಡದಲ್ಲಿದ್ದರು. ಉದ್ದೇಶಿತ ಕಾರ್ಯಕ್ಕೆ ಶಾಸ್ತ್ರೋ ಕ್ತವಾಗಿ ಮಾಡಬೇಕಿದ್ದ ಕಾರ್ಯಗಳೆಲ್ಲಾ ನಡೆಯುತಿದ್ದರೂ ಅಪೂರ್ಣ ದೇವಾಲಯದಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಲು ಗಡಿಬಿಡಿ ಮಾಡುತಿದ್ದ ಭಕ್ತರ ತಲೆಯಲ್ಲಿ ಚುನಾವಣೆಯ ತಯಾರಿಯ ಸಂಬ್ರಮವಿತ್ತು.

ಶಂಕರಾಚಾರ್ಯರ ಮಠಗಳ ತಕರಾರಿನ ನಡುವೆ ರಾಷ್ಟ್ರದ ಪ್ರಧಾನ ತನ್ನ ಲಾಗಾಯ್ತಿನ ಸರ್ವಾಧಿಕಾರಿ ಮನೋಭಾವದಿಂದ ಸಾಂಪ್ರದಾಯಿಕ ಟೀಕಾಕಾರರು, ನೂತನ ಶಂಕರಾಚಾರ್ಯರ ಯತಿಗಳೆಡೆಗೆ ಉಪೇಕ್ಷೆಯ ನೋಟ ಬೀರಿ ಎಂಥೆಂಥಾ ವಿರೋಧಗಳನ್ನೆಲ್ಲಾ ಅರಗಿಸಿಕೊಂಡಿದ್ದೇನೆ. ನನ್ನ ಪ್ರಾಂತದಲ್ಲಿ ಬಹುಸಂಖ್ಯಾತರಲ್ಲದ ಜನರ ಹೆಣಗಳ ಮೇಲೆ ರುದ್ರನರ್ತನ ಆಡಿದ್ದಾಗ ನಮ್ಮ ಬೀಷ್ಮರೇ ರಾಜ್ಯಧರ್ಮ ಪಾಲಿಸು ಎಂದು ಆದೇಶಿಸಿದ್ದರು.

ಸಾರ್ವಜನಿಕರು, ಗುರುಗಳ ಹಿತಾಸಕ್ತಿ ಕಾಯುವುದು ಫ್ರಧಾನನ ಕೆಲಸವಲ್ಲ. ಪ್ರಧಾನನೆಂದರೆ ಮಂಡಲ್‌ ಪಂಚಾಯತ್‌ ಪ್ರಧಾನನಾಗಲಿ, ಪರಿವಾರದ ಪ್ರಧಾನನಾಗಲಿ, ದೇಶದ ಪ್ರಧಾನನಾಗಲಿ ಅವರಿಗೆ ಹಿಟ್ಲರ್‌ ಮಾದರಿಯಾದರೆ ಪರಿವಾರಕ್ಕೆ ಸಮಾಧಾನವಾದರೆ ಸಾಕು. ಪರಿವಾರದಲ್ಲಿ ರಾಜಧರ್ಮವಿಲ್ಲ ಅಲ್ಲೇನಿದ್ದರೂ ಮುನುಧರ್ಮ.

ಪ್ರಧಾನ ತನ್ನ ಹುಸಿನಗೆಯಲ್ಲಿ ಯಜಮಾನನ ಪಾತ್ರವಹಿಸಿದ ಶುಭ್ರಬಟ್ಟೆ ಬಿಟ್ಟರೆ ಮತ್ತೇನೂ ಶುಭ್ರವಿರಬೇಕೆಂದು ಬಯಸದ ಯಜಮಾನ ಬಲರಾಮನ ಪ್ರಾಣಪ್ರತಿಷ್ಠೆಯ ಧಾರ್ಮಿಕ ಕಾರ್ಯ ನೆರವೇರಿಸುತಿದ್ದ ಯತಿಗಳೆಡೆಗೆ ನೋಡಿದ ಯತಿಗಳೇ ಸತ್ಯವೋ? ಧರ್ಮವೋ? ನಾನೇನೂ ಕಾಣೆ ಆದರೆ ನಿಮ್ಮ ಭಕ್ತಿ ಇದೆಯಲ್ಲ ಇದು ಹನುಮಂತನ ಶೃದ್ಧಾ ಭಕ್ತಿ ಮೀರಿದ್ದು.

ಶ್ರೀರಾಮ ಪರವಶರಾದ ನಿಮಗೆ ಅಲೌಕಿಕ ಜ್ಞಾನವಿರಬಹುದು ಆದರೆ ನೀವೂ ಕೂಡಾ ನನ್ನಂತೆ ನಟಿಸುವವರೇ ದೇಶದಾದ್ಯಂತ ಕರಸೇವೆ ಮಾಡಿದ ಲಕ್ಷಾಂತರ ಜನರಿಗೆ ಬಿಡಿಗಾಸಿನ ನಿರೀಕ್ಷೆ ಇಲ್ಲ ಆದರೆ ನಾನು ನೀವು?

ರಾಮನ ದೆಸೆಯಿಂದ ಬರುವ ದಾನ, ಧರ್ಮಗಳೆ ನಮಗೆ ಕೊಟ್ಯಾಂತರ ಮೌಲ್ಯದ್ದು ಮೇಲಿಂದ ಗೌರವ ಕಾಣಿಕೆ ಈ ಬಗ್ಗೆ ರಾಜಧರ್ಮದಲ್ಲಿ ನೀತಿಸಂಹಿತೆ ಇರಬಹುದು ಆದರೆ ನಮ್ಮ ಮನುಧರ್ಮದಲ್ಲಿ ರಾಜ, ಪುರೋಹಿತರ ತಪ್ಪು, ದೋಷಗಳಿಗೆಲ್ಲಾ ಮಾಪಿ. ನಿಮ್ಮ ರಾಮ ನಮ್ಮನ್ನು ಬಿಡಬಹುದೆ?ನಮ್ಮ ಭೀಷ್ಮರ ರಾಜಧರ್ಮದ ಎಚ್ಚರಿಕೆ ನೆನಪಾಗುತ್ತದೆ. ಆಳುವವರು ಪ್ರಜೆಗಳನ್ನು ಸಮಾಧಾನದಲ್ಲಿರಿಸಬೇಕು ಅಷ್ಟೆ. ಅಭಿವೃದ್ಧಿ, ಸಂತೃಪ್ತಿ, ಕಾಲ್ಪನಿಕ ರಾಮ ರಾಜ್ಯದ ರೀತಿ ನಾವು ನಮ್ಮ ದೇಶದ ಜನರನ್ನು ಸಮಾಧಾನದಲ್ಲಿಡಲು ಸಾಧ್ಯವಿಲ್ಲ. ಆದರೆ ಸಂತೃಪ್ತಿ ಸಮಾಧಾನಗಳನ್ನು ಧಾರ್ಮಿಕ ನಶೆಯ ಮೂಲಕವೂ ತುಂಬಬಹುದು ಈಗ ಹೇಳು ರಾಮ ನಿಜದ ಸಂತೃಪ್ತಿ,ರಾಮರಾಜ್ಯ ಮಾಡಲು ಸಾಧ್ಯವಿಲ್ಲದ ನಾವು ಭಕ್ತಿಯ ನಶೆಯ ಸಂತೃಪ್ತಿ ಪ್ರಾಪ್ತಿಸಿ ನಮ್ಮ ಉದ್ದೇಶ ಸಾಧಿಸಿಕೊಳ್ಳುವುದು ತಪ್ಪೆ?

ಸ್ವಗತದಲ್ಲಿ ಯಜಮಾನ ಧ್ಯಾನಿಸುತ್ತಿರುವುದು ಮೇಲ್ನೋಟಕ್ಕೆ ಧ್ಯಾನ, ರಾಮಧ್ಯಾನವಾಗಿ ಕಂಡರೂ ಆಧ್ಯಾತ್ಮಿಕ ಸಾಧಕರೂ,ನಿಜಧ್ಯಾನಿಗಳೂ ಆದ ಕೆಲವು ಸಾಧಕರಿಗೆ ಈ ಯಜಮಾನನ ನಾಟಕ ಫೇಕುತನ, ಕಪಟತನಗಳ ಪರಿಚಯವಾಗಿ ರಾಷ್ಟ್ರದ ಆಧ್ಯಾತ್ಮಿಕ ಔನ್ಯತ್ಯದಲ್ಲಿ ಎಂಥಾ ಅಪಶಕುನ ನೇತೃತ್ವವಹಿಸಿದೆಯಲ್ಲ ಅನಿಸಿತು. ಅದೆಷ್ಟನೆ ಸಲವೋ ಮತ್ತೆ ಸಾಧಕರು ಮೌನವಾದರು.

ಉತ್ತಮ ಕೆಲಸಕ್ಕೆ ತಾತ್ಕಾಲಿಕ ಅನ್ಯಾಯವನ್ನೂ ಸಹಿಸಬೇಕಂತೆ ಬಲರಾಮ ಅಪೂರ್ಣ ಕಟ್ಟಡದಲ್ಲಿ ಜೀವತುಂಬಿಕೊಳ್ಳಬೇಕಾದರೆ ಆಗುತ್ತಿರುವ ಅಪಚಾರ, ಅಪಶಕುನಗಳನ್ನೂ ಸಹಿಸುತ್ತಾ ಕೂತಿದ್ದಾನೆ. ಒಂದೂವರೆ ಕೋಟಿಲಕ್ಷ ಜನರನ್ನೇ ಮೂರ್ಖನಾಗಿಸಿದ ಯಜಮಾನ ಪರಿವಾರದ ನೆರವು ಪಡೆದುಕೊಂಡಿದ್ದಾನೆ. ಇದೇನಾಗುತ್ತಿದೆ. ವಿಶ್ವಾಮಿತ್ರರು ಕಾಡಿನ ಸನ್ಯಾಸಿಯ ಕಾಮಧೇನು ಬಯಸಿ ರಾಜ್ಯ ಬಿಟ್ಟುಕೊಡಲು ಮುಂದಾಗಿದ್ದರಲ್ಲವೆ? ಋಷಿ, ತಪಸ್ವಿಗಳಿಗೆ ಆಗು- ಹೋಗುಗಳೇ ಕಣ್ಮುಂದೆ ಕಾಣುತ್ತಿ ರುವಾಗ ಇಲ್ಲಿರುವ ತಪಸ್ವಿಗಳಿಗೆ ಈ ಅಪಶಕುನ ಕಾಣುತ್ತಿಲ್ಲವೆ?

ಅಯೋಧ್ಯೆಯಲ್ಲಿ ಎಲ್ಲವೂ ಸಾಂಗವಾಗಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸಮೂಹಸನ್ನಿಸಗೆ ಒಳಗಾದ ಪ್ರಜೆಗಳು ಸಮ್ಮತಿಯಲ್ಲಿ ಅಜ್ಞಾನದಲ್ಲಿ, ಅಂಧಕಾರದಲ್ಲಿ ದೇಶಾದ್ಯಂತ ರಾಮಧ್ಯಾನದಲ್ಲಿ ತೇಲುತಿದ್ದಾರೆ. ಎಲ್ಲವೂ ಸಾಂಗವಾಗಿ ನಡೆಯಲಿ ಎಂದು ಪುರೋಹಿತರು ಯಜಮಾನನಿಗೆ ದಾನ ನೀಡುತಿದ್ದಾರೆ. ಯಜಮಾನ ಪುರೋಹಿತರಿಗೆ ದಾನ ನೀಡುತಿದ್ದಾನೆ!.

ದಾನ-ಧರ್ಮಗಳ ವ್ಯಹಾರದಲ್ಲಿ ರಾಜಧರ್ಮ ಕಾಣುತ್ತಿಲ್ಲ ಇದುವೇ ರಾಮರಾಜ್ಯ ಎಂದು ಯಜಮಾನ ಭ್ರಾಂತಿಗೊಳಗಾಗಿದ್ದಾನೆ. ರಾಮನ ವಾನರ ಸೇನೆಯಂತೆ ಪರಿವಾರ ಯಜಮಾನನನ್ನು ಹಿಂಬಾಲಿಸುತ್ತಿದೆ. ಯಜಮಾನ ಪರಿವಾರ ಪರಸ್ಪರ ಹಿಂಬಾಲಿಸುತ್ತಾ ಲೋಕ ಭ್ರಾಂತಿಗೊಳಗಾಯಿತು ಎಂದು ಸಂಭ್ರಮಿಸುತಿದ್ದಾರೆ.

ಎಲ್ಲವೂ ಮುಗಿದ ಮೇಲೆ ರಾಮನ ಪ್ರಾಣಪಕ್ಷಿ ಬಂತು ಎಲ್ಲೆಲ್ಲೂ ಅಪಚಾರವಾಗಿದೆಯಲ್ಲ ೨೦೨೪ ರ ಚುನಾವಣೆ ದರ್ಧಿಗೆ ಒಂದು ವರ್ಷ ಮೊದಲೇ ನನ್ನ ಪ್ರಾಣ ಪ್ರತಿಷ್ಠಾಪನೆಗೆ ಹೊರಟಿದ್ದೀರಿ. ರಾಮ ಬಂದನೋ ಎಂದೂ ನೋಡುತ್ತಿಲ್ಲ ಇನ್ನಷ್ಟು ಬೇಕೆನಗೆ ಹೃದಯಕ್ಕೆ ರಾಮ ಎನ್ನುವ ನಿಜ ಮುಗ್ಧ ರಾಮ ಭಕ್ತರ ಮನದಲ್ಲಿ ನಾನು ನೆಲೆಸಬೇಕೋ? ನಿಮ್ಮ ಶ್ರೀಮಂತಿಕೆಯ ಆಡಂಬರದ ರಾಜಕೀಯ ಅಬ್ಬರದ ತೋರಿಕೆ ಭಕ್ತಿಗೆ ಮೆಚ್ಚಬೇಕೋ?

ಯಜಮಾನ ನನ್ನ ನೆಪ, ಹೆಸರಲ್ಲಿ ಎಷ್ಟು ಕೆಡುಕು ಮಾಡಿದೆ. ನಿಮ್ಮ ಭೀಷ್ಮರೆ ನಿನಗೆ ರಾಜಧರ್ಮ ತಿಳಿಸಿದಾಗ ಅಹಂಕಾರದಿಂದ ಉಪೇಕ್ಷಿ ಸಿದೆ. ಈಗ ನಿನ್ನ ಪಾಪದ ಕೊಡ ತುಂಬುತ್ತಿದೆ. ನೀನು ಮನೆಯ ಬಂಗಾರ ಕದ್ದು ಓಡಿಹೋಗಿದ್ದಾಗ ಕ್ಷಮಿಸಿದೆ. ಚಾ ಮಾರಿದೆ, ದೇವರ ಹುಡುಕಿದೆ ಎಂದೆಲ್ಲಾ ಸುಳ್ಳುಹೇಳಿದೆ ನಿನ್ನ ಹತ್ತಾರು ತಪ್ಪುಗಳನ್ನು ನಾನು ಕ್ಷಮಿಸಿದೆ.

ರಾಜಧರ್ಮ ಮರೆದು ಧರ್ಮಾಂಧನಾಗಿ ಪ್ರಜೆಗಳ ಮಾರಣ ಹೋಮ ನಡೆಸಿದೆ ನೋಡು ಆಗ ನನಗೆ ಗಾಬರಿಯಾಯಿತು. ಅಷ್ಟರಲ್ಲಿ ನಿಮ್ಮ ಪರಿವಾರ ನನ್ನನ್ನು ಅಣು, ತೃಣ ಕಾಷ್ಠಗಳಲ್ಲಿ ಬಂಧಿಸಿ ಮುಖಕಟ್ಟಿತ್ತು. ಈಗ ಸ್ವತಂತ್ರನಾಗುತಿದ್ದೇನೆ ನಿಮ್ಮ ಆಡಂಬರದ ಉದ್ಘೋಷದ ಸಮಯಸಾಧಕತನ ನನಗೆ ಅರ್ಥವಾಗಿದೆ. ಇದೇ ಕೊನೆ ನಿನಗೆ, ನಿನ್ನ ಪರಿವಾರಕ್ಕೆ ನನ್ನ ದೇಶವನ್ನು ಅಡವಿಡಲಾರೆ. ಅಪಶಕುನ ಇದೇ ದಶಕದಲ್ಲಿ ತೀರಲಿದೆ. ನಾನು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎನ್ನುವವರ ಎದೆಯಲ್ಲೇ ನೆಲೆಸುತ್ತೇನೆ ಶ್ರೀಮಂತಿಕೆ, ಅಧಿಕಾರ ದಾಹದ ಭಕ್ತಿ, ಸೋಗಿಗೆ ನನ್ನ ಮನ ರೋಸಿದೆ. ನಾನಿನ್ನು ಹೋಗಿ ಬರುವ ಮಾತಿಲ್ಲ ಇಲ್ಲೇ ನೆಲೆಸಿ ಈವರೆಗಿನ ಪಾಪ ತೊಳೆದು ನನ್ನ ದೇಶಕ್ಕೆ ಒಳಿತು ಮಾಡುತ್ತೇನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *