ದಿನೇಶ್‌ ಅಮ್ಮಿನಮಟ್ಟು ನೋಡಲು ಹೇಳಿದ ಸಿನೆಮಾ ಯಾವುದು ಗೊತ್ತೆ?

ಕತೆ, ನಿರ್ದೇಶನ ಮತ್ತು ಅಭಿನಯದ ಕಾರಣಕ್ಕಾಗಿಯೇ ಎಲ್ಲರೂ ನೋಡಲೇಬೇಕಾದ ಚಿತ್ರ ‘ಕೋಳಿ ಎಸ್ರು’. ಇದರ ಜೊತೆ ಈ ಚಿತ್ರವನ್ನು ನೋಡಲು ಇನ್ನೊಂದು ಕಾರಣವೂ ಇದೆ. ಕನ್ನಡದ ಕೆಟ್ಟ ಚಿತ್ರಗಳನ್ನು ನೋಡಿ ಯಾರಾದರೂ ಪಾಪಪ್ರಜ್ಞೆಯಿಂದ ನರಳುತ್ತಿದ್ದರೆ, ಅವರು ಈ ಚಿತ್ರವನ್ನು ನೋಡಿ ಮಾಡಿರುವ ಪಾಪವನ್ನು ಪರಿಹರಿಸಿಕೊಳ್ಳಬಹುದು. ಪಾಪಿಗಳು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹಣಹಾಕಿ ಪಾಪ ತೊಳೆದುಕೊಂಡ ಹಾಗೆ.

ಸಿನೆಮಾ ಒಂದು ಕಲೆಯಾಗಿ ಉಳಿದಿಲ್ಲ, ಅದು ಕೂಡಾ ಬಂಡವಾಳ ಹಾಕಿ ಲಾಭ ತೆಗೆಯುವ ಉದ್ಯಮವಾಗಿದೆ. ಚಿತ್ರದ ಕೇಂದ್ರ ಸ್ಥಾನದಲ್ಲಿದ್ದ

ಕತೆ, ನಾಯಕ-ನಾಯಕಿ ಮತ್ತು ನಿರ್ದೇಶಕ ಪಕ್ಕಕ್ಕೆ ಸರಿದು ನಿರ್ಮಾಪಕ ಆ ಸ್ಥಾನವನ್ನು ಆಕ್ರಮಿಸಿಕೊಂಡು ಬಹಳ ದಿನಗಳಾಗಿದೆ. ಪ್ಯಾನ್ ಇಂಡಿಯಾ ಕಿರೀಟಕ್ಕಾಗಿಯೇ ಹಣದ ಹೊಳೆ ಹರಿಸಲಾಗುತ್ತಿದೆ. ಈ ಹಣ ಸಿನೆಮಾದಿಂದಲೇ ವಾಪಸು ಬರುತ್ತಿದೆಯೋ ಇಲ್ಲವೇ ಬೇರೇನಾದರೂ ಕರಾಮತ್ತು ಇದೆಯೇ ಎನ್ನುವುದನ್ನು ಬಲ್ಲವರು ಹೇಳಬೇಕು. ಇವೆಲ್ಲದರ ನಡುವೆ ತನ್ನ ಸ್ಥಾನ ಮತ್ತು ಮಾನ ಬಿಟ್ಟುಕೊಡುವುದಿಲ್ಲ ಎಂಬ ಛಲದೊಂದಿಗೆ ನೆಲಕಚ್ಚಿ ನಿಂತ ನಿರ್ಮಾಪಕರು, ನಿರ್ದೇಶಕರು ಮತ್ತು ನಟನಟಿಯರೂ ಇದ್ದಾರೆ. ಅವರನ್ನು ‘’ಕೋಳಿ ಎಸ್ರು’’ ಚಿತ್ರದಲ್ಲಿ ಕಾಣಬಹುದು.

ಕಾ.ತ.ಚಿಕ್ಕಣ್ಣ ಅವರ ಸಣ್ಣ ಕಥೆಯನ್ನಾಧರಿಸಿದ ‘’ಕೋಳಿ ಎಸ್ರು’’ ಚಿತ್ರವನ್ನು ಚಂಪಾ ಶೆಟ್ಟಿಯವರು ನಿರ್ದೇಶಿಸಿದ್ದಾರೆ. ಈಗಾಗಲೇ ಜನ ಮೆಚ್ಚಿರುವ ‘’ಅಮ್ಮಚ್ಚಿಯೆಂಬ ನೆನಪು’’ ಚಿತ್ರವನ್ನು ನಿರ್ದೆಶಿಸಿರುವ ಚಂಪಾಶೆಟ್ಟಿ ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದವರು. ಅವರ ನಿರ್ದೇಶನದ ‘’ಗಾಂಧಿ ಬಂದ’’ ನಾಟಕ ಮರೆಯಲಾಗದ್ದು.

ತನ್ನ ಹತ್ತಾರು ಇತರ ಸಾಹಸಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುವ ಅಕ್ಷತಾ ಪಾಂಡವಪುರ ಮೂಲತ: ಪ್ರತಿಭಾವಂತ ನಟಿ. ಇವರನ್ನು ಮೊದಲ ಬಾರಿ ‘’ಒಬ್ಬಳು’’ ಏಕಾಂಕದಲ್ಲಿ ನೋಡಿದಾಗ ಮತ್ತೆ ಸ್ಮಿತಾ ಪಾಟೀಲ್ ಎಲ್ಲಿಂದ ಎದ್ದು ಬಂದರು ಎಂದು ಅಚ್ಚರಿಪಟ್ಟಿದ್ದೆ. ರಾಜ್ಯಪ್ರಶಸ್ತಿ ತಂದುಕೊಟ್ಟ ‘’ಪಲ್ಲಟ’’ ಮತ್ತು ಇತ್ತೀಚಿನ ‘’ಪಿಂಕಿ ಎಲ್ಲಿ’’ ಚಿತ್ರದಲ್ಲಿ ನೋಡಿದವರಿಗೆ ಅಕ್ಷತಾ ಅವರ ಪ್ರತಿಭೆಯ ಪರಿಚಯವಾಗಿರಬಹುದು. ಕನ್ನಡ ಚಿತ್ರರಂಗ ಇಂತಹ ಕಲಾವಿದರನ್ನು ಬಳಸಿಕೊಳ್ಳಲು ಸೋತಿರುವುದು ಅಚ್ಚರಿ ಅಲ್ಲ. ಇವರಿನ್ನೂ ತಮಿಳು, ಮಲೆಯಾಳಿ ನಿರ್ದೇಶಕರ ಕಣ್ಣಿಗೆ ಯಾಕೆ ಬಿದ್ದಿಲ್ಲ ಎನ್ನುವುದಷ್ಟೇ ಅಚ್ಚರಿ.

ಈ ಇಬ್ಬರು ಪ್ರತಿಭಾವಂತೆಯರ ಜೊತೆ ಎಂಬ ಅಪೇಕ್ಷಾ ನಾಗರಾಜ್ ಎಂಬ ಭರವಸೆಯ (ಬಾಲ)ಕಲಾವಿದೆ ಕೂಡಾ ಸೇರಿಕೊಂಡಿದ್ದಾರೆ.

ನಾನು ಸಿನೆಮಾ ವಿಮರ್ಶಕನಲ್ಲದ ಕಾರಣ ಆ ಅಧಿಕಪ್ರಸಂಗತನ ಮಾಡೋದಿಲ್ಲ. ಒಂದೇ ಸಾಲಿನಲ್ಲಿ ಹೇಳುವುದಾದರೆ ಕತೆ, ನಿರ್ದೆಶನ, ಅಭಿನಯ, ಸಂಭಾಷಣೆ, ಸಂಗೀತ ಮತ್ತು ಛಾಯಾಗ್ರಹಣ- ಈ ಆರೂ ವಿಭಾಗಗಳಲ್ಲಿಯೂ ನೂರಕ್ಕೆ ನೂರು ಅಂಕ ಪಡೆಯುವ ಚಿತ್ರ ‘ಕೋಳಿ ಎಸ್ರು’’

ತಾಯಿ-ಮಗಳ ಸಂಬಂಧದ ಕತೆಯಾಗಿ ಪ್ರಾರಂಭವಾಗುವ ಚಿತ್ರ, ವ್ಯವಸ್ಥೆಯ ವಿರುದ್ದ ಸಿಡಿದೆದ್ದ ಸ್ವಾಭಿಮಾನಿ ಹೆಂಡತಿಯನ್ನು ತೋರಿಸಿ ಕೊನೆಗೊಳ್ಳುತ್ತದೆ.

ಚಿತ್ರದ ಕತೆ ಈ ಕಾಲಕ್ಕೆ ಅಪ್ರಸ್ತುತವಾಗಿದೆ, ಕೋಳಿ ಸಾರಿಗಾಗಿ ಇಷ್ಟೆಲ್ಲ ಬವಣೆ ಪಡುವ ಬಡತನ ಈಗೆಲ್ಲಿದೆ ಎಂದು ಕೇಳುವವರಿಗೆ, ಕೆಜಿಎಫ್ ಚಿತ್ರದಲ್ಲಿ ಈಗಿನ ಕೋಲಾರ ಎಲ್ಲಿದೆ ಎಂಬ ಪ್ರಶ್ನೆಯೇ ಉತ್ತರ.

ಇಂತಹದ್ದೊಂದು ಕಾಲಕ್ಕೆ ಅಪ್ರಸ್ತುತವಾದ ಕತೆಯ ಸಿನೆಮಾವನ್ನು ನಾವು ಎಂತಹ ಕಾಲದಲ್ಲಿದ್ದೆವು ಎನ್ನುವುದನ್ನು ಮೆಲುಕು ಹಾಕಿಕೊಳ್ಳಲಿಕ್ಕಾದರೂ ಒಮ್ಮೆ ನೋಡಬೇಕು, ಬಹುಷ: ಈ ಮೆಲುಕಾಟ ನಮ್ಮನ್ನು ಇನ್ನಷ್ಟು ಒಳ್ಳೆಯ ಮನುಷ್ಯರನ್ನಾಗಿ ಮಾಡಬಹುದೇನೋ?

ದಯವಿಟ್ಟು ಥಿಯೇಟರ್ ಗೆ ಹೋಗಿ ಚಿತ್ರ ನೋಡಿ,

ಬೇಗ ಹೋಗಿ..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *