oddolaga drama – bahumukhi – ನಾಟಕ ವೀಕ್ಷಣೆ ಆರೋಗ್ಯಕ್ಕೆ ಪೂರಕ

ಬಹುಮುಖಿ : ಒಡ್ಡೋಲಗ ರಂಗ ಪರ್ಯಟನದ ಹೊಸ ನಾಟಕ

ಸಿದ್ದಾಪುರ. ಪ್ರತಿ ವರ್ಷವೂ ಹೊಸದೊಂದು ನಾಟಕದೊಂದಿಗೆ ತನ್ನ ರಂಗ ಪರ್ಯಟನ ಪ್ರಾರಂಭಿಸುವ ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಈ ವರ್ಷ ವಿವೇಕ ಶಾನಭಾಗ ವಿರಚಿತ ಬಹುಮುಖಿ ನಾಟಕವನ್ನು ಬಹು ಆಪ್ಯಾಯಮಾನವಾಗಿ ಪ್ರಸ್ತುತಪಡಿಸಿತು. ಪಟ್ಟಣದ ಶ್ರೀ ಶಂಕರ ಮಠದಲ್ಲಿ ನಡೆದ ಮೊದಲ ಪ್ರದರ್ಶನದ ಸಂದರ್ಭದಲ್ಲಿ ರಂಗ ಸಂಚಾರ ಉದ್ಘಾಟಿಸಿದ ಪತ್ರಕರ್ತ ಹಾಗೂ ಲೇಖಕ ಗಣೇಶ ಅಮ್ಮಿನಗಡ ನಾಟಕದ ಪಠ್ಯ ರಂಗದಲ್ಲಿ ಅಭಿನಯಗೊಳ್ಳುವುದನ್ನು ಪ್ರೇಕ್ಷಕರು ನೋಡಿ ಆನಂದಿಸಬೇಕು.ಅದರಿಂದ ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತ ದೆ ಎಂದರು. ಕದಂಬ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ ಮಂಡ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಒಡ್ಡೋಲಗ ತಂಡದ ರಂಗ ಕಾಯಕವನ್ನು ಪ್ರಶಂಸಿದರು.

ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಸ್ವಾಗತಿಸಿ ಪರಿಚಯಿಸಿದರು. ಪ್ರಜ್ಞಾ ಹಿತ್ಲಕೈ ವಂದಿಸಿದರು. ಸಂಧ್ಯಾ ಶಾಸ್ತ್ರಿ ನಿರೂಪಿಸಿದರು. ರೋಚಕ ಕತೆಯನ್ನು ಓದುಗರಿಗೆ ಕೊಡಬೇಕೆಂದು ಸುದ್ದಿಯನ್ನು ಬೆನ್ನಟ್ಟಿಹೋಗುವ ಪತ್ರಕರ್ತನಿಗೆ ಎದುರಾಗುವ ಜಗತ್ತು, ನಮ್ಮ ದಿನನಿತ್ಯದ ಬದುಕನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುವ ಮಾಧ್ಯಮಗಳು ಮುಂತಾದ ವಿಷಯಗಳ ಸುತ್ತ ತಳುಕು ಹಾಕುವ ಬಹುಮುಖಿ ನಾಟಕ ಒಡ್ಡೋಲಗ ತಂಡದ ಗಣಪತಿ ಬಿ ಹಿತ್ಲಕೈ ಅವರ ನಿರ್ದೇಶನದಲ್ಲಿ ಮೊದಲ ಪ್ರಯೋಗದಲ್ಲೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತು. ನಾಗರಾಜ ಬರೂರು, ಮಾಧವ ಶರ್ಮ ಕಲಗಾರ, ಕೇಶವ ಹೆಗಡೆ ಕಿಬ್ಳೆ, ಪುಷ್ಪಾ ರಾಘವೇಂದ್ರ ಸಾಗರ, ಪ್ರಸನ್ನಕುಮಾರ ಎನ್.ಎಮ್. ಸಾಗರ, ಗಣಪತಿ ಬಿ ಹಿತ್ತಲಕೈ, ಶ್ರೀರಾಮ ಗೌಡ ಹೊಸೂರು, ಸಂಧ್ಯಾ ಶಾಸ್ರ್ರಿ ಭೈರುಂಬೆ, ನವೀನಕುಮಾರ ಕುಣಜಿ, ಪ್ರೀತಿ ಹೆಗಡೆ, ನಂದಿತಾ ಭಾಗ್ವತ್ ಯಲ್ಲಾಪುರ, ಯೋಗೇಶ ಕುಣಜಿ, ಸಮರ್ಥ ಹೊನ್ನೆಕೈ ನಾಟಕದ ವಿವಿಧ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *