ಜನವಿರೋಧಿಗಳಿಗೆ ಟಿಕೇಟ್‌ ಕೊಡಿಸುವ ಪರಿವಾರ ಜನವಿರೋಧಿಯಲ್ಲವೆ?

ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯದ ಕೆಲವು ಸಂಸದರಿಗೆ ಅವರವರ ಕ್ಷೇತ್ರಗಳಲ್ಲಿ ಗೋಬ್ಯಾಕ್‌ ಸಿಂಹ, ಗೋಬ್ಯಾಕ್‌ ಹೆಗಡೆ,ತೊಲಗಿ ಕರಂದ್ಲಾಜೆ ಎನ್ನುವ ವಿರೋಧಿ ಅಭಿಯಾನ ಪ್ರಾರಂಭವಾಗಿದೆ.

ಹೆಗಡೆ, ಕರಂದ್ಲಾಜೆ, ಸಿಂಹ, ಜಿಗಜಿಣಗಿ,ಸದಾನಂದ ಗೌಡ ಸೇರಿದಂತೆ ಅನೇಕ ಸಂಸದರು ಜನರ ನಿರೀಕ್ಷೆ ತಲುಪುವುದು ಹಾಗಿರಲಿ, ಸಾರ್ವಜನಿಕ ವಲಯದಲ್ಲಿ ಸಮಾಧಾನಕರ ಅಥವಾ ಒ.ಕೆ. ಎನ್ನುವ ಗೌರವವನ್ನೂ ಇಟ್ಟುಕೊಂಡಿಲ್ಲ.

ಮೈಸೂರಿನ ಪ್ರತಾಪ್‌ ಸಿಂಹ, ಜಿಗಜಿಣಗಿ, ಅನಂತಕುಮಾರ ಹೆಗಡೆ, ಶೋಭಾ ಸೇರಿದ ಬಹುತೇಕರು ಸಂಸತ್‌ ನಲ್ಲಿ ಭಾಗವಹಿಸಿಲ್ಲ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್‌ ನ ಗಮನ ಸೆಳೆದಿಲ್ಲ ಎನ್ನುವ ಆರೋಪಗಳಿವೆ.

ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಮತ್ತು ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪ್ರಸ್ತಾಪ, ಚರ್ಚೆ ಸಂದರ್ಭದಲ್ಲಿ ಗೈರು ಹಾಜರಿರುವ ಬಗ್ಗೆ ಈಗ ದಾಖಲೆಗಳು ಬಿಡುಗಡೆ ಆಗುತ್ತಿವೆ.

ಮಲೆನಾಡು, ಕರಾವಳಿಯ ಅರಣ್ಯ ಅತಿಕ್ರಮಣದ ಬಗ್ಗೆ ಸಂಸತ್‌ ನಲ್ಲಿ ತುಟಿ ಬಿಚ್ಚದ ಈ ಸಂಸದರು. ಈಗ ಚುನಾವಣೆ ಎದುರಾಗುತ್ತಲೇ ತಮ್ಮ ಲಾಗಾಯ್ತಿನ ಹಿಂದುತ್ವ, ರಾಷ್ಟ್ರೀಯತೆ, ದೇಶಭಕ್ತಿಯ ಹಳೆ ಆಡಿಯೋ ರಿ ಪ್ಲೇ ಮಾಡತೊಡಗಿದ್ದಾರೆ.

ಭಾರತೀಯರಲ್ಲಿ ೯೯.೯೯ ಪ್ರತಿಶತ ದೇಶಪ್ರೇಮಿಗಳು, ದೇಶಪ್ರೇಮವೆಂದರೆ ಪ್ರಾಮಾಣಿಕ ದುಡಿಮೆ, ರಾಷ್ಟ್ರದ ಉನ್ನತಿಗೆ ಅವರವರ ಕ್ಷೇತ್ರಗಳಿಂದಲೇ ಶ್ರಮಿಸುವುದು. ಈ ವಿಚಾರದಲ್ಲಿ ಕಿಸಾನ್‌ (ರೈತ) ಜವಾನ್‌ (ಸೈನಿಕ) ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಒಳಗೊಳ್ಳುತ್ತವೆ.

ಜನರಿಂದ ಆಯ್ಕೆಯಾಗುವ ಪ್ರತಿನಿಧಿ, ಶಾಸಕ, ಸಂಸದ ಮಂತ್ರಿ, ಮುಖ್ಯಮಂತ್ರಿ-ಪ್ರಧಾನಿ ಯಾರೂ ಜವಾಬ್ಧಾರಿಯಿಂದ ನಡೆದುಕೊಳ್ಳದಿದ್ದರೆ ಅದು ಕರ್ತವ್ಯ ಲೋಪದ ಜೊತೆಗೆ ದೇಶದ್ರೋಹ.

ಕರ್ನಾಟಕದಿಂದ ಸಂಸತ್‌ ಗೆ ಆಯ್ಕೆಯಾಗಿದ್ದ ೨೮ ಜನ ಸಂಸದರಲ್ಲಿ ಕೆಲವರನ್ನು ಬಿಟ್ಟರೆ ಬಹುತೇಕರು ತಮ್ಮ ಕರ್ತವ್ಯ ನಿರ್ವಹಿಸದ ದೇಶದ್ರೋಹಿಗಳು. ಇಂಥ ಜನವಿರೋಧಿ ಬೇಜವಾಬ್ಧಾರಿಗಳಿಗೆ ಯಾವುದೇ ಪಕ್ಷ ಅವಕಾಶ ಕೊಡುವುದು, ಅವರಿಗೆ ಜನ ಮತದಾನ ಮಾಡುವುದು ದೇಶದ್ರೋಹದ ಕೆಲಸ.

ಈಗ ರಾಜ್ಯದ ಬಹುತೇಕ ಸಂಸದರಿಗೆ ಬಿ.ಜೆ.ಪಿ. ಮತ್ತೆ ಟಿಕೇಟ್‌ ನೀಡುತ್ತಿದೆ! ಇಂಥ ಸಂಸದರಿಗೆ ಟಿಕೇಟ್‌ ಕೊಡಿ ಎಂದು ಬಿ.ಜೆ.ಪಿ. ನಿಯಂತ್ರಿಸುತ್ತಿರುವ ಪರಿವಾರ ಫರ್ಮಾನು ಮಾಡುತ್ತಿದೆಯಂತೆ! ಈ ದುಷ್ಟ ಪರಿವಾರ ಸಂವಿಧಾನ ವಿರೋಧಿ, ಬಹುಸಂಖ್ಯಾತರ ವಿರೋಧಿ ಜನವಿರೋಧಿ ಪರಿವಾರ. ಈ ಪರಿವಾರದ ಗುಲಾಮರ ಪಕ್ಷ ಭಾರತಕ್ಕೇ ಶಾಪ. ಇಂಥ ಪಾಪ, ಶಾಪಗಳಿಂದ ಉತ್ತರ ಕನ್ನಡ,ಉಡುಪಿ ಸೇರಿದಂತೆ ರಾಜ್ಯ, ದೇಶಗಳ ಅನೇಕ ಕ್ಷೇತ್ರಗಳಲ್ಲಿ ಜನವಿರೋಧಿಗಳನ್ನು ಬಿ.ಜೆ.ಪಿ. ಅಭ್ಯರ್ಥಿಗಳನ್ನಾಗಿಸಲು ಸಂಘ ಪರಿವಾರ ಸೂಚಿಸಿದೆಯಂತೆ! ಸಾಂವಿಧಾನಿಕ ಮಾನ್ಯತೆ ಇಲ್ಲದ ಬಹುಜನವಿರೋಧಿಗಳ ದುಷ್ಟ ಸಂಘ ತನ್ನ ಸ್ವಾರ್ಥಕ್ಕೆ ಜನವಿರೋಧಿ ಮತಾಂಧ ದುಷ್ಟರನ್ನು ಜನಪ್ರತಿನಿಧಿಗಳನ್ನಾಗಿಸಿ ದುಷ್ಟ ಕೈಗೆ ಅಧಿಕಾರ ಕೊಡಿಸುವ ಹುನ್ನಾರಗಳ ಹಿಂದೆ ಅವರ ಲಾಗಾಯ್ತಿನ ವಿದ್ರೋಹಿತನವಿದೆ.

ಭಾರತದ ಬಹುಸಂಖ್ಯಾತ ಮೂಲನಿವಾಸಿಗಳ ವಿರೋಧಿ ಸಂಘ ಪರಿವಾರ ಇಂಥ ಸಮಯಸಾಧಕ ಕೆಲಸಗಳಿಂದ ಭಾರತದ ನಾಶಕ್ಕೆ ಪಣತೊಟ್ಟಂತಿದೆ. ಜನಸಾಮಾನ್ಯರ ಮೇಲೆ ಜನದ್ರೋಹಿಗಳನ್ನು ಹೇರುವ ಸಂಘ ಪರಿವಾರ ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜನವಿರೋಧಿಯಲ್ಲವೆ? ಇಂಥ ಸಂಘ, ಪರಿವಾರ ನಿಯಂತ್ರಿತ ಪಕ್ಷ ಜನವಿರೋಧಿತನದ ದೇಶದ್ರೋಹಿ ಸಂಘಟನೆಯಾಗುವುದಿಲ್ಲವೆ? ಇಂಥವರಿಗೆ ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ ಸಿಂಹ, ಕರಂದ್ಲಾಜೆಯಂಥವರೇ ಇಷ್ಟವಾಗುವುದು ಸ್ವಾಭಾವಿಕವಲ್ಲವೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *