ಶ್ರೀರಾಮ ಸಪ್ತಾಹ- ಏಳು ವರ್ಷಗಳ ನಂತರ ಕೊಂಡ್ಲಿಯಲ್ಲಿ


ಸಿದ್ದಾಪುರ
ಪಟ್ಟಣದ ಕೊಂಡ್ಲಿಯ ಶ್ರೀ ಹನುಮಂತ ದೇವಸ್ಥಾನದಲ್ಲಿ ಪ್ರತಿ ೭ ವರ್ಷಗಳಿಗೊಮ್ಮೆ ಜರುಗುವ ಶ್ರೀ ರಾಮ ಸಪ್ತಾಹ ಏ.೧೬ರಿಂದ ೨೩ರವರೆಗೆ ನಡೆಯಲಿದೆ. ಸಮಸ್ತ ಗ್ರಾಮದ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ನಂದಾದೀಪ ಪ್ರತಿಷ್ಠಾಪಿತ ಪರಿವಾರ ಶ್ರೀ ರಾಮದೇವರ ಪೂಜೆ ಹಾಗೂ ಶ್ರೀರಾಮ ಅಖಂಡ ಭಜನಾ ಸಪ್ತಾಹ ನಡೆಯಲಿದೆ ಎಂದು ಕೊಂಡ್ಲಿ ಶ್ರೀ ರಾಮ ಸಪ್ತಾಹ ಸೇವಾ ಸಮಿತಿ ಅಧ್ಯಕ್ಷ ವಕೀಲ ಬಿ.ಎಲ್.ನಾಯ್ಕ ತಿಳಿಸಿದರು.


ಏ.೧೬ರಂದು ಮುಂಜಾನೆ ಹಾಳದಕಟ್ಟಾದಿಂದ ಶ್ರೀರಾಮ ಹಾಗೂ ಪರಿವಾರ ದೇವರುಗಳ ಮೆರವಣಿಗೆ ಆರಂಭಗೊಂಡು ಕೊಂಡ್ಲಿ ಶ್ರೀ ಹನುಮಂತ ದೇವಸ್ಥಾನಕ್ಕೆ ಆಗಮಿಸಲಿದೆ. ನಂತರ ಸಪ್ತಾಹ ನಿಮಿತ್ತಗಣಪತಿ ಪೂಜೆ,ಪುಣ್ಯಾಹ,ಮಹಾಸಂಕಲ್ಪ, ಹಾಗೂ ಪರಿವಾರ ಸಹಿತ ಶ್ರೀ ರಾಮ ದೇವರ ಪ್ರತಿ ಷ್ಠಾಪನೆ ನಂತರ ಮಧ್ಯಾಹ್ನ ೧೨.೦೫ರಿಂದ ಅಖಂಡ ಭಜನಾ ಕಾರ್ಯಕ್ರಮ ಆರಂಭಗೊಳ್ಳುವದು ಎಂದರು.
ಪ್ರತಿದಿನ ಶ್ರೀ ದೇವರ ಸನ್ನಿಧಿಯಲ್ಲಿ ಕುಂಕುಮಾರ್ಚನೆ,ಮಂಗಳಾರತಿ,ಸರ್ವಸೇವಾ ಸಪ್ತಪೂಜೆ.ವಿಶೇಷ ಸಪ್ತ ಸೇವಾ ಸೇವೆ ನಡೆಯಲಿದೆ. ಏ.೨೩ರಂದು ಹನುಮಂತ ಜಯಂತಿ, ಹನುಮಂತ ದೇವರ ಅಷ್ಟಬಂದ ಕಾರ್ಯಕ್ರಮದ ೧೧ನೇ ವರ್ಷದ ವಾರ್ಷಿಕೋತ್ಸವ,ಶ್ರೀರಾಮ ತಾರಕ ಹೋಮ ಹಾಗೂ ಮಹಾಮಂಗಳಾರತಿ ನಡೆಯಲಿದ್ದು ಮಧ್ಯಾಹ್ನ ೨ ಗಂಟೆಯಿಂದ ಅನ್ನ ಸಂತರ್ಪಣೆ ಆರಂಭಗೊಳ್ಳಲಿದೆ. ರಾತ್ರಿ ೯ ಗಂಟೆಯಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.


ಅಖಂಡ ಭಜನಾ ಸಪ್ತಾಹ:
ಕೊಂಡ್ಲಿ ಶ್ರೀ ಹನುಮಂತ ದೇವಾಲಯದಲ್ಲಿ ಅನಾದಿಯಿಂದ ಪ್ರತಿ ೭ ವರ್ಷಕ್ಕೊಮ್ಮೆ ಭಜನಾ ಸಪ್ತಾಹ ಆಯೋಜಿಸಿಕೊಂಡು ಬರುತ್ತಿದ್ದು ೭ ದಿನಗಳ ಕಾಲ ನಿರಂತರವಾಗಿ ಭಜನೆ ಮಾಡಲಾಗುತ್ತದೆ. ಈ ಬಾರಿಯೂ ಸಪ್ತಾಹ ನಡೆಯಲಿದ್ದು ಊರಿನ ೧೩ ಭಜನಾ ತಂಡಗಳು ೨ ತಾಸಿಗೆ ಒಂದು ತಂಡದಂತೆ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಸಲಿವೆ. ಕೆಲವು ಹೊರಗಿನ ತಂಡಗಳಿಗೂ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿಯೇ ಇದೊಂದು ಮಹತ್ವದ ಕಾರ್ಯ ಎಂದು ಬಿ.ಎಲ್.ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಪ್ತಾಹ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರುತಿ ಕೆ.ಕಿಂದ್ರಿ, ಮತ್ತು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಬಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ನೀಲಕಂಠ ಕಿಂದ್ರಿ. ಸಪ್ತಾಹ ಸಮಿತಿ,ಆಡಳಿತ ಕಮಿಟಿ ಪದಾಧಿಕಾರಿಗಳಾದ ಚಂದ್ರಹಾಸ ನಾಯ್ಕ,ನಾರಾಯಣ ಕೆ.ಮಡಿವಾಳ,ದೇವಪ್ಪ ಚಲುವಾದಿ,ರಾಮಕೃಷ್ಣ ನಾಯ್ಕ,ವಾಸುದೇವ ಕೊಂಡ್ಲಿ, ಸುಧೀರ ಕೊಂಡ್ಲಿ ಮುಂತಾದವರಿದ್ದರು.

ಸಿದ್ದಾಪುರ
ಪಟ್ಟಣದ ಉಮಾ ಚನ್ನಬಸಪ್ಪ ದೊಶೆಟ್ಟಿ(೬೨) ನಿಧನರಾಗಿದ್ದಾರೆ. ಅವರು ಓರ್ವ ಪುತ್ರ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಳೆದ ವಾರ ಇವರ ಪತಿ ಚನ್ನಬಸಪ್ಪ ದೊಶೆಟ್ಟಿಯವರು ನಿಧನಹೊಂದಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *