ನಾವು-ನಮ್ಮೂರು- ಸಮಾನ ಮನಸ್ಕರ ಶ್ರೇಷ್ಠ ಕೆಲಸ‌

ಸಂಘ-ಸಂಘಟನೆಗಳಲ್ಲಿ ಬಹುಮತಕ್ಕೆ ಆದ್ಯತೆ. ಕೆಲವೊಮ್ಮೆ ಬಹುಮತವೆಂಬುದು ಮೂರ್ಖರ ನಿರ್ಧಾರವಾಗುವ ಸಂಭವವೂ ಉಂಟು. ಇಂಥ ಬಹುಮತದ ಮೂರ್ಖರ ಕೆಲಸಕ್ಕಿಂತ ಒಬ್ಬರ-ಕೆಲವರ ವಿದಾಯಕ ಕೆಲಸಗಳು ಮಹತ್ವ ಪಡೆಯುವುದುಂಟು ಇಂಥ ನಿದರ್ಶನವೊಂದು ಇಲ್ಲಿದೆ.

ಸಿದ್ಧಾಪುರದ ಉಮೇಶ್‌ ಟಪಾಲ್‌ ನಿವೃತ್ತ ನೌಕರ. ಅವರು ಸರ್ಕಾರಿ ಸೇವೆಯಲ್ಲಿದ್ದಾಗ, ನಿವೃತ್ತಿ ನಂತರ ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಉಮೇಶ್‌ ಟಪಾಲ್‌ ಎಂದರೆ ರೇಷ್ಮೆ ಟಪಾಲ್‌ ಎನ್ನುವ ಮಟ್ಟಿಗೆ ಅನ್ವರ್ಥಕರಾದ ಉಮೇಶ್‌ ನಾಯ್ಕ ತಮ್ಮ ಸೇವಾವಧಿಯಲ್ಲಿ ತಮ್ಮ ಮಿತಿ-ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದವರು. ತಮ್ಮ ಕರ್ತವ್ಯದ ಜೊತೆಗೆ ಅವರ ಸೇವಾ ಮನೋಭಾವ ಎಲ್ಲರ ಗಮನಸೆಳೆದಿದೆ. ಹಲವು ಸಂಘ-ಸಂಸ್ಥೆ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ೬೪ ರ ಹರೆಯದ ಉಮೇಶ್‌ ಕೆಲವು ಸಂಘಟನೆಗಳಲ್ಲಿ ಪ್ರತಿಭಾವಂತರಿಗೆ ನೂರಾರು ಜನರು ಸೇರಿ ೫೦೦, ಸಾವಿರ ರೂಪಾಯಿ ಸಹಾಯ ಮಾಡಿ ಪ್ರಚಾರ ಪಡೆಯುವುದಕ್ಕಿಂತ ನೈಜ ಅರ್ಹರಿಗೆ ಅವಶ್ಯ ಸಹಾಯ ಮಾಡುವುದು ಒಳ್ಳೆಯದು ಎಂದು ಅರಿತು ಸಮಾನ ಮನಸ್ಕರ ತಂಡ ಕಟ್ಟಿದರು. ಆತಂಡದಲ್ಲಿ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ರವೀಂಧ್ರ ಟಪಾಲ, ರವಿ ಮೆಣಸಿ, ನಾಗಭೂಷಣ್‌ ನಾಯ್ಕ ರೆಲ್ಲಾ ಸೇರಿದರು. ತಾಲೂಕಿನಲ್ಲಿ ದ್ವಿತಿಯ ಪಿ.ಯು. ಪರೀಕ್ಷೆಯಲ್ಲಿ ಅತ್ತ್ಯುನ್ನತ ಅಂಕ ಪಡೆದ ಕೆಲವು ಪ್ರತಿಭಾವಂತ ಬಡ ಮಕ್ಕಳನ್ನು ಹುಡುಕಿದರು. ಅವರೆಲ್ಲರಿಗೆ ಸಮಾನಮನಸ್ಕರು ತಮ್ಮ ವೈಯಕ್ತಿಕ ನೆರವು ೫,೧೦ ಸಾವಿರ ರೂಪಾಯಿಗಳನ್ನು ಅವರ ಮನೆಗೇ ತೆರಳಿ ಹಂಚಿದರು. ಈ ಸಮಾನಮನಸ್ಕರ ಸಹಾಯ ಕನಿಷ್ಟ ಅರ್ಹ, ಸೂಕ್ತ ಮನೆಗಳನ್ನು ತಲುಪಿತು.

ಈ ತಂಡದ ನೇತೃತ್ವ ವಹಿಸಿದ್ದ ಉಮೇಶ್‌ ಟಪಾಲ್‌ ಹೇಳುವ ಪ್ರಕಾರ ಈ ಆರ್ಥಿಕ ಸಹಾಯ ಬಡ ಪ್ರತಿಭಾವಂತರಿಗೆ ಉಪಯೋಗವಾಗುತ್ತದೆ. ಇಂಥ ನೆರವು ಪಡೆದವರು ಮುಂದೆ ಇತರ ಬಡ ಪ್ರತಿಭಾವಂತರಿಗೆ ಸಹಾಯಮಾಡಲು ದಾರಿಮಾಡಿಕೊಡುತ್ತದೆ .

ಸಮಾಜದಲ್ಲಿ ಅನೇಕ ಬಡ ಪ್ರತಿಭಾವಂತರಿಗೆ ಪ್ರೋತ್ಸಾಹ, ನೆರವಿನ ಅಗತ್ಯವಿರುತ್ತದೆ ಕೆಲವರು ತಂಡ ಮಾಡಿಕೊಂಡು ಪ್ರತಿಭಾವಂತರಿಗೆ ನೆರವಾದರೆ ಅದರಿಂದ ಅರ್ಹರಿಗೆ ಉತ್ತೇಜನದ ಜೊತೆಗೆ ಮಾರ್ಗದರ್ಶನ ಪಡೆಯಲೂ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ತಂಡದ ಒಬ್ಬ ಸದಸ್ಯ ಆರ್.ಬಿ. ನಾಯ್ಕ ಟಪಾಲ್.

ಹೀಗೆ ಸಿದ್ದಾಪುರದ ಸಮಾನಮನಸ್ಕರ ತಂಡ ಮಾದರಿ ಕೆಲಸ ಮಾಡಿರುವುದನ್ನು ಅನೇಕರು ಪ್ರಶಂಸಿಸಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಈ ಮಾನವೀಯ ಕೆಲಸ ನಮ್ಮಿಂದ ಆಗುತ್ತಿರುವುದಕ್ಕೆ ಉಮೇಶ್‌, ರವಿ ಅಣ್ಣ, ನಾಗಭೂಷಣ್‌ ಕಾರಣ. ಇವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವ ತೃಪ್ತಿ-ಸಮಾಧಾನದ ಮುಂದೆ ಏನಿದೆ ಸರ್?‌ ಎನ್ನುತ್ತಾರೆ ವಾಹನ ಚಾಲಕ ರವಿ ನಾಯ್ಕ ಮೆಣಸಿ.

ನಾವು ನಮ್ಮೂರು ಇಂಥ ಸ್ಥಳೀಯ ಉತ್ತಮ ಕೆಲಸಗಳಿಗೆ ವೇದಿಕೆ. ನಿಮ್ಮ ವ್ಯಾಪ್ತಿಯಲ್ಲಾದ ಇಂಥ ಸಮಾಜಮುಖಿ ಕೆಲಸಗಳನ್ನು ನಮ್ಮ ಗಮನಕ್ಕೆ ತನ್ನಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *