


ವ್ಯಾಪಾರ ವ್ಯವಹಾರದಲ್ಲಿ ವಿಶ್ವಾಸ ಮುಖ್ಯ ಎಂದು ಪ್ರತಿಪಾದಿಸಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೇರ್ ಸ್ವಾಮೀಜಿ ಬ್ಯಾಂಕ್ ಪ್ರಗತಿ, ನಿರಂತರತೆ ಹಿಂದೆ ಗ್ರಾಹಕರ ವಿಶ್ವಾಸ ಕೆಲಸ ಮಾಡುತ್ತದೆ ಎಂದರು.


ಸಿದ್ಧಾಪುರದಲ್ಲಿ ಕೃಷಿ ಮಾರುಕಟ್ಟೆ ಪ್ರಾಂಗಣ ರಸ್ತೆಯ ನೂತನ ಕಟ್ಟಡದಲ್ಲಿ ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿಯ ೨೨ ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು ಒಂದು ಸಂಸ್ಥೆ ನೂರು ವರ್ಷ ಪೂರೈಸಿ ಪ್ರಗತಿಯ ದಾಪುಗಾಲು ಹಾಕಲು ಗ್ರಾಹಕರು, ಸಿಬ್ಬಂದಿ, ಆಡಳಿತ ಮಂಡಳಿಗಳ ಪ್ರಯತ್ನ ಮುಖ್ಯ ಎಲ್ಲವೂ ಸರಿ ಇದ್ದಾಗ ಗ್ರಾಹಕ ಮೆಚ್ಚುತ್ತಾನೆ ಎಂದು ಈಗಿನ ಅಧ್ಯಕ್ಷ ಜಯದೇವ ನೀಲೇಕಣಿಯವರನ್ನು ಉದಾಹರಿಸಿ ಮಾರ್ಮಿಕವಾಗಿ ನುಡಿದರು.

ಶಿಸ್ತುಬದ್ಧ, ಚುಟುಕಾದ ಕಾರ್ಯಕ್ರಮಕ್ಕೆ ಕೆ. ಎನ್. ಹೊಸಮನಿ ನಿರೂಪಿಸಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಬ್ಯಾಂಕ್ ನ ಅಧ್ಯಕ್ಷ ಜಯದೇವ ನಿಲೇಕಣಿ ಸಂಸ್ಥೆಯ ಸಾಧನೆ ತಿಳಿಸಿದರು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






