
ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ ನಡೆಸಿ ಕೆಲವು ವಂಧಿಮಾಗಧ ಕಾರ್ಯಮರೆತ ಪತ್ರಕರ್ತರನ್ನು ಖುಷಿಪಡಿಸಿ ಪ್ರಚಾರದ ಹಣ ಉಳಿಸುವ ಕಾಗೇರಿ ಒಂದು ವಾರದ ಹಿಂದೆ ಶಿರಸಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕರನ್ನು ಹೊಗಳಿ ಸಿದ್ಧಾಪುರದ ಬಿ.ಜೆ.ಪಿ. ಆಡಳಿತದ ಪಟ್ಟಣ ಪಂಚಾಯತ್ ಗೆ ಹೆಚ್ಚಿನ ಅನುದಾನ ಒದಿಸುವ ಮೂಲಕ ಭೀಮಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಿ.ಜೆ.ಪಿ. ಚುನಾಯಿತ ಸದಸ್ಯರ ಪ್ರೇಮ, ಪ್ರೀತಿ ಅಭಿನಂದನೆಗೆ ಅರ್ಹ ಆದರೆ ಅದೇ ಪ್ರೀತಿ-ವಿಶ್ವಾಸ, ಅನುರಾಗ ಶಿರಸಿ ನಗರಸಭೆಯ ಮೇಲೂ ಇಲ್ಲಿಯ ಸದಸ್ಯರ ಮೇಲೂ ಇದ್ದರೆ ಒಳ್ಳೆಯದು ಎಂದು ವ್ಯಂಗ್ಯ ವಾಡಿದ್ದರು. ಇದು ಕಾಗೇರಿ ವಿರೋಧಿಗಳನ್ನು ಹಾಡಿ-ಹೊಗಳುವ ಪರಿ!.

ಈ ಪ್ರಶಂಸೆ ಹಿಂದೆ ಸಿದ್ಧಾಪುರದ ವಿದ್ಯಮಾನವಿದೆ. ಶಾಸಕರಾಗಿ ಎರಡು ವರ್ಷ ಪೂರೈಸಿರುವ ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರಕ್ಕೆ ೩೮೨ ಕೋಟಿ ಅನುದಾನ ನೀಡಿದ್ದಾರೆ. ಬಹುತೇಕ ವಿಶೇಷ ಅನುದಾನವಾಗಿರುವ ಈಹಣ ಪಕ್ಷಬೇಧವಿಲ್ಲದೆ ಹಂಚಿಕೆಯಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
