


ಒಂದು ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದೆನ್ನುವ ಸಲಹೆ ನಿಡಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮೀತಿ ೧೦೦ ಕೋಟಿ ಅನುದಾನದಲ್ಲಿ ಮೊದಲ ಹಂತದ ತಕ್ಷಣ ಆಗಬೇಕಾದ ಅವಶ್ಯ- ಅನಿವಾರ್ಯ ಕೆಲಸಗಳನ್ನು ಪಟ್ಟಿ ಮಾಡಿದೆ. ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯಲ್ಲಿ ಜಿಲ್ಲೆಯ ಮೊದಲ ಪ್ರಾಧಾನ್ಯದ ಕಾಮಗಾರಿಗಳು ಸೇರಿದಂತೆಭವಿಷ್ಯದಲ್ಲಿ ಒಟ್ಟೂ ಸಾವಿರ ಕೋಟಿಗಳ ವೆಚ್ಚದಲ್ಲಿ ಹಂತಹಂತವಾಗಿ ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸಿದರೆ ಅದರಿಂದ ಉದ್ಯೋಗ ಅವಕಾಶ ಹೆಚ್ಚಿಸಬಹುದೆಂದು ಸಲಹೆ ನೀಡಿದೆ.


ಈ ಬಗ್ಗೆ ರಾಜ್ಯ ಸರ್ಕಾರ ರಚಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮೀತಿಗಳಲ್ಲಿ ಗದಗ, ಉತ್ತರ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಿದ್ದು ಈ ಸಮೀತಿಗಳು ಈಗಾಗಲೇ ತಮ್ಮ ವರದಿ ಸಿದ್ಧಪಡಿಸಿದ್ದು ಇಷ್ಟರಲ್ಲೇ ಈ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಲಿವೆ ಎನ್ನಲಾಗಿದೆ.
#ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಬೇಕಾದ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಸಮೀತಿ ವಿಸ್ತ್ರತ ವರದಿ ತಯಾರಿಸಿದೆ. ಈ ವರದಿ ಒಂದು ಪುಸ್ತಕ ರೂಪದಲ್ಲಿದ್ದು ಜಲಪಾತಗಳ ವೀಕ್ಷಣೆಗೆ ರೋಪ್ ವೇ, ಸ್ವಚ್ಛ ಮತ್ತು ಪರಿಸರ ಪೂರಕ ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ಸಲಹೆ ನೀಡಲಾಗಿದೆ. ಮಳೆಗಾಲದಲ್ಲಿ ಸ್ತಬ್ಧವಾಗುವ ಪ್ರವಾಸೋದ್ಯಮ ಜೀವಂತಿಕೆಗೆ ಸುರಕ್ಷತಾ ಕ್ರಮಗಳ ಜೊತೆಗೆ ಮಳೆ ಪ್ರವಾಸದ ಬಗ್ಗೆಯೂ ಚರ್ಚಿಸಲಾಗಿದೆ. ಒಟ್ಟೂ ಸಾವಿರ ಕೋಟಿ ಅನುದಾನದಲ್ಲಿ ಮೊದಲ ಹಂತದಲ್ಲಿ ೧೦೦ ಕೋಟಿ, ದ್ವಿತಿಯ ಹಂತದಲ್ಲಿ ೩೦೦ ಕೋಟಿ ಒಟ್ಟೂ ೧೦೦೦ ಸಾವಿರ ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ ಉತ್ತರ ಕನ್ನಡದ ಚಹರೆ ಬದಲಿಸಬಹುದು.


– ಬೀರಣ್ಣ ನಾಯಕ ಮೊಗಟಾ ( ಅಧ್ಯಕ್ಷರು ಉ..ಕ. ಜಿ.ಪ್ರ. ಅ.ಸಮೀತಿ) #
# ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಲಹೆ #
ಉತ್ತರ ಕನ್ನಡ ಜಿಲ್ಲೆಯಲ್ಲಿ ಐತಿಹಾಸಿಕ, ಪೌರಾಣಿಕ ಸೇರಿದಂತೆ ಅನೇಕ ಕ್ಷೇತ್ರಗಳಿವೆ. ದೇವಾಲಯ ಪ್ರವಾಸೋದ್ಯಮ, ಚಾರಣ, ನಿಸರ್ಗ ವೀಕ್ಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಿನ್ನ ಸಾಧ್ಯತೆಗಳನ್ನು ಪಟ್ಟಿ ಮಾಡಲಾಗಿದೆ. ಬಹುತೇಕ ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಅವಶ್ಯಕತೆಯನ್ನು ಆದ್ಯತೆಯ ಮೇರೆಗೆ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಎಲ್ಲಾ ಪ್ರವಾಸಿ ಕೇಂದ್ರಗಳಲ್ಲಿ ಆಟೋಮೆಟಿಕ್ ಪರಿಚಯ ನಿರೂಪಣೆ, ಜಾಗೃತಿ ಸಂದೇಶಗಳು, ಅಪಾಯದ ಸೂಚನೆಗಳನ್ನು ತಿಳಿಸುವ ವ್ಯವಸ್ಥೆ ಬಗ್ಗೆ ಸಲಹೆ ನೀಡಲಾಗಿದೆ.
ಆಯುರ್ವೇದ, ಜೇನು ಸಂಗ್ರಹಿಸುವ ಕೆಲಸಗಳ ವೀಕ್ಷಣೆಗೆ ಕಾಲಮಿತಿಯ ಪ್ರವಾಸೋದ್ಯಮ ವ್ಯವಸ್ಥೆ, ಉತ್ತರ ಕನ್ನಡ ಜನಜೀವನದ ಪರಿಚಯ ಸೆರಿದಂತೆ ಹೊಸ ಸಾಧ್ಯತೆಗಳು, ಈಗಿರುವ ಎಲ್ಲಾ ರೂಪದ ಸಂರಚನೆ ಬಳಕೆ ಜೊತೆಗೆ ನವೀನ ಪ್ರವಾಸಿ ತಾಣಗಳ ಹುಡುಕಾಟ, ಈಗಿರುವ ಪ್ರದೇಶ,ಸ್ಥಳಗಳನ್ನೇ ವಿಶಿಷ್ಟವಾಗಿ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಸಾಧ್ಯತೆ, ಹೊರ ಜಿಲ್ಲೆ- ರಾಜ್ಯಗಳ ಹೊಸ ಮಾದರಿ ಅಳವಡಿಕೆ ಸೇರಿದಂತೆ ವಿಭಿನ್ನ ಹೊಸ ಸಾಧ್ಯತೆಗಳನ್ನು ಚರ್ಚಿಸಲಾಗಿದ್ದು ವೈಜ್ಞಾನಿಕವಾಗಿ ಇವುಗಳ ಸದುಪಯೋಗದ ಬಗ್ಗೆ ವಿವರವಾಗಿ ಚರ್ಚಿಸಿರುವ ಬಗ್ಗೆ ವಿವರಿಸಲಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






