



ಸಿದ್ದಾಪುರ:ಕಳೆದ ೧೨ನೇ ಶತಮಾನದಿಂದಲೇ ಬಸವಣ್ಣನವರು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು. ಅಂದಿನಿಂದ ಇಂದಿನವರೆಗೂ ಪ್ರಯತ್ನ ನಡೆದೇಇದೆ, ಆದರೂ ನಿರೀಕ್ಷಿತ ಮಟ್ಟದಲ್ಲಿ ಮಹಿಳಾ ಸಬಲಿಕರಣವಾಗಿಲ್ಲ. ಸರ್ಕಾರಇಂದು ಶಕ್ತಿ ಯೋಜನೆ, ಗೃಹಲಕ್ಷಿö್ಮÃ, ಗೃಹಜ್ಯೋತಿ ಮುಂತಾದಮಹಿಳಾಪರ ಯೋಜನೆಗಳನ್ನು ರೂಪಿಸಿಕೊಂಡು ಸಬಲಿಕರಣಗೊಳಿಸುತ್ತಿದೆ.ಇಲ್ಲಿ ಮಹಿಳಾಪರ ಅಂದ್ರೆ ಮಾನವೀಯ ಪರವೆಂದೇ ನಾವು ಅರ್ಥೈಸಿಕೊಳ್ಳಬೇಕು.ನಮ್ಮ ಮಹಿಳಾ ಸಮುದಾಯಆಲಯವೆಂಬ ಚೌಕಟ್ಟನ್ನು ಮುರಿದುಕೊಂಡು, ಅಲ್ಲಮರ ಬಯಲಿಗೆ ಬರಬೇಕಿದೆ.ವೈಚಾರಿಕಚಿಂತನೆಯತ್ತ ಮುಖಮಾಡಿ ಸಮಸಮಾಜದಅಭಿವೃದ್ಧಿಗೆ ಕೈ ಜೋಡಿಸಬೇಕಿದೆ.ಒಟ್ಟಾರೆ ನಮ್ಮ ಸಮಾಜದಅಭಿವೃದ್ಧಿ ಮಹಿಳಾ ಸಬಲಿಕರಣದಿಂದಲೇ ಸಾಧ್ಯವೆಂದು ಸಮಾಜಮುಖಿಚಿಂತಕಕನ್ನೇಶ ನಾಯ್ಕತಮ್ಮಉಪನ್ಯಾಸದಲ್ಲಿ ಹೇಳಿದರು.



ಚಕೋರ ಸಾಹಿತ್ಯ ವಿಚಾರ ವೇದಿಕೆಯಜಿಲ್ಲಾ ಸಂಚಾಲಕ ಕೆ.ಬಿ.ವೀರಲಿಂಗನಗೌಡ್ರತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅಕಾಡೆಮಿಯಆಶಯ ಮತ್ತುಉಪನ್ಯಾಸದ ಉದ್ದೇಶಗಳನ್ನು ವಿವರಿಸಿದರು.ಸಿದ್ದಾಪುರದ ಸರಕಾರಿಪಾಲಿಟೆಕ್ನಿಕ್ನಲ್ಲಿಜರುಗಿದ ೧೫ನೇ ಉಪನ್ಯಾಸಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಚಾರ್ಯ ಶಾಂತಾರಾಮ ವಹಿಸಿದ್ದರು.ವೇದಿಕೆಯ ಮೇಲೆ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.ಕರ್ನಾಟಕ ಸಾಹಿತ್ಯಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉತ್ತರಕನ್ನಡ ಮತ್ತು ಸರಕಾರಿಪಾಲಿಟೆಕ್ನಿಕ್ ಸಹಯೋಗದಲ್ಲಿ೧೫ನೇ ಉಪನ್ಯಾಸಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ನಿರೂಪಣೆಯನ್ನುಕುಮಾರಿ ದಿಶಾ ಹೆಗಡೆ ನಿರ್ವಹಿಸಿದರು, ಕುಮಾರಿಇಂಚರಾ ನಾಯ್ಕಸ್ವಾಗತಿಸಿ ವಂದಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





