ಬಾವಿಗಳೆ ಕುಸಿದವು, ಕೆರೆ ಒಡೆದವು,ಶಾಲೆಮುರಿದವು…ಇದು ಸಂಸದರ ಆದರ್ಶಗ್ರಾಮದ ಕತೆ

ಮಳೆ ನಿಂತುಹೋದ ಮೇಲೆ-ಭಾಗ-06
ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ
ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ ದ್ರೋಹ ಬಗೆದಿದೆ. ಇದರ ಹಿಂದಿರುವ ಕೈಗಳಲ್ಲ, ಕೆಸರಿನ ಕಮಲಗಳು ಯಾರು ಎಂದರೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎನ್ನುವ ಸ್ಥಿತಿ.
ಕಾನಗೋಡಿನಲ್ಲಿ ಒಂದು ದೊಡ್ಡಕೆರೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇನ್ನೊಂದು ಕೆರೆ ಮತ್ತೊಂದು ಗದ್ದೆಬೈಲಿಗೆ ನೀರುಣಿಸುತ್ತದೆ. ಆ ಕೆರೆಯೆ ತಾವರೆಕೆರೆ. ಎರಡೆಕರೆಯ ಈ ತಾವರೆಕೆರೆ ಈ ಮಳೆಗಾಲದಲ್ಲಿ ಒಳಗೊಳಗೇ ಅಸರಿದೆ. ಅದರ ಬಂಡು,ಚಾನೆಲ್ ಬಾಯಿಗಳೆಲ್ಲಾ ಕಿತ್ತು ನೀರು ಹೊರಹೋಗಿದೆ. ಈ ಬೃಹತ್ ಪ್ರಮಾಣದ ನೀರು ತುಂಬಿ, ಒಳಗೊಳಗೆ ಅಸರಿ ಹೋಗದಿದ್ದರೆ ಈ ಕೆರೆ ಒಡೆದು ನೂರಾರು ಎಕರೆ ಕೃಷಿಭೂಮಿ ಹಾಳಾಗುತಿತ್ತು. ಇದು ಮೇಲಿನ ಕೆರೆಯ ಕತೆಯಾದರೆ, ಊರಹೊರಗಿನ ದೊಡ್ಡಕೆರೆ ಅಥವಾ ಮಾರಿಕೆರೆ ಈ ಭಾಗದ ಪ್ರಮುಖ ಜಲಮೂಲ.


ಈ ಕೆರೆಯ ಬಂಡು ಒಡೆದಂತಾಗಿ ನೀರು ಹೊರಹೋಗದಿದ್ದರೆ ಈ ಕೆರೆಯ ನೀರು ಸಾವಿರಾರು ಎಕರೆ ಕೃಷಿ ಭೂಮಿಯನ್ನೇ ಕೊಚ್ಚಿಕೊಂಡು ಹೋಗುತಿತ್ತು. ಈ ಕೆರೆಗಳಿಗೆ ಮುಂದಿನ ಮಳೆಗಾಲದ ಮೊದಲು ಅಗತ್ಯ ದುರಸ್ಥಿ-ಕೆರೆಕಟ್ಟುವ ಕಾಮಗಾರಿ ಮಾಡಬೇಕು ಎಂಬುದು ಈ ಗ್ರಾಮದ ಜನರ ಬೇಡಿಕೆ.
ಭಾವಿಗಳು ಕುಸಿದವು- ಈ ವರ್ಷದ ಮಹಾಮಳೆಗೆ ಸಿದ್ದಾಪುರ ತಾಲೂಕು ಉತ್ತರಕನ್ನಡ ಜಿಲ್ಲೆಯ ಬಹಳ ಕಡೆ ತೆರೆದ ಬಾವಿಗಳು ಮುಚ್ಚಿವೆ. ಆದರೆ ಇಲ್ಲಿಯ ಗಣೇಶ್ ನಗರದಲ್ಲಿ ಎರಡ್ಮೂರು ಬಾವಿಗಳು ಕುಸಿದಿವೆ. ನೀರು ಎತ್ತಲು ಭಯ ಪಡುವಂತಾದ ದುಸ್ಥಿತಿಯಲ್ಲಿ ಇಲ್ಲಿಯ ಜನರು ಈ ಭಾವಿಗಳ ನೀರು ಎತ್ತುತಿದ್ದಾರೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿ ಕಿರಿದು, ಇಲ್ಲಿ ಸಂಪರ್ಕ ರಸ್ತೆಗಳು ವ್ಯವಸ್ಥಿತವಾಗಿಲ್ಲ. ಕಾನಗೋಡು, ಐಗೋಡು, ಮಂಕೋಡು,ಹಳ್ಳಿಬೈಲ್ ಸೇರಿದಂತೆ ಇಲ್ಲಿಯ ಬಹುತೇಕ ರಸ್ತೆಗಳೆಲ್ಲಾ ಕೆಸರುಗುಂಡಿಗಳಂತಾಗಿವೆ. ಈ ರಸ್ತೆಗಳ ಉನ್ನತೀಕರಣಕ್ಕೆ ಅನುದಾನದ ಕೊರತೆ ಇದೆ ಎನ್ನುತ್ತಾರೆ ಗ್ರಾ.ಪಂ. ಮುಖಂಡ ಎಚ್.ಕೆ. ಶಿವಾನಂದ.


ಕಾನಗೋಡಿನ ಶಾಲೆ, ಅಂಗನವಾಡಿಗಳಿಗೆ ವ್ಯವಸ್ಥಿತ ಕಟ್ಟಡಗಳಿಲ್ಲ, ಮಹಾಮಳೆಯಲ್ಲಿ ಇರುವ ಒಂದೆರಡು ಕೊಠಡಿಗಳೂ ಬಳಕೆಗೆ ಅಯೋಗ್ಯವಾಗಿವೆ. ಇದೇ ಪಂಚಾಯತ್ ನ ವಡಗೇರಿಯಲ್ಲಿ ಮಾಜಿ ಶಾಸಕ ಗೋಪಾಲಕಾನಡೆಯವರು ದಾನವಾಗಿ ನೀಡಿದ ಪ್ರದೇಶದಲ್ಲಿ ಹೊಸ ಶಾಲೆ ಪ್ರಾರಂಭವಾಗಿದೆ. ಆದರೆ ಅಲ್ಲಿ ಕೊಠಡಿಗಳ ಕೊರತೆ. ಈ ಕೊರತೆ ನೀಗಿಸಲು ಹಳೆಶಾಲೆಯ ಒಂದೆರಡು ಕೊಠಡಿ ಬಳಸಿಕೊಳ್ಳಲಾಗುತಿತ್ತು ಆದರೆ ಮಳೆಯ ನಂತರ ಆ ಶಾಲೆ ಕುಸಿಯುವ ಅಪಾಯ ಎದುರಿಸುತ್ತಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗೆ ಕನಿಷ್ಟ ಎರಡು ಹೆಚ್ಚುವರಿ ಕೊಠಡಿಗಳು ಬೇಕು ಎನ್ನುವುದು ಅಲ್ಲಿಯ ಅನಿವಾರ್ಯ ಬೇಡಿಕೆ.
ಈ ಮಳೆಗಾಲದಲ್ಲಿ ಇಲ್ಲಿಯ ಬಳ್ಳಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅದೃಷ್ಟ ನೆಟ್ಟಗಿಲ್ಲದಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಜಿಲ್ಲಾಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಇಲ್ಲಿ ಆಗಬಹುದಾಗಿದ್ದ ಸಂಭವನೀಯ ಅನಾಹುತ ತಪ್ಪಿದ ಖುಷಿಯಿದೆ. ಒಂದು ದಿನದ ಮಳೆಗೆ ಈ ಶಾಲೆಯ ಚಾವಣಿ ಮುರಿದು ಹೆಂಚುಗಳು ನೆಲಕ್ಕುರುಳಿದವು. ಈಗ ಈ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ಎರಡೆರಡು ತರಗತಿ ನಡೆಯುವ ಅನಿವಾರ್ಯತೆ. ಈ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲೇಬೇಕಾದ ಅನಿವಾರ್ಯತೆ ಇಲ್ಲಿ ಎದುರಾಗಿದೆ.
ವಿವಾದಿತ ಜಕ್ರಗುಂಡಿ ಹೊಳೆಯಲ್ಲಿ ನೀರು ಹರಿದಿದೆ. ಕಾನಗೋಡು ಗ್ರಾಮ ಪಂಚಾಯತ್ ಮಳೆಗೆ ಬೆಚ್ಚಿದೆ. ಮೋದಿಯವರ ಸಂಸದರ ಮಾದರಿ ಗ್ರಾಮ ಎಂಬ ಹುಸಿ ಘೋಷಣೆಯ ನಾಟಕದ ಮಾತಿಗೆ ಮರುಳಾದ ಇಲ್ಲಿಯ ಜನ ಸಂಸದನೂ ಇಲ್ಲ, ಅವನ ಆದರ್ಶವೂ ಇಲ್ಲ, ಆದರ್ಶ ಗ್ರಾಮವೂ ಇಲ್ಲ. ಬಿ.ಜೆ.ಪಿ. ಅಧಿಕಾರದಾಹಿ ರಾಜಕಾರಣದ ನಾಟಕಕ್ಕೆ ಬಲಿಯಾದ ಸಂಸದರ ಮಾದರಿ ಗ್ರಾಮಗಳ ವಾಸ್ತವಸ್ಥಿತಿ ನೋಡಬೇಕೆಂದರೆ ಆಮೋದಿ,ಈ ಯಡಿಯೂರಪ್ಪನೇ ಇಲ್ಲಿಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಲ್ಲಿಯ ಸ್ಥಳಿಯರು.
ಅಂದಹಾಗೆ ಸಂಸದರ ಈ ಆದರ್ಶ!ಗ್ರಾಮದಲ್ಲಿ ಕೆರೆ ಒಡೆದು,ಭಾವಿಗಳು ಕುಸಿದು, ರಸ್ತೆ, ಶಾಲೆ, ಜನಜೀವನ ಮೂರಾಬಟ್ಟೆಯಾದರೂ ಸಂಸದರ ಪತ್ತೆ ಇಲ್ಲ. ನಮ್ಮ ಸಂಸದರು, ಶಾಸಕರನ್ನು ನಾವು ಹಗಲಲ್ಲೂ ಬ್ಯಾಟರಿ ಹಿಡಿದು ಹುಡುಕಬೇಕಿದೆ ಎನ್ನುವ ಈ ಸ್ಥಳಿಯರ ವ್ಯಂಗ್ಯ ಇಲ್ಲಿಯ ಸಂಸದರು, ಶಾಸಕರ ಜನಸ್ಫಂದನಕ್ಕೆ ಉತ್ತಮ ದೃಷ್ಟಾಂತ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *