ಕನ್ಯಾಡಿ ವರ್ಧಂತಿ ಉತ್ಸವಕ್ಕೆ ಆಹ್ವಾನ, ಹಾರ್ಸಿಕಟ್ಟಾದಲ್ಲಿ 5 ದಿವಸದ ಗಣೇಶೋತ್ಸವ


ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮಿಗಳ ಪಟ್ಟಾಭಿಷೇಕದ 11 ನೇ ವರ್ಧಂತಿ ಉತ್ಸವ ಸೆ.03 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಬರಬೇಕೆಂದು ಶ್ರೀರಾಮ ಕ್ಷೇತ್ರ ಸೇವಾ ಸಮೀತಿ ತಾಲೂಕಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ ಕ್ಷೇತ್ರ ವಿದ್ಯೆ, ಆರೋಗ್ಯ, ಗೋಪಾಲನೆ ಸೇರಿದಂತೆ ಸಮಾಜದ ಪೂರಕ ಕೆಲಸಗಳಿಂದ ಪ್ರಸಿದ್ಧವಾಗುತ್ತಿದೆ. ಮಳೆ, ನೆರೆ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ವಿಧಿವತ್ತಾಗಿ ಆಚರಿಸುತ್ತಿರುವ ವರ್ಧಂತಿ ಉತ್ಸವಕ್ಕೆ ಬರಲು ಸಮಾಜದ ಸರ್ವರನ್ನು ಆಹ್ವಾನಿಸಿದರು. ಸುದ್ದಿಗೋಷ್ಠಿಯಲ್ಲಿ ಪದ್ಮಾಕರ ನಾಯ್ಕ, ಶಂಕರಮೂರ್ತಿ ನಾಯ್ಕ ಹಾಗೂ ನಾಮಧಾರಿ ಅಭಿವೃದ್ಧಿ ಸಂಘದ ಎಸ್.ಎಮ್.ನಾಯ್ಕ ಉಪಸ್ಥಿತರಿದ್ದರು.
ಹಾರ್ಸಿಕಟ್ಟಾದಲ್ಲಿ 5 ದಿವಸದ ಗಣೇಶೋತ್ಸವ
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ 37 ನೇವರ್ಷದ ಗಣೇಶೋತ್ಸವ ಸೆ.2ರಿಂದ 6ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.2ರಂದು ಬೆಳಗ್ಗೆ 11ಕ್ಕೆ ವೇ.ಮೂ.ಶ್ರೀಧರ ಭಟ್ಟ ಮಾಣಿಕ್ನಮನೆ ಪೌರೋಹಿತ್ಯದಲ್ಲಿ ಮಂಗಲಮೂರ್ತಿ ಪ್ರತಿಷ್ಠಾಪನೆ, ಸಂಜೆ 6ರಿಂದ ಸ್ಥಳೀಯರಿಂದ ಭಜನೆ. 3ರಂದು ಬೆಳಗ್ಗೆ 11ಕ್ಕೆ ಸತ್ಯಗಣಪತಿ ವೃತ, ಸಂಜೆ 7ರಿಂದ ಯಕ್ಷಚಂದನ ದಂಟಕಲ್ ಹಾಗೂ ಅತಿಥಿ ಕಲಾವಿದರಿಂದ ಮಹಾಮಂತ್ರಿ ದುಷ್ಟಬುದ್ಧಿ ಯಕ್ಷಗಾನ. 4ರಂದು ಬೆಳಗ್ಗೆ 11ಕ್ಕೆ ಗಣಹೋಮ ಹಾಗೂ ದೇವಿ ಪಾರಾಯಣ, ಸಂಜೆ 6ರಿಂದ ದಿ.ಸರ್ವೋತ್ತಮ ಕೃಷ್ಣ ಭಟ್ಟ ಮೆಮೋರಿಯಲ್ ಟ್ರಸ್ಟ್ ಸಿದ್ದಾಪುರ ದಿಂದ ಭಜನೆ ಹಾಗೂ ವಿಷ್ಣು ಸಹಸ್ರನಾಮ ಪಠಣ, 7ರಿಂದ ಬೇಡ್ಕಣಿಯ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಶ್ರೀಕಾಂತ ಹೆಗ್ಗೋಡು ನಿರ್ದೇಶನದಲ್ಲಿ ಹಾಗೂ ಲಕ್ಷ್ಮಣ ನಾಯ್ಕ ಬೇಡ್ಕಣಿ ಸಂಯೋಜನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ.5ರಂದು ಬೆಳಗ್ಗೆ 11ಕ್ಕೆ ಶನಿಕಥೆ, ಸಂಜೆ 5ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ. ಪ್ರತಿಮಾ ಭಾಗ್ವತ್ ಹುಲಿಮನೆಳಿಂದ ಭರತನಾಟ್ಯ, ಯಕ್ಷತರಂಗಿಣಿ ಹಾರ್ಸಿಕಟ್ಟಾ ದಿಂದ ನಂದನ ನಾಯ್ಕ ಅರಶಿನಗೋಡ ನಿರ್ದೇಶನದಲ್ಲಿ ಯಕ್ಷನೃತ್ಯ ನಂತರ ನಾರಾಯಣದಾಸ ಹೀಪನಳ್ಳಿ ಅವರಿಂದ ಹರಿಕೀರ್ತನೆ.6ರಂದು ಬೆಳಗ್ಗೆ 11ಕ್ಕೆ ಸತ್ಯನಾರಾಯಣವೃತ, ಮಧ್ಯಾಹ್ನ 4ಕ್ಕೆ ಮಹಾಮಂಗಳಾರತಿ,ನಂತರ ಕೊಡ್ಗಿಬೈಲ್ ಸಿದ್ಧಿವಿನಾಯಕ ಡೊಳ್ಳಿನ ತಂಡದವರೊಂದಿಗೆ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಲಿದೆ.

ಉತ್ತಮ ಸೇವೆಗೆ ಎಲ್‍ಐಸಿ ಮಾದರಿ

ಸಿದ್ದಾಪುರ;ಸೆ.02- ಇಂದು ನಾವು ಬಹುತೇಕ ಯಾವುದೇ ಆಫೀಸಿಗೆ ಹೋದರೂ ಅಲ್ಲಿ ನಮ್ಮನ್ನು ಯಾರೂ ಗಮನಿಸುವುದಿಲ್ಲ. ವಯಸ್ಸಾದವರಿಗೂ ಏನಾಗಬೇಕೆಂದು ಕೇಳಿ ಸಹಕರಿಸುವುದಿಲ್ಲ. ಆದರೆ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯಗಳಲ್ಲಿಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ. ನಿಗಮದಿಂದ ನಮಗೆ ಎಷ್ಟೇ ಹಣ ಮರಳಿ ಬರುವುದಿದ್ದರೂ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನ್ಯಾಯಯುತವಾಗಿ ದೊರೆಯುವಂತೆ ಮಾಡುತ್ತಾರೆ ಎಂದು ವಯೋವೃದ್ಧ ನಿವೃತ್ತ ಶಿಕ್ಷಕ ಈರಾ ಕನ್ನಾ ನಾಯ್ಕ ಶಿರಳಗಿ ಹೇಳಿದ್ದಾರೆ.
ಅವರು ಭಾರತೀಯ ಜೀವವಿಮಾ ನಿಗಮದ ಸ್ಥಳೀಯ ಸಂಪರ್ಕ ಶಾಖೆಯಲ್ಲಿ ನಿಗಮದ 63 ನೇ ವಾರ್ಷಿಕೋತ್ಸವವನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ತನ್ನ ಕೈ ಜೋಡಿಸುತ್ತಿರುವ ಎಲ್‍ಐಸಿ ಸಂಸ್ಥೆಯು ಸೂರ್ಯಚಂದ್ರರಿರುವವರೆಗೂ ಬೆಳಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪರ್ಕ ಶಾಖೆಯ ಶಾಖಾಧಿಕಾರಿ ರಘುಕುಲೇಂದ್ರ ಎಸ್.ಆರ್. ಎಲ್‍ಐಸಿ ಇಂದು ಪ್ರಪಂಚದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ತನ್ನಲ್ಲಿಯ ಹೆಚ್ಚಿನ ಹಣವನ್ನು ಕೇಂದ್ರ ಸರಕಾರದ ವಿವಿಧ ಯೋಜನೆಗಳಲ್ಲಿ ತೊಡಗಿಸುತ್ತಿದೆಯಲ್ಲದೆ, ಪ್ರತಿವರ್ಷವೂ ಕೇಂದ್ರಕ್ಕೆ ಸಹಸ್ರಾರು ಕೋಟಿ ರೂ.ಗಳ ತನ್ನ ಲಾಭಾಂಶವನ್ನು ನೀಡುತ್ತಾ ಬಂದಿದೆ. ಕಳೆದ ತಿಂಗಳ ಕೊನೆಯಲ್ಲಿ ಜೀವನ ಶಾಂತಿ ಪಾಲಿಸಿಯ ಮೂಲಕ ನಿಗಮವು 50 ಸಾವಿರ ಕೋಟಿ ರೂ.ಗಳಿಗೂ ಮೀರಿ ಪ್ರಥಮ ಪ್ರೀಮಿಯಂ ಆದಾಯಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಸಿದ್ದಾಪುರ ಸಂಪರ್ಕ ಶಾಖೆ ಸಹ ಉತ್ತಮ ಪ್ರಗತಿ ತೋರಿದ್ದು ವಿಭಾಗದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ನಿಗಮದ 63 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮೆಲ್ಲಾ ಗ್ರಾಹಕರಿಗೂ ಸುಖ ಸಮೃದ್ಧಿ ದೊರೆಯಲೆಂದು ಪ್ರಾರ್ಥಿಸುತ್ತೇವೆ ಎಂದರು. ಅಭಿವೃದ್ಧಿ ಅಧಿಕಾರಿ ಎಸ್.ಜಿ.ಶಾನಭಾಗ, ಸಿಬ್ಬಂದಿ ಭರತ ಶಹಾ, ಹಿರಿಕಿರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಭಿವೃದ್ಧಿ ಅಧಿಕಾರಿ ದೀಪಕ ಹೆಗಡೆ ವಂದನಾರ್ಪಣೆ ಮಾಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *