ರೈತರ ಮಕ್ಕಳೇಕೆ ಡಿ.ಸಿ.ಯಾಗಬಾರದು?

ಕೆ.ಎ.ಎಸ್. ಪಾಸಾದ ಕೃಷಿ ಅಧಿಕಾರಿ ‘ದೇವರಾಜ್ ಆರ್’ರ ಯಶೋಗಾಥೆ
ಕಾಗೋಡು ಸತ್ಯಾಗ್ರಹದ ಕಹಳೆ ಇಡೀ ದೇಶದ ದುಡಿಯುವ ಕೈಗಳಿಗೆ ಭೂಮಿಯ ಮಾಲಿಕತ್ವ ನೀಡಿದ ಮನ್ವಂತರದ ನೆಲಗಟ್ಟು. ಶಿವಮೊಗ್ಗ ಜಿಲ್ಲೆ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ರೈತ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜವಾದಿ ಚಿಂತಕರು, ಹಲವಾರು ಮೇರು ಸಾಧಕರ ತವರು ನೆಲ. ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟ ಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಗಳಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್ ಇವರೇ ಮೊನ್ನೆ ಬಿಡುಗಡೆಯಾದ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾದ ರೈತಪುತ್ರ.
ಬಾಲಕರಾಗಿದ್ದಾಗ ತಂದೆ ರೇವಣ್ಣಪ್ಪ ಡಿ.ಸಿ. ಯವರ ಹೆಸರಿನೊಂದಿಗೆ ‘ಡಿ.ಸಿ.’ ಇನ್ಶಿಯಲ್ ಇರುವುದನ್ನು ಸ್ನೇಹಿತರು ಆಗಾಗ ತಮಾಷೆ ಮಾಡುತ್ತಿದ್ದಾಗ “ಯಾಕ್ರೀ ರೈತರ ಮಕ್ಕಳು ಡಿ.ಸಿ. ಆಗಬಾರದಾ?” ಎಂದು ಪ್ರಶ್ನಿಸುತ್ತಿದ್ದರಂತೆ.
ಅಲ್ಲದೆ ಇವರು ಪದವಿ ವ್ಯಾಸಂಗದಲ್ಲಿರುವಾಗ ತಂದೆಗೆ ಆದ ಚಿಕ್ಕ ನೋವಿನ ಸಂದರ್ಭದಲ್ಲಿ “ಮಗನೇ ನೀನೆಂದೂ ಸೋಲದ ದಾರಿ ತುಳಿಯಬೇಕು’ ಜಿಲ್ಲಾಧಿಕಾರಿ ಹುದ್ದೆ ಪಡೆಯಲು ಪ್ರಯತ್ನಿಸಬೇಕು” ಎಂದು ಹೇಳಿದ ಮಾತು ಪದೇ ಪದೇ ಯುವಕ ದೇವರಾಜ್ ಅವರನ್ನು ಕಾಡುತ್ತಿತ್ತು.
ಇವರು ಆರಂಭಿಕ ಶಿಕ್ಷಣವನ್ನು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ನಂತರ ಸಮೀಪದ ಉಳವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಅಭ್ಯಸಿಸಿ ಉನ್ನತ ಶ್ರೇಣಿಯಲ್ಲಿ ಪಾಸಾದರು.
ಮಗನ ಉತ್ಕಟವಾದ ವಿದ್ಯಾಸಕ್ತಿಯನ್ನು ಗಮನಿಸಿದ ತಂದೆ-ತಾಯಿ ಶಿವಮೊಗ್ಗ ನಗರದ ಪ್ರತಿಷ್ಠಿತ ದೇಶೀಯ ವಿದ್ಯಾಕೇಂದ್ರ (ಡಿ.ವಿ.ಎಸ್.) ಕಾಲೇಜ್‍ನಲ್ಲಿ ಪಿ.ಯು.ಸಿ. ಪ್ರವೇಶ ಕೊಡಿಸಿದರು. ನಂತರ ವಿದ್ಯಾಕಾಶಿ ಧಾರವಾಡದತ್ತ ಮುಖ ಮಾಡಿದ ದೇವರಾಜ್ ಬಿ.ಎಸ್‍ಸ್ಸಿ. ಅಗ್ರಿ ಪದವಿ ಗಳಿಸಿ 2015 ರಲ್ಲಿ ಅಲ್ಲಿಯೇ ಕ.ವಿ.ವಿ. ಯಿಂದ ಎಂ.ಎಸ್ಸಿ. ಪದವಿಯನ್ನು ಉನ್ನತ ಸ್ಥಾನದೊಂದಿಗೆ ತೇರ್ಗಡೆ ಹೊಂದಿ ಹೊರ ಬಂದವರಿಗೆ ನೌಕರಿಗಿಂತ ತಮ್ಮ ತಂದೆಯ ಹೆಬ್ಬಯಕೆಯತ್ತ ಚಿತ್ತ ಹೊರಳಿಸಿ ಆಯ್.ಎ.ಎಸ್. ಕನಸು ಹೊತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಯಾಣ ಬೆಳೆಸಿದರು.
ಅಲ್ಲಿ ಹಿಂದುಳಿದ ವರ್ಗಗಳ (obc) ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಐ.ಎ.ಎಸ್. ಕೋಚಿಂಗ್ ಪಡೆದರು. ಈ ಮಧ್ಯೆ 2016 ರಲ್ಲಿ ಈ.k.a.s. 2017 ರಲ್ಲಿ ಅಬಕಾರಿ ನಿರೀಕ್ಷಕ ಹುದ್ದೆಯ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕದೊಂದಿಗೆ ಆಯ್ಕೆಯಾಗಿದ್ದರೂ ನಿರಾಕರಿಸಿ ತಂದೆಯ ಮಾತನ್ನೇ ಮೆಲುಕು ಹಾಕುತ್ತಾ, 2018 ರಲ್ಲಿ UPSಅ ಪೂರ್ವ ಪರೀಕ್ಷೆ ಬರೆದು ಪಾಸಾಗಿ ಮುಖ್ಯ ಪರೀಕ್ಷೆಯಲ್ಲಿ ಕೇವಲ 21 ಅಂಕಗಳಿಂದ ವಂಚಿತರಾಗಿದ್ದರೂ ಇನ್ನೂ ಛಲ ಬಿಟ್ಟಿಲ್ಲ.
ಈ ಮಧ್ಯೆ 2017 ರಲ್ಲಿ ತಮಗಿಷ್ಟವಾದ ‘ಅಗ್ರಿಕಲ್ಚರ್’ ಇಲಾಖೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಸಧ್ಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ‘ಸಹಾಯಕ ಕೃಷಿ ನಿರ್ದೇಶಕ’ರಾಗಿ, ರೈತರ ಸ್ನೇಹಿಯಾಗಿ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ 2017 ರಲ್ಲಿ ಬರೆದ ‘ಕರ್ನಾಟಕ ಆಡಳಿತ ಸೇವೆ’ (ಕೆ.ಎ.ಎಸ್.) ಪರೀಕ್ಷೆಯಲ್ಲಿ ಗ್ರಾಮೀಣಾಭಿವೃದ್ಧಿ ವಿಷಯವನ್ನು ಆಯ್ಕೆ ಮಾಡಿಕೊಂಡು ಅತ್ಯುನ್ನತ ಅಂಕ ಗಳಿಸಿ ಮೊದಲ ಸುತ್ತಿಯಲ್ಲಿಯೇ ‘ಉಪ-ವಿಭಾಗಾಧಿಕಾರಿ’ ಹುದ್ದೆಗೆ ಆಯ್ಕೆಯಾಗಿ ತಂದೆಯ ಕನಸನ್ನು ಬಹುತೇಕ ನನಸು ಮಾಡಿದ್ದಾರೆ.
-2- ಆಶಯ :
‘ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಡಬಲ್ಲೆ’ ಎಂಬ ಮಾತಿನಂತೆ ಉನ್ನತ ಬದುಕಿನ ಅಸ್ತಿತ್ವ ನೀಡಿದ ಈ ನಾಡಿಗೆ ತನ್ನಿಂದ ಕಿಂಚಿತ್ ಕೊಡುಗೆ ನೀಡಬೇಕೆಂಬ ಆಶಾಭಾವನೆಯೊಂದಿಗೆ ಸಮಾಜದ ನಿರ್ಗತಿಕರು, ಬಡವರು, ರೈತರು, ವಯೋವೃದ್ಧರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ಸ್ಪೂರ್ತಿ :
ಯುವಕರಿಗೆ ಇಂದಿನ ಚಿತ್ರನಟರು, ಕ್ರೀಡಾಪಟುಗಳು ಫ್ಯಾನ್ ಆಗುವುದು ಸಹಜ. ಹಾಗೆಯೇ ಕನ್ನಡದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ ರ ‘ಪೃಥ್ವಿ’ ಚಿತ್ರದ ನಾಯಕನಂತೆ ಜನಮೆಚ್ಚುವ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಇನ್ನೂ ಹಸಿರಾಗಿಯೇ ಉಳಿಸಿಕೊಂಡು ನಿರಂತರ ಅಧ್ಯಯನ ಶೀಲರಾಗಿದ್ದಾರೆ. ಅಪ್ಪಾಜಿ, ಅವ್ವ, ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಹಿತೈಷಿಗಳ ಬೆಂಬಲ ಆಶೀರ್ವಾದವೇ ಸ್ಪೂರ್ತಿ ಎನ್ನುವ ದೇವರಾಜ್ ತನಗೆ ನಕಾರಾತ್ಮಕವಾಗಿ ಮಾತನಾಡಿದ ಸ್ನೇಹಿತರಿಗೂ ಕೃತಜ್ಞತೆ ಹೇಳಬಯಸುತ್ತಾರೆ.

ಯುವಕರಿಗೆ ಕಿವಿಮಾತು :
‘ತಮಗೆ ಸಿಕ್ಕ ಅವಕಾಶಗಳ ಸದ್ಬಳಕೆ, ನಿರಂತರ ಪರಿಶ್ರಮ, ದೃಢ ನಿರ್ಧಾರ, ಏಕಾಗ್ರತೆ, ಜೊತೆಗೆ ಸವಾಲುಗಳನ್ನು ಸಮಾಧಾನದಿಂದ ಸ್ವೀಕರಿಸುವ ಮನೋಭಾವ ಯಾರಲ್ಲಿರುತ್ತದೆಯೋ ಅವರಿಗೆ ಗೆಲುವು ಶತಸಿದ್ಧ’ ಎಂದು ವಿದ್ಯಾರ್ಥಿಗಳಿಗೆ, ಯುವಕರಿಗೆ ಕಿವಿ ಮಾತು ಹೇಳಬಯಸುತ್ತಾರೆ ರೈತ ರೇವಣಪ್ಪ ಡಿ.ಸಿ. ಯವರ ಪುತ್ರ ದೇವರಾಜ್ .

– ಗೋಪಾಲ ಕೆ. ನಾಯ್ಕ ಶಿಕ್ಷಕರು, ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ
ಕಲಾ ಸಾಂಸ್ಕøತಿಕ ಸಂಘ (ಉ.ಕ.)
ಮೊ: 7975247057

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *