ಸಿದ್ಧಾಪುರದಲ್ಲೂ ಪ್ರಾರಂಭವಾದ ಆನೆ ಬೆದರಿಸುವ ಕಾರ್ಯಾಚರಣೆ

ಸಿದ್ಧಾಪುರ ತಾಲೂಕಿನ ಕಾನಸೂರು, ಹಸರಗೋಡು ಪಂಚಾಯತ್ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಸೋಮವಾರ ಸ್ಥಳಿಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಓಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ಎರಡು- ಮೂರು ದಿವಸಗಳ ಹಿಂದೆ ಕಾನಸೂರು, ಗವಿನಗುಡ್ಡ ಬಳಿ ಕಾಣಿಸಿಕೊಂಡ ನಾಲ್ಕು ಸಲಗಗಳ ಗುಂಪು 2 ರಾತ್ರಿ- 2 ಹಗಲುಗಳ ಸಮಯದಲ್ಲಿ ಕೃಷಿಕರಿಗೆ ಉಪಟಳ ನೀಡಿವೆ. ತೋಟದ ಅಡಿಕೆ,ಬಾಳೆ,ತೆಂಗು, ಕಬ್ಬು ತಿಂದದ್ದಲ್ಲದೆ ಕೆಲವೆಡೆ ಭತ್ತದ ಗದ್ದೆ ಮತ್ತು ಗೊಣಬೆಗಳನ್ನು ಹಾಳು ಮಾಡಿವೆ.
ಈ ಸುದ್ದಿ ತಿಳಿದ ಸ್ಥಳಿಯರು ಇಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆನೆ ಬೆದರಿಸುವ ಕಾರ್ಯಾಚರಣೆ ನಡೆಸಿದರು. ಆನೆಗಳು ದಾಸನಕೊಪ್ಪ ಬದನಗೋಡು, ಯಲ್ಲಾಪುರ,ಮುಂಡಗೋಡು ಭಾಗಗಳಲ್ಲಿ ಸಂಚರಿಸುವುದು ಸಾಮಾನ್ಯ ಆದರೆ ಈ ವರ್ಷ ಆನೆಗಳ ಗುಂಪು ಪಥ ಬದಲಿಸಿ ಸಿದ್ಧಾಪುರ ತಾಲೂಕು ಪ್ರವೇಶಿಸಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ತಮ್ಮಣ್ಣರ ಕವನ-
ಕಾಲದ ಗಾಳಿ ಬೀಸುತ್ತದೆ
ಕಾಲದ ಗಾಳಿ ಬೀಸುತ್ತದೆ
ಏನೇನೋ ಓಡುತ್ತದೆ… ಹಾಡುತ್ತದೆ…
ಬಿತ್ತುತ್ತದೆ… ನಮಗೆ ಓಡಲಾಗುವುದಿಲ್ಲ
ಬಿತ್ತಿದ್ದು ಗೊತ್ತಾಗುವುದಿಲ್ಲ…
ಮೊಳೆತದ್ದು ತಿಳಿಯುವುದಿಲ್ಲ
ಕಾಲದ ಗಾಳಿ ಬೀಸುತ್ತದೆ…
ಅವರು ಮಾಲ್ ಗಳಲ್ಲಿ ಮಾತಾಡುತ್ತಾರೆ…
ಪಬ್ ಗಳಲ್ಲಿ ಹಾಡು ಹೇಳುತ್ತಾರೆ…
ಬಾಟಲಿಯಲ್ಲಿ ನೀರುಕುಡಿದು… ಹಳ್ಳಿಯ ಊಟಕ್ಕೆ
ಸ್ಪೆಶಲ್ ಎನ್ನುತ್ತ ಪೇಟೆಗೂ
ಬಾಳೆಎಲೆ ತರಿಸುತ್ತಾರೆ…
ಕಾಲದ ಗಾಳಿ ಬೀಸುತ್ತದೆ…
ಮೆಟ್ರೋದಲ್ಲಿ ಪರಪ್ಯೂಂ ವಾಸನೆ
ಬೆವರ ವಾಸನೆಗಿಲ್ಲ ಜಾಗ…ಟಿವಿಮುಂದೆ
ದೇಶದ ಕುರಿತು ಹರಟುತ್ತಾರೆ
ಎದ್ದು ಊಟಕ್ಕೆ ಹೋಗುತ್ತಾರೆ
ಬೇರೆ ದೇಶದ ಹುಳುಕು ಹುಡುಕಿ
ನಮ್ಮದೆಲ್ಲವ ಮರೆಯುತ್ತಾರೆ
ಕಾಲದ ಗಾಳಿ ಬೀಸುತ್ತದೆ…
ಕೈ ಅದರುತ್ತದೆ .. ಮರದ ಎಲೆ ಉದುರುತ್ತದೆ
ನದಿಗಳಲ್ಲಿ ಮರಳು ಮರಳಿನಲ್ಲಿ ಕಟ್ಟಡ
ಕಟ್ಟಡದಲ್ಲಿ ನಾವೂ ಇದ್ದೇವೆ
ಕಾಲದ ಗಾಳಿ ಬೀಸುತ್ತದೆ…
ರಪ ರಪ ಮಳೆ ಸುರಿಯುತ್ತದೆ
ಎಲ್ಲಾ ಕೊಚ್ಚಿಹೋಗುತ್ತದೆ
ಆದರೂ ತಂಪಾಗುತ್ತದೆ
ಕಾಲದ ಗಾಳಿ ಬೀಸುತ್ತದೆ…
ಹೊಸದೇನೋ ಹುಟ್ಟುತ್ತದೆ !
-ತಮ್ಮಣ್ಣ ಬೀಗಾರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. ತಮ್ಮಣ್ಣ ಬೀಗಾರರ ಕವನ ವರ್ತಮಾನಕ್ಕೆ ಹಿಡಿದ ಕೈಗನ್ನಡಿ. ರತ್ನಾಕರ ನರಮುಂಡಿಗೆ.

Leave a Reply

Your email address will not be published. Required fields are marked *