foodcourt invites u- ಸಿದ್ಧಾಪುರದ ಮೆರಗು ವೃದ್ಧಿಸಿರುವ ಮೂರು ಮಾಂಸಾಹಾರಿ ಹೋಟೆಲ್‍ಗಳು

ಸಿದ್ಧಾಪುರ ನಗರದಲ್ಲಿ ಪ್ರಾರಂಭವಾಗಿರುವ ಮೂರು ಮಾಂಸಾಹಾರಿ ಹೋಟೆಲ್ ಗಳು ಸ್ಥಳಿಯರು ಮತ್ತು ಪ್ರವಾಸಿಗರ ಖುಷಿಯನ್ನು ವೃದ್ಧಿಸಿವೆ. ಹೊಸವರ್ಷದಲ್ಲಿ ನಗರದ ಗಾರ್ಡನ್ ವೃತ್ತ ಮತ್ತು ತಿಮ್ಮಪ್ಪ ನಾಯ್ಕ ವೃತ್ತಗಳ ನಡುವೆ ಮದ್ಯದಂಗಡಿಯ ಮೇಲಂತಸ್ತಿನಲ್ಲಿ ಕದಂಬ ಎನ್ನುವ ಮಾಂಸಾಹಾರಿ ಹೋಟೆಲ್ ಪ್ರಾರಂಭವಾಗಿದೆ.
ಈ ಹೋಟೆಲ್ ನ ವಿಶೇಶವೆಂದರೆ ಮಲೆನಾಡ ಕೋಳಿ ಕಜ್ಜಾಯ ಎನ್ನಲಾಗುವ ಹೊಸಕೆರೆ ಕಜ್ಜಾಯ ಮತ್ತು ನಾಟಿಕೋಳಿ ಮಸಾಲಾ.
ಈ ಪ್ರದೇಶದ ನೆಚ್ಚಿನ ಖಾದ್ಯಗಳಾದ ನಾಟಿಕೋಳಿ ಮತ್ತು ಹೊಸಗೆರೆ ಕಜ್ಜಾಯ ಪ್ರತಿ ಮನೆಗಳ ವಿಶೇಶ ಖಾದ್ಯಗಳಾದರೂ ಹೋಟೆಲ್‍ಗಳು ಅಥವಾ ಸಾರ್ವಜನಿಕವಾಗಿ ಇವುಗಳ ತಯಾರಿಕೆ,ಮಾರಾಟ ನಡೆಯುತ್ತಿರಲಿಲ್ಲ.
ಆದರೆ ಈವರ್ಷ ಇಲ್ಲಿಯ ಮಾವಿನಗುಂಡಿಯ ಯುವಕರು ಮಲೆನಾಡಿನ ಕೋಳಿಕಜ್ಜಾಯವನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ಹೆಸರುಮಾಡುವ ಜೊತೆಗೆ ಕೋಳಿಕಜ್ಜಾಯ ಪ್ರೀಯರನ್ನು ಸಂತೃಪ್ತಿಪಡಿಸಿದ್ದಾರೆ.
ಮಲೆನಾಡಿನ ಥರಾವರಿ ಮಾಂಸಾಹಾರಿ ವೈವಿಧ್ಯಕ್ಕಾಗಿ ಈಗ ಸಿದ್ಧಾಪುರದ ಜನತೆ ಇಲ್ಲಿ ಮುಗಿಬೀಳುತಿದ್ದಾರೆ ಎನ್ನಲಾಗಿದೆ.
ಸಿದ್ಧಾಪುರದ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮಳವತ್ತಿಗೇಟಿನ ಶಿವಹೋಟೆಲ್ ಮತ್ತು ಶಾಂತಿಸಾಗರ ಹಾಗೂ ಗ್ರೀನ್‍ಲ್ಯಾಂಡ್ ಹೋಟೆಲ್‍ಗಳಿಗೆ ಹೆಚ್ಚಿನ ಬೇಡಿಕೆ.
ಈ ಮಾಂಸಾಹಾರಿ ಹೋಟೆಲ್‍ಗಳೊಂದಿಗೆ ಈಗ ಹೋಟೆಲ್ ಆತಿಥ್ಯಪ್ಯಾಲೇಸ್ ಸ್ಥಳಿಯರು,ಪ್ರವಾಸಿಗರ ನೆಚ್ಚಿನ ಹೋಟೆಲ್ ಆಗಿ ಗಮನಸೆಳೆಯುತ್ತಿದೆ.
ಸಿದ್ಧಾಪುರದ ಮಾಂಸಾಹಾರಿ ಹೋಟೆಲ್ ಗಳಲ್ಲೇ ವಿಶಾಲ, ವೈವಿಧ್ಯ,ವಿಭಿನ್ನತೆಗಳೊಂದಿಗೆ ಗ್ರಾಹಕರಿಗೆ ಇಷ್ಟವಾಗುವಂತೆ ನಾನಾ ವಿಭಾಗಗಳನ್ನು ಮಾಡಲಾಗಿದೆ. ಕೋಲಶಿರ್ಸಿಯ ಸುರೇಶ್ ನಾಯ್ಕ ಮಾಲಕತ್ವದ ಈ ಹೋಟೆಲ್ ಸಿದ್ಧಾಪುರದ ಮೀನು-ಮಾಂಸಾಹಾರಿ ಹೋಟೆಲ್‍ಗಳಲ್ಲೇ ವಿಶಾಲವಾಗಿದ್ದು ಬಹುತೇಕ ಎಲ್ಲಾ ಮೀನು-ಮಾಂಸಾಹಾರಿ ಖಾದ್ಯಗಳನ್ನು ಒದಗಿಸುತ್ತಿದೆ. ವಾಹನನಿಲುಗಡೆ, ವಿಶ್ರಾಂತಿ,ಶೌಚ್ಯಗಳ ಸಕಲ ಅನುಕೂಲಗಳನ್ನಿಟ್ಟಿರುವ ಸುರೇಶ್ ನಾಯ್ಕ ಗ್ರಾಹಕರ ಸೇವೆ,ಸಂತೃಪ್ತಿಯಿಂದ ಹೆಸರುಮಾಡುವ ಧ್ಯೇಯ ಹೊಂದಿದ್ದಾರೆ.
ಇದೇ ತಿಂಗಳಿಂದ ಮರುಪ್ರಾರಂಭವಾಗಲಿದೆ ಗ್ರೀನ್‍ಲ್ಯಾಂಡ್-
ಸಾರಿಗೆ ಸಂಸ್ಥೆ ಬಸ್ ನಿಲ್ಧಾಣದ ಬಳಿ ಕೆಲವು ವರ್ಷಗಳಿಂದ ನಡೆಯುತಿದ್ದ ಗ್ರೀನ್‍ಲ್ಯಾಂಡ್ ಇದೇ ತಿಂಗಳಿಂದ ಜೋಗರಸ್ತೆಯ ಮಿನಿನ್ ವೈನ್ಸ್ ಬಳಿ ಪ್ರಾರಂಭವಾಗಲಿದೆ. ಹಲವು ವಿಭಾಗಗಳ ಅನೇಕರ ನೆಚ್ಚಿನ ಗ್ರೀನ್‍ಲ್ಯಾಂಡ್ ಕೂಡಾ ತಾಲೂಕಿನ ಜನರು ಮತ್ತು ಪ್ರವಾಸಿಗಳ ಆದ್ಯತೆಯ ಹೋಟೆಲ್ ಆಗುವ ನಿರೀಕ್ಷೆಗಳಿವೆ. ಫೆ,10 ರ ಸೋಮವಾರದಿಂದ ಗ್ರೀನ್ ಲ್ಯಾಂಡ್ ಮಿನಿನ್ ವೈನ್ಸ್ ಬಳಿಯ ಜೋಗರಸ್ತೆಯ ಹೊಸ ಕಟ್ಟದಲ್ಲಿ ಶುಭಾರಂಭ ಮಾಡಲಿದೆ.

ಸಾತ್ವಿಕ್‍ಗೆ 9ಕ್ಕೆ ಪ್ರಶಸ್ತಿ ಪ್ರದಾನ
ಸಿದ್ದಾಪುರ:ಫೆ,06- ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಮತ್ತೀಹಳ್ಳಿಯ ಸಾತ್ವಿಕ್ ಎಸ್.ಹೆಗಡೆ ಅವರಿಗೆ ಪ್ರಕಟವಾದ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು ಬನವಾಸಿಯಲ್ಲಿ ಫೆ.9ರಂದು ಬೆಳಿಗ್ಗೆ 9:30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರದಾನ ಮಾಡಲಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *