ಬಿ.ಜೆ.ಪಿ. ಕಾರ್ಯಕರ್ತರ ಸಿಟ್ಟಿಗೆ ಗುರಿಯಾದ ಸ್ಪೀಕರ್ ಕಾಗೇರಿ

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಕ್ಷದ ಪ್ರಮುಖರಿಂದಲೇ ಬಹಿರಂಗ ತರಾಟೆಗೆ ಗುರಿಯಾದ ಪ್ರಕರಣ ಇಂದು ಸಿದ್ಧಾಪುರದಲ್ಲಿ ನಡೆದಿದೆ.ಕಾರ್ಯಕರ್ತರ ಅವಗಣನೆ, ಅಭಿವೃದ್ಧಿಕಾರ್ಯಗಳ ನಿರ್ಲಕ್ಷದ ಹಿನ್ನೆಲೆಯಲ್ಲಿ ಬಿ.ಜೆ.ಪಿ. ಸದಸ್ಯರು, ಜನಪ್ರತಿನಿಧಿಗಳೇ ಬಹಿರಂಗವಾಗಿ ವಿಧಾನಸಭಾ ಅಧ್ಯಕ್ಷರನ್ನುತರಾಟೆಗೆ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಿದ್ಧಾಪುರದ ಸಾಯಿನಗರದ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ವಿಧಾನಸಭಾಧ್ಯಕ್ಷ ಕಾಗೇರಿ ತಮ್ಮ ನಿಗದಿತ ಕೆಲಸ ಮುಗಿಸುತಿದ್ದಂತೇ ಸ್ಥಳಿಯ ಪಟ್ಟಣ ಪಂಚಾಯತ್ ಸದಸ್ಯರು, ಬಿ.ಜೆ.ಪಿ.ಪದಾಧಿಕಾರಿಗಳೂ ಆಗಿರುವ ಕೆಲವರು ಶಾಸಕರಿಗೆ ನಮ್ಮ ಬೇಡಿಕೆ,ಅಹವಾಲು ಕೇಳಲು ಸಮಯವಿಲ್ಲ,ಜನ ಅಭಿವೃದ್ಧಿಯೂ ಇಲ್ಲ, ನಮ್ಮ ಪರಿಗಣನೆಯೂ ಇಲ್ಲ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಹಿಂದೆ ನಮ್ಮ ಸರ್ಕಾರ ಬರಲಿ ಕೆಲಸ ಮಾಡೋಣ ಎನ್ನುತಿದ್ದವರು ಈಗ ಕಾರ್ಯಕರ್ತರಿಗೆ ಮಾತನಾಡಲೂ ಸಮಯ ನಿಡುತ್ತಿಲ್ಲ. ಯಾಕೆ ಹೀಗೆ? ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳ ಅಹವಾಲು ಕೇಳಲು ಸಮಯವಿದೆಯೆ? ಎಂದೆಲ್ಲಾ ಪ್ರಶ್ನಿಸತೊಡಗಿದಂತೆ ಮಾತನಾಡೋಣ, ಸಮಯಕೊಡುತ್ತೇನೆ ಎಂದು ಟಾಟಾ ಕೂಡಾ ಮಾಡದೆ ಸಭಾಧ್ಯಕ್ಷರು ಕಾರ್ ಹತ್ತಿ ನಡೆದಿರುವ ಬಗ್ಗೆ ಬಿ.ಜೆ.ಪಿ. ಕಾರ್ಯಕರ್ತರೇ ಮಾಹಿತಿ ನೀಡಿದ್ದಾರೆ.
ಇಂದಿನ ಸಾಯಿನಗರದ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸದಿರುವುದು, ಗ್ರಾಮೀಣಭಾಗದ ನಿಗದಿತ ಕಾರ್ಯಕ್ರಮಕ್ಕೆ ಬಂದಿದ್ದ ಕಾಗೇರಿ ಸಾಯಿನಗರದ ಸಣ್ಣ ಕಾಮಗಾರಿಯ ಶಂಕುಸ್ಥಾಪನೆ ಮಾಡಿರುವುದು. ಸಿದ್ಧಾಪುರ ತಾಲೂಕು ಮತ್ತು ಶಿರಸಿ ಕ್ಷೇತ್ರದಲ್ಲಿ ಸಭಾಧ್ಯಕ್ಷ ಕಾಗೇರಿ ಬಿ.ಜೆ.ಪಿ.ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿರುವುದು, ಸರ್ಕಾರದ ಕೆಲವು ಕೆಲಸಗಳನ್ನು ಜಾತಿ,ನಾಯಕರ ಮೇಲಿನ ಅಸಮಾಧಾನಕ್ಕೆ ತಡೆಹಿಡಿದಿರುವುದು ಸೇರಿದಂತೆ ಚುನಾವಣೆ,ಪಕ್ಷದ ಕೆಲಸಗಳನ್ನು ಮಾಡಿರುವ ಪ್ರಾಮಾಣಿಕರನ್ನು ಕಡೆಗಣಿಸಿ ಗುಟ್ಟಾಗಿ ಕೆಲವರಿಗೆ ಮಾತ್ರ ಸಕಲ ಅನುಕೂಲ ಮಾಡುತ್ತಿರುವ ಕಾಗೇರಿಯವರ ಇತ್ತೀಚಿನ ನಡವಳಿಕೆಯಿಂದ ಬೇಸತ್ತ ಪಕ್ಷದ ಕಾರ್ಯಕರ್ತರೇ ಈ ಘಟನೆಗೆ ಮುಂದಾಗಿ, ಮುಜುಗರ ಉಂಟುಮಾಡಿದ್ದು ಸತ್ಯ ಎಂದು ಸ್ಥಳಿಯರು ತಿಳಿಸಿದ್ದಾರೆ.

ಕಾರವಾರದಿಂದ ಬಂದಿದ್ದ ಗುರುಭಜಕರು- ರಥೋತ್ಸವ,ಜಾತ್ರೆ,ಉತ್ಸವ
ಗ್ರೀನ್‍ಲ್ಯಾಂಡ್‍ಶುಭಾರಂಭ-
ಸಿದ್ಧಾಪುರ ತಾಲೂಕಿನ ಭುವನಗಿರಿಯ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳು ನಡೆದವು.
ನಗರದ ಬಸವೇಶ್ವರ ದೇವರ ಜಾತ್ರೆ ಇಂದು ನಾಳೆ ನಡೆಯಲಿದೆ. ಸೋಮವಾರ ಪುಷ್ಫರಥೋತ್ಸವ ನಡೆದರೆ,ಮಂಗಳವಾರ ಮಹಾರಥೋತ್ಸವ ನಡೆಯಲಿದೆ.ಸಿದ್ಧಾಪುರ ಕೊಂಡ್ಲಿ ಹಾಳದಕಟ್ಟಾದಲ್ಲಿ ನಡೆದ ಗುರುಪ್ರತಿಪದಾ ಉತ್ಸವ ಸೋಮುವಾರ ನಡೆಯಿತು.ಕಾರವಾರ ಬಾಡದ ಗುರುಮಠದ ಶಿಷ್ಯ ವರ್ಗಸೇರಿದಂತೆ ಅನೇಕರು ಕಾರವಾರದಿಂದ ಸಿದ್ಧಾಪುರಕ್ಕೆ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡರು.
ಭಜನೆ,ಅನ್ನಸಂತರ್ಪಣೆ ವೇಳೆ ಸ್ಥಳಿಯರಿಗಿಂತ ಕಾರವಾರದಿಂದ ಬಂದ ಭಜಕರು ಪಾಲ್ಗೊಂಡು ಗುರುಪ್ರತಿಪದಾ ಉತ್ಸವ ಸಂಪನ್ನಮಾಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *