ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್

ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ ಸೆರೆಹಿಡಿದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾಲ್ವರಲ್ಲಿ ಸಿದ್ದಾಪುರದ ವೀರಭದ್ರ ಹೆಗಡೆ ಮತ್ತು ಪ್ರವೀಣ ಭಟ್ ಸೇರಿರುವುದು ವಿಶೇಶ. ಅಂಕೋಲಾದ ವ್ಯಕ್ತಿಗಳಿಬ್ಬರು ಮತ್ತು ಸಿದ್ಧಾಪುರದ ಎರಡುಜನ ಯುವಕರು ಎರಡು ಕಾರ್‌ಗಳನ್ನು ಬಳಸಿ ಮಾದಕ ಬ್ರೌನ್‌ಶುಗರ್ ಸಾಗಿಸುವ ಮಾಹಿತಿ ಉತ್ತರಕನ್ನಡ ಜಿಲ್ಲಾ ಅಪರಾಧ ನಿಗ್ರಹ ದಳಕ್ಕೆ ಸಿಕ್ಕಿತ್ತು. ಕೆಲವು ದಿವಸಗಳಿಂದ ಬಲೆಬೀಸಿದ್ದ ಈ ಪೊಲೀಸರು ಅಂಕೋಲಾದ ಗುನಗಾ, ಭಾಗ್ವತ್ ರೊಂದಿಗೆ ಸಿದ್ದಾಪುರದ ವೀರಭದ್ರ ಮತ್ತು ಪ್ರವೀಣ ಮಾಡುತ್ತಿರುವ ವ್ಯವಹಾರ, ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ಸಾರ್ವಜನಿಕರು, ಇಲಾಖೆಯ ಮಾಹಿತಿಗಳು ತನಿಖಾ ದಳಕ್ಕೆ ಸಿಗುತ್ತಿದ್ದಂತೆ ಜಾಗೃತರಾದ ತನಿಖಾ ದಳದ ಅಧಿಕಾರಿಗಳು ಮಾಲಿನೊಂದಿಗೆ ಆರೋಪಿಗಳನ್ನು ಹಿಡಿಯಲು ಹೊಂಚುಹಾಕಿದ್ದರು. ನಿರೀಕ್ಷೆಯಂತೆ ಗೋವಾದಿಂದ ಕಾರವಾರ ಮೂಲಕ ಘಟ್ಟದ ಮೇಲೆ ಸಾಗಬೇಕಾಗಿದ್ದ ಈ ವಾಹನಗಳಲ್ಲಿದ್ದ ೨.೫ ಕೋಟಿ ಮೌಲ್ಯದ ಮಾದಕ ವಸ್ತುಗಳೊಂದಿಗೆ ಈ ನಾಲ್ವರು ಅಂಕೋಲಾ ಬಾಳೆಗುಳಿ ಬಳಿ ಪೊಲೀಸರ ಕೈಗೆ ಸಿಕ್ಕರು.

ಈ ಬಗ್ಗೆ ವಿಶೇಶ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ಪೊಲೀಸರು ನಾಲ್ಕುಜನ ಅಫೀಮು ಸಾಗಾಟಗಾರರೊಂದಿಗೆ ಎರಡುಕಾರ್ ಗಳು ಹಾಗೂ ೨.೫ ಕೋಟಿ ಮೌಲ್ಯದ ಬ್ರೌನ್‌ಶುಗರ್ ವಶ ಪಡಿಸಿಕೊಂಡಿದ್ದಾರೆ.

ಯುವರತ್ನ,
ಜೇಮ್ಸ್ ಟ್ರೆಂಡಿಂಗ್
ಬೆಂಗಳೂರು,ಮಾ.೧೮- ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ.
ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.
ಸಂತೋಷ್ ಆನಂದರಾಮ್ ನಿರ್ಧೇಶನದ ಯುವರತ್ನದ ಡೈಲಾಗ್

ಸೀಟಿಗೆ ಹೊಡೆದಾಡುವವನು ಡಾನ್ ಅದರಲ್ಲಿ ಕೂಡ್ರುವವನು ನಾನ್

ಅಪಾರ ಜನಮೆಚ್ಚುಗೆ ಗಳಿಸಿದೆ.
ಇನ್ನೊಂದು ನೂತನ ಚಿತ್ರ ಜೇಮ್ಸ್ ನ ವಿಡಿಯೋ ಟೀಜರ್ ಕೂಡಾ ಟ್ರೆಂಡಿಂಗ್ ಆಗಿದ್ದು ಪುನೀತ್‌ರಾಜ್ ಮಿಷನ್‌ಗನ್‌ನಿಂದ ವಾಹನವೊಂದನ್ನು ಉಡಾಯಿಸುವ ಚಿತ್ರವನ್ನು ಒಂದೇ ದಿನದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *