ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್ ವಿಮೆ,ಭತ್ಯೆ ಒ.ಕೆ. ಹೋಮ್ ಗಾರ್ಡ್ ಗಳಿಗೆ ವೇತನವೇ ಇಲ್ಲ ಯಾಕೆ?

ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.


ಕರೋನಾ ರಗಳೆಯಲ್ಲಿ ಕೆಲವು ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ ವೇತನವೂ ಇಲ್ಲ ಎನ್ನುವಂತಾಗಿದೆ.ಜನಸಾಮಾನ್ಯರು, ಸಣ್ಣ-ಪುಟ್ಟ ಕೆಲಸ, ಉದ್ದಿಮೆಗಳ ಜನರಿಗೆ ಕೆಲಸವೂ ಇಲ್ಲ, ಆದಾಯವೂ ಇಲ್ಲ ಎನ್ನುವಂತಾಗಿದೆ. ಕರೋನಾ ನೆಪದಲ್ಲಿ ಬಹುತೇಕ ಸರ್ಕಾರಿ ನೌಕರರು ರಜೆ, ವಿಶ್ರಾಂತಿ ಪಡೆಯುತ್ತಾ ಪುಕ್ಕಟ್ಟೆ ವೇತನ ಎಣಿಸುತಿದ್ದರೆ, ಹೋಮ್ ಗಾರ್ಡ್ ಸೇವೆಯಲ್ಲಿದ್ದು ಪೊಲೀಸ್ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಪರೀತ ಕೆಲಸ, ವೇತನ ಇಲ್ಲ ಎನ್ನುವ ದುಸ್ಥಿತಿ ಇದೆ.

ರಾಜ್ಯದಲ್ಲಿ ಲಕ್ಷಾಂತರ ಜನರು ಹೋಮ್ ಗಾರ್ಡ್ ಸೆವೆಯಲ್ಲಿದ್ದವರು ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಕಾರ್ಯ ನಿರ್ವಹಿಸುತಿದ್ದಾರೆ. ಮಾಡುವ ಕೆಲಸ ಒಂದೇ ಆದರೆ ಅನುಕೂಲ ಮಲತಾಯಿ ಧೋರಣೆ ಎನ್ನುವಂತಾಗಿರುವ ಈ ಸೇವಕರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನ ನೀಡಿಲ್ಲ.

ವರ್ಷವಿಡೀ ಕೆಲಸಮಾಡಿ ವರ್ಷಕ್ಕೆ ಎರಡ್ಮೂರು ಬಾರಿ ಕನಿಷ್ಟ ವೇತನ ಪಡೆಯುವ ಈ ಹೋಂಗಾರ್ಡ್ ಗಳ ಸ್ಥಿತಿ ಕರೋನಾ ಸಮಯದಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸರ್ಕಾರ, ಹಿರಿಯ ಅಧಿಕಾರಿಗಳು ಅನುಕೂಲ,ಸೌಲಭ್ಯ ಪ್ರಕಟಿಸುತಿದ್ದಾರಾದರೂ ಇವು ನಿಗದಿತ ಸಮಯಕ್ಕೆ ದೊರೆಯುತ್ತಿವೆಯಾ ಎನ್ನುವುದು ಯಾರಿಗೂ ಬೇಡದ, ತಿಳಿಯದ ವಿಷಯವಾಗಿದೆ.

ಕರೋನಾ ಸೇವೆಯಲ್ಲಿ ಪೊಲೀಸರಷ್ಟೇ ನಿಷ್ಠೆಯಿಂದ ದುಡಿದ ಹೋಮ್ಗಾರ್ಡ್ ಗಳ ಸ್ಥಿತಿ ಈಗ ಚಿಂತಾಜನಕ ಈ ಬಡಪಾಯಿಗಳನ್ನು ಇಲಾಖೆಯವರೂ ಕೇಳುವುದಿಲ್ಲ, ಕುಟುಂಬಸ್ಥರೂ ನಂಬುವುದಿಲ್ಲ ಎನ್ನುವಂತಾಗಿದ್ದು ಈ ಜನರ ಬವಣೆ ಬಗ್ಗೆ ಕೇಳಿ ಶೀಘ್ರ ಅನುಕೂಲ ಕಲ್ಫಿಸಲು ಅನೇಕ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಮಾಜಮುಖಿಗೆ ಮಾಹಿತಿ ನೀಡಿದ ಜಾ,ದಳದ ಉತ್ತರ ಕನ್ನಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಕ್ ಹಾಳದಕಟ್ಟಾ ‘ ಕತ್ತೆಯಂತೆ ದುಡಿಸಿ, ವೇತನ, ಅನುಕೂಲ ಕಲ್ಪಿಸದ ಸರ್ಕಾರದ ನೀತಿ ಸರಿಯಲ್ಲ, ಅಮಾಯಕ ಸೇವಕರಾದ ಹೋಮ್ ಗಾರ್ಡ್ ಗಳ ವಿಚಾರದಲ್ಲಿ ಅಮಾನವೀಯತೆಯಿಂದ ವರ್ತಿಸುವ ಸರ್ಕಾರ, ಸಮಾಜ ನಾಗರಿಕ ಸಮಾಜವೆನ್ನಲು ನಮಗೇ ನಾಚಿಕೆ’ ಎಂದಿದ್ದಾರೆ. ಕರೋನಾ ಮತ್ತಿತರ ಸಂದರ್ಭಗಳಲ್ಲಿ ನಿರಂತರವಾಗಿ ಸೇವಾಮನೋಭಾವದಿಂದ ದುಡಿಯುವ ಹೋಮ್ ಗಾರ್ಡ್ ಗಳಿಗೆ ನ್ಯಾಯ ಒದಗಿಸಬೇಕೆಂಬುದು ಸಮಾಜಮುಖಿಯ ಆಗ್ರಹ ಕೂಡಾ.

ಕೊರೋನಾ ವಿರುದ್ಧ ಹೋರಾಡುವ ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಕೋವಿಡ್ ವಿರುದ್ಧ ಹಗಲು ರಾತ್ರಿ ಶ್ರಮಿಸುತ್ತಿರುವ ಪೋಲೀಸರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.

ಇದೀಗ ಪೊಲೀಸರು, ಹೋಂ ಗಾರ್ಡ್ಸ್, ಅಗ್ನಿಶಾಮಕ ಸಿಬ್ಬಂದಿ, ಸಿವಿಲ್‌ ಡಿಫೆನ್ಸ್‌, ಕಾರಾಗೃಹ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ಹಾಗೂ ತುಟ್ಟಿಭತ್ಯೆ ಸಿಗ;ಲಿದೆ ಎಂದು ಪ್ರವೀಣ್ ಸೂದ್ ಟ್ವೀಟ್ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಉ.ಕ. ಭಟ್ಕಳ ಹೊರತು ಪಡಿಸಿ ನಗರ 7 ರಿಂದ 1 (3) ಗ್ರಾಮೀಣ 7 ರಿಂದ 7 ಅಗತ್ಯ ಸೇವೆ -ಶಿವರಾಮ್ ಹೆಬ್ಬಾರ್ ಪ್ರಕಟಣೆ
ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಸೇವೆಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *