ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್ ವಿಮೆ,ಭತ್ಯೆ ಒ.ಕೆ. ಹೋಮ್ ಗಾರ್ಡ್ ಗಳಿಗೆ ವೇತನವೇ ಇಲ್ಲ ಯಾಕೆ?

ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.


ಕರೋನಾ ರಗಳೆಯಲ್ಲಿ ಕೆಲವು ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ ವೇತನವೂ ಇಲ್ಲ ಎನ್ನುವಂತಾಗಿದೆ.ಜನಸಾಮಾನ್ಯರು, ಸಣ್ಣ-ಪುಟ್ಟ ಕೆಲಸ, ಉದ್ದಿಮೆಗಳ ಜನರಿಗೆ ಕೆಲಸವೂ ಇಲ್ಲ, ಆದಾಯವೂ ಇಲ್ಲ ಎನ್ನುವಂತಾಗಿದೆ. ಕರೋನಾ ನೆಪದಲ್ಲಿ ಬಹುತೇಕ ಸರ್ಕಾರಿ ನೌಕರರು ರಜೆ, ವಿಶ್ರಾಂತಿ ಪಡೆಯುತ್ತಾ ಪುಕ್ಕಟ್ಟೆ ವೇತನ ಎಣಿಸುತಿದ್ದರೆ, ಹೋಮ್ ಗಾರ್ಡ್ ಸೇವೆಯಲ್ಲಿದ್ದು ಪೊಲೀಸ್ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಪರೀತ ಕೆಲಸ, ವೇತನ ಇಲ್ಲ ಎನ್ನುವ ದುಸ್ಥಿತಿ ಇದೆ.

ರಾಜ್ಯದಲ್ಲಿ ಲಕ್ಷಾಂತರ ಜನರು ಹೋಮ್ ಗಾರ್ಡ್ ಸೆವೆಯಲ್ಲಿದ್ದವರು ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಕಾರ್ಯ ನಿರ್ವಹಿಸುತಿದ್ದಾರೆ. ಮಾಡುವ ಕೆಲಸ ಒಂದೇ ಆದರೆ ಅನುಕೂಲ ಮಲತಾಯಿ ಧೋರಣೆ ಎನ್ನುವಂತಾಗಿರುವ ಈ ಸೇವಕರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನ ನೀಡಿಲ್ಲ.

ವರ್ಷವಿಡೀ ಕೆಲಸಮಾಡಿ ವರ್ಷಕ್ಕೆ ಎರಡ್ಮೂರು ಬಾರಿ ಕನಿಷ್ಟ ವೇತನ ಪಡೆಯುವ ಈ ಹೋಂಗಾರ್ಡ್ ಗಳ ಸ್ಥಿತಿ ಕರೋನಾ ಸಮಯದಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸರ್ಕಾರ, ಹಿರಿಯ ಅಧಿಕಾರಿಗಳು ಅನುಕೂಲ,ಸೌಲಭ್ಯ ಪ್ರಕಟಿಸುತಿದ್ದಾರಾದರೂ ಇವು ನಿಗದಿತ ಸಮಯಕ್ಕೆ ದೊರೆಯುತ್ತಿವೆಯಾ ಎನ್ನುವುದು ಯಾರಿಗೂ ಬೇಡದ, ತಿಳಿಯದ ವಿಷಯವಾಗಿದೆ.

ಕರೋನಾ ಸೇವೆಯಲ್ಲಿ ಪೊಲೀಸರಷ್ಟೇ ನಿಷ್ಠೆಯಿಂದ ದುಡಿದ ಹೋಮ್ಗಾರ್ಡ್ ಗಳ ಸ್ಥಿತಿ ಈಗ ಚಿಂತಾಜನಕ ಈ ಬಡಪಾಯಿಗಳನ್ನು ಇಲಾಖೆಯವರೂ ಕೇಳುವುದಿಲ್ಲ, ಕುಟುಂಬಸ್ಥರೂ ನಂಬುವುದಿಲ್ಲ ಎನ್ನುವಂತಾಗಿದ್ದು ಈ ಜನರ ಬವಣೆ ಬಗ್ಗೆ ಕೇಳಿ ಶೀಘ್ರ ಅನುಕೂಲ ಕಲ್ಫಿಸಲು ಅನೇಕ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಮಾಜಮುಖಿಗೆ ಮಾಹಿತಿ ನೀಡಿದ ಜಾ,ದಳದ ಉತ್ತರ ಕನ್ನಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಕ್ ಹಾಳದಕಟ್ಟಾ ‘ ಕತ್ತೆಯಂತೆ ದುಡಿಸಿ, ವೇತನ, ಅನುಕೂಲ ಕಲ್ಪಿಸದ ಸರ್ಕಾರದ ನೀತಿ ಸರಿಯಲ್ಲ, ಅಮಾಯಕ ಸೇವಕರಾದ ಹೋಮ್ ಗಾರ್ಡ್ ಗಳ ವಿಚಾರದಲ್ಲಿ ಅಮಾನವೀಯತೆಯಿಂದ ವರ್ತಿಸುವ ಸರ್ಕಾರ, ಸಮಾಜ ನಾಗರಿಕ ಸಮಾಜವೆನ್ನಲು ನಮಗೇ ನಾಚಿಕೆ’ ಎಂದಿದ್ದಾರೆ. ಕರೋನಾ ಮತ್ತಿತರ ಸಂದರ್ಭಗಳಲ್ಲಿ ನಿರಂತರವಾಗಿ ಸೇವಾಮನೋಭಾವದಿಂದ ದುಡಿಯುವ ಹೋಮ್ ಗಾರ್ಡ್ ಗಳಿಗೆ ನ್ಯಾಯ ಒದಗಿಸಬೇಕೆಂಬುದು ಸಮಾಜಮುಖಿಯ ಆಗ್ರಹ ಕೂಡಾ.

ಕೊರೋನಾ ವಿರುದ್ಧ ಹೋರಾಡುವ ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಕೋವಿಡ್ ವಿರುದ್ಧ ಹಗಲು ರಾತ್ರಿ ಶ್ರಮಿಸುತ್ತಿರುವ ಪೋಲೀಸರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.

ಇದೀಗ ಪೊಲೀಸರು, ಹೋಂ ಗಾರ್ಡ್ಸ್, ಅಗ್ನಿಶಾಮಕ ಸಿಬ್ಬಂದಿ, ಸಿವಿಲ್‌ ಡಿಫೆನ್ಸ್‌, ಕಾರಾಗೃಹ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ಹಾಗೂ ತುಟ್ಟಿಭತ್ಯೆ ಸಿಗ;ಲಿದೆ ಎಂದು ಪ್ರವೀಣ್ ಸೂದ್ ಟ್ವೀಟ್ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಉ.ಕ. ಭಟ್ಕಳ ಹೊರತು ಪಡಿಸಿ ನಗರ 7 ರಿಂದ 1 (3) ಗ್ರಾಮೀಣ 7 ರಿಂದ 7 ಅಗತ್ಯ ಸೇವೆ -ಶಿವರಾಮ್ ಹೆಬ್ಬಾರ್ ಪ್ರಕಟಣೆ
ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಸೇವೆಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *