ಬಂಗಾರಕ್ಕಾಗಿ ಒಂಟಿಮನೆ ವಿಧವೆ ಕೊಂದ ಕಳ್ಳನ ಬಂಧನ

ಬಂಗಾರದ ಆಸೆಗಾಗಿ ಒಂಟಿಮನೆಯ ವಿಧವೆಯೊಬ್ಬರನ್ನು ಕೊಂದ ಆರೋಪದ ಮೇಲೆ ಬಿಳೇಗೋಡಿನ ರಾಜು ಗೌಡ ಎನ್ನುವ ವ್ಯಕ್ತಿಯೊಬ್ಬನನ್ನು ಸಿದ್ಧಾಪುರ ಪೋಲಿಸರು ಬಂಧಿಸಿದ್ದಾರೆ.

ಈ ವ್ಯಕ್ತಿ ಮೊನ್ನೆಯ ಶನಿವಾರ ರಾತ್ರಿ ದೊಡ್ಮನೆ ಜಕ್ಕಾರಿನ ಒಂಟಿಮನೆಯ ವಿಧವೆ ಗೌರಿ ನಾಯ್ಕರನ್ನು ಕೊಲೆ ಮಾಡಿ ಬಂಗಾರ ಅಪಹರಿಸಿದ್ದ.
ಪ್ರಕರಣದ ವಿವರ-

ಸಿದ್ಧಾಪುರದ ದೊಡ್ಮನೆಯ ಜಕ್ಕಾರು ದುರ್ಗಮ ಹಳ್ಳಿ, ಆ ಕಾಡುಗ್ರಾಮದ ನಡುವೆ ಇದ್ದಿದೊಂದೇ ಮನೆ. ಆ ಒಂಟಿಮನೆಯಲ್ಲಿ ವಾಸಿಸುತಿದ್ದವಳು ಗೌರಿ ನಾಯ್ಕ. ಒಬ್ಬ ಗಂಡು ಮತ್ತು ಒಬ್ಬಳು ವಿವಾಹಿತ ಮಕ್ಕಳನ್ನು ಹೊಂದಿದ್ದ ಗೌರಿ ನಾಯ್ಕ ಮಗ ತೀರ್ಥಳ್ಳಿಯಲ್ಲಿ ಮಗಳು ಸಿದ್ಧಾಪುರ ಹೊಸೂರಿನಲ್ಲಿ ಇರುತಿದ್ದರು.

ನಾಲ್ಕು ವರ್ಷದ ಕೆಳಗೆ ಗಂಡನನ್ನು ಕಳೆದುಕೊಂಡಿದ್ದ ಈ ಮಹಿಳೆ ಜಕ್ಕಾರಿನಲ್ಲಿ ಒಂಟಿಯಾಗಿ ಇರುತಿದ್ದರು. ಮೊನ್ನೆ ಶನಿವಾರ ಬೀರಲಮಕ್ಕಿಗೆ ಅಂಗಡಿಯ ದಿನಸಿ ತರಲು ಬಂದಿದ್ದ ಮಹಿಳೆಗೆ ಅಂಗಡಿಯ ಮಾಲಿಕ ಅಲ್ಲಿದ್ದ ವ್ಯಕ್ತಿಯೊಬ್ಬನಿಗೆ ಇವರಿಗೆ ಬಿಟ್ಟು ಬಾ ಎಂದು ತನ್ನ ಬೈಕ್ ಕೊಟ್ಟು ಮಹಿಳೆಯನ್ನು ಮನೆಗೆ ತಲುಪಿಸುತ್ತಾನೆ.

ಹೀಗೆ ಗೌರಿ ನಾಯ್ಕರನ್ನು ಮನೆಗೆ ತಲುಪಿಸಿದ ರಾಜುಗೌಡನ ಕಳ್ಳ ಬುದ್ದಿ ಗೌರಿ ನಾಯ್ಕರ ಬಂಗಾರದ ಮೇಲೆ ಆಸೆ ಪಡುತ್ತದೆ. ಅಂಗಡಿ ಮಾಲಿಕನಿಗೆ ಬೈಕ್ ಮರಳಿಸಿದ ರಾಜುಗೌಡ ಅಂದೇ ರಾತ್ರಿ ತನ್ನೂರು ಉಡಳ್ಳಿ ಯಿಂ ದ ಬಂದು ಮಹಿಳೆಯ ಮನೆಯಲ್ಲಿ ಮದ್ಯಪಾನ ಮಾಡಿ ಕೈಹಾರೆ ಎನ್ನುವ ಕಬ್ಬಿಣದ ಆಯುಧದಿಂದ ಗೌರಿ ನಾಯ್ಕರಿಗೆ ಹೊಡೆದು ಕೊಲ್ಲುತ್ತಾನೆ. ಜೀವ ಹೋದ ಗೌರಿಯ ದೇಹದಿಂದ ಬಂಗಾರ ಕಳಚುವ ರಾಜು ಒಂಟಿಮನೆಯ ವಿದ್ಯುತ್ ಸಮಪರ್ಕದ ಪ್ಯೂಜ್ ಕಿತ್ತು ಅಲ್ಲಿಂದ ಪರಾರಿಯಾಗುತ್ತಾನೆ.

ಮಾರನೇ ದಿನ ವಿದ್ಯುತ್ ಬಿಲ್ ನೀಡಲು ಹೋದ ಸ್ಥಳಿಯ ವಿದ್ಯುತ್ ಬಿಲ್ ಸಂಗ್ರಹಕಾರ ಈ ವಿಚಾರವನ್ನು ಸ್ಥಳಿಯರಿಗೆ ತಿಳಿಸಿ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ಗೋಪಾಲಕೃಷ್ಣ ನಾಯಕ ಮತ್ತು ಪಿ.ಆಯ್. ಪ್ರಕಾಶ ತನಿಖೆ ಆರಂಭಿಸಿ ಮಹಿಳೆಯ ಪ್ರವಾಸ ಚರಿತ್ರೆ ತಿಳಿದು ಸಂಶಯದ ಆಧಾರದಲ್ಲಿ ಉಡಳ್ಳಿಯ ರಾಜುಗೌಡನನ್ನು ಬಂಧಿಸುತ್ತಾರೆ. ಮೊದಮೊದಲು ಪೊಲೀಸರಿಗೇ ದಿಕ್ಕುತಪ್ಪಿಸುವಂತೆ ವರ್ತಿಸಿದ ರಾಜುಗೌಡ ನಂತರ ಪೊಲೀಸ್ ಭಾಷೆಯಲ್ಲಿ ಮಾತನಾಡಿಸಿದಾಗ ಶನಿವಾರ ಗೌರಿ ನಾಯ್ಕರನ್ನು ಡ್ರಾಪ್ ಮಾಡಿದ ನಂತರ ರಾತ್ರಿ ಒಬ್ಬನೇ ಬಂದು ಕೊಲೆ ಮಾಡಿ ಬಂಗಾರ ಅಪಹರಿಸಿದ್ದನ್ನು ಒಪ್ಪಿಕೊಳ್ಳುತ್ತಾನೆ. ಈ ಹಿಂದೆ ಕೂಡಾ ಕೆಲವು ಕಳ್ಳತನಗಳಲ್ಲಿ ಆರೋಪಿಯಾಗಿರುವ ಈ ರಾಜುಗೌಡ ಜಕ್ಕಾರು ಒಂಟಿಮನೆಯ ವಿಧವೆಯನ್ನು ಬಂಗಾರದ ಆಸೆಗಾಗಿ ಕೊಲೆಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಒಂಟಿಮನೆಯ ವಿಧವೆ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರ ಕೆಲಸದ ಬಗ್ಗೆ ಸ್ಥಳಿಯರು ಪ್ರಶಂಸಿಸಿದ್ದಾರೆ. ಈ ಪ್ರಕರಣದ ವಿವರ ನೋಡಿ- @ಸಮಾಜಮುಖಿ ಕನ್ನೇಶ್ samajamukhi youtube channel https://www.youtube.com/watch?v=XfTPvIVw7tM

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *