ಸಿದ್ದಾಪುರ- ಕರೋನಾ ಪರಿಣಾಮ- ಬಂಗಾರದ ಅಂಗಡಿಗಳು 2.30 ಕ್ಕೆ ಕ್ಲೋಜ್, ತಾಳಮದ್ದಳೆಯಲ್ಲೂ ಚರ್ಚೆ!

ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನಿವಾರ್ಯ ಎನ್ನುವ ಜನಾಭಿಪ್ರಾಯವಿದ್ದರೂ ಸರ್ಕಾರ ಜನರು, ಜನಾಭಿಪ್ರಾಯವನ್ನು ಮನ್ನಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ತೀರ್ಮಾನ, ಅಭಿಪ್ರಾಯ ಗಳ ಮೂಲಕ ಸರ್ಕಾರಕ್ಕೇ ಸವಾಲು ಹಾಕುತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನಾ ಸಂಘ ಸಂಸ್ಥೆಗಳು ಕರೋನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತಾವೇ ಸ್ವಯಂ ನಿಯಂತ್ರಣ,ಶಿಸ್ತು ಪಾಲನೆ ಮೂಲಕ ಕರೋನಾ ನಿಯಂತ್ರಣಕ್ಕೆ ಸಿದ್ಧರಾಗಿದ್ದಾರೆ. ಕರಾವಳಿ, ಮಲೆನಾಡು, ಅರೆಮಲೆನಾಡಿನ ಉತ್ತರ ಕನ್ನಡದಲ್ಲಿ ಆಯಾ ತಾಲೂಕುಗಳ ಸಂಘ-ಸಂಸ್ಥೆಗಳು ತಮ್ಮ ಕೆಲಸ, ಸೇವೆಗಳ ಸಮಯ ನಿಗದಿ ಮಾಡಿಕೊಳ್ಳುತಿದ್ದಾರೆ. ಸಿದ್ಧಾಪುರದ ಸರಾಪ ಸಂಘ ಜುಲೈ 6 ರ ಸೋಮವಾರದಿಂದ ಮುಂಜಾನೆ 9ರಿಂದ ಮಧ್ಯಾಹ್ನ 2.30 ರ ವರೆಗೆ ಮಾತ್ರ ಬಂಗಾರದ ಻ಅಂಗಡಿಗಳ ವ್ಯವಹಾರ ನಿಗದಿ ಮಾಡಿದೆ. ಸೋಮವಾರದಿಂದ ಸಿದ್ಧಾಪುರದ ಬಂಗಾರದ ಻ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.

ತಾಳಮದ್ದಳೆ
ಕರೋನಾ ಹಾವಳಿಯಿಂದಾಗಿ ಇಡೀ ಜಗತ್ತಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ದೇಶ ಮುಂದೆ ಹೋಗುವ ಬದಲು ಹಿಂದೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರವೇ ಜೀವ ಶಕ್ತಿಯನ್ನು ಕೊಡುವುದಾಗಿದೆ ಎಂದು ಜೈರಾಂ ಕೆ.ಆರ್ ತಲವಾಟ ಹೇಳಿದರು.
ಅವರು ತಾಲ್ಲೂಕಿನ ಹೇಮಗಾರ ಕಶಿಗೆಯ ಕೇಶವ ನಾರಾಯಣ ಸಭಾಗೃಹದಲ್ಲಿ ಭುವನೇಶ್ವರೀ ತಾಳಮದ್ದಲೆ ಕೂಟದ 33 ನೇ ವರ್ಷದ ಚಾತುರಮಾಸ್ಯ ಸರಣಿ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
3 ದಶಕಗಳ ಕಾಲ ತಾಳಮದ್ದಲೆ ಕೂಟವನ್ನು ನಡೆಸಿಕೊಂಡು ಬರುತ್ತಿರುವ ಭುವನೇಶ್ವರೀ ತಾಳಮದ್ದಲೆ ಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಻಻ಅನ್ಯರ ಪ್ರೋತ್ಸಾಹಕ್ಕಿಂತ ನಮ್ಮ ಮಣ್ಣಿನ ಕಲಾ ಪ್ರಕಾರವನ್ನು ರಕ್ಷಿಶಿಕೊಂಡು ಹೋಗುವುದು ಈ ಸಂದರ್ಭದಲ್ಲಿ ಮಹತ್ವದ್ದಾಗಿದೆ.

ಕೂಟ ಇದೆ ರೀತಿ ಮುಂದುವರೆದಾಗ ಯುವ ಜನಾಂಗ ಯಕ್ಷಗಾನದ ದತ್ತ ಆಕರ್ಷಿತರಾಗಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅಭ್ಯಾಗತರಾಗಿದ್ದ ಹಿರಿಯ ನ್ಯಾಯವಾಧಿ ಜೆ.ಪಿ.ಎನ್ ಹೆಗಡೆ ಮಾತನಾಡಿ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲೇ ಯಕ್ಷಗಾನ ಕಲೆಯನ್ನು ಪೋಶಿಸಿಕೊಂಡು ಬಂದ ಕಶಿಗೆಯಲ್ಲಿ ನಂತರದ ತಲೆಮಾರಿನವರು ಮುಂದುವರೆಸಿರುವುದು ಖುಷಿಯ ಸಂಗತಿಯಾಗಿದೆ. ಸಂಸ್ಕೃತಿಯ ಬೆಳವಣಿಗೆ ಈ ಮೂಲಕ ಸಾಧ್ಯವಾಗುತ್ತದೆ ಎಂದರು.


ಹಿರಿಯ ವೇದಾಂತ ವಿದ್ವಾಂಸ ಕೃಷ್ಣ ಭಟ್ಟ ಅಡವಿತೋಟ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ ಭಟ್ಟ ಕಶಿಗೆ ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರೆ ಪ್ರೀತಿವರ್ಧನ ಭಟ್ಟ ವಂದಿಸಿದರು. ನಂತರ ಪಟ್ಟಾಭಿಷೇಕ ಆಖ್ಯಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ ಹಾಗೂ ಮಾಧವ ಭಟ್ಟ (ಭಾಗವತ) ಮಂಜುನಾಥ ಹೆಗಡೆ ಕಂಚಿಮನೆ (ಮದ್ದಳೆ) ಪಾಲ್ಗೊಂಡಿದ್ದರು. ಮುಮ್ಮೇಳನದಲ್ಲಿ ಜಿ.ಕೆ ಭಟ್ಟ ಕಶಿಗೆ, (ದಶರಥ) ಜಯರಾಮ ತಲವಾಟ (ಕೈಕೆಯಿ) ಶೇಷಗಿರಿ ಭಟ್ಟ (ಶ್ರೀರಾಮ) ಗ.ನಾ ಹೆಗಡೆ (ಲಕ್ಷ್ಮಣ) ಜಯರಾಮ ಭಟ್ಟ (ಮಂಥರೆ) ಎಂ.ಕೆ ಹೆಗಡೆ (ಸೀತೆ) ದಿನೇಶ ಹೆಗಡೆ (ಕೌಸಲ್ಯೆ) ಟಿ.ಎಂ ರಮೇಶ (ಗುಹಾ) ಪಾತ್ರಗಳನ್ನು ನಿರ್ವಹಿಸುವ ಮೂಲಕ ರಂಜಿಸಿದರು. ಭಾಗವತಿಕೆಯ ಅಭ್ಯಾಸ ಮಾಡುತ್ತಿರುವ ಸಾಪ್ಟೇವೆರ್ ಇಂಜನಿಯರ್ ಮಹೇಶ ಹೆಗಡೆ ಕೊಳಗಿ ಆರಂಭದಲ್ಲಿ ಪದ್ಯ ಹೇಳಿ ರಂಜಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *