nk-dc-cauction-ಉ.ಕ. ದಲ್ಲಿ ಕೃತಕ ಪ್ರವಾಹದ ಭಯ, ನೆರೆಯಾಯ್ತು ಹೊರೆ

ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಻ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಈ ವಾರ ಮಳೆಯಿಂದಾಗಿ ಪ್ರವಾಹ, ಪುನರ್ವಸತಿ, ರಸ್ತೆ, ವಿದ್ಯುತ್ ತೊಂದರೆಗಳಾಗಿವೆ. ಕಳೆದ ವರ್ಷ,ಇ ದೇ ಮಳೆಯಲ್ಲಿ ಇದೇ ವಾರ ಪ್ರವಾಹವಾಗಿ ಈ ಭಾಗದ ಬದುಕು,ಜನಜೀವನ ಕೊಚ್ಚಿಹೋಗಿತ್ತು. ಕಳೆದ ವರ್ಷ ಈ ಶತಮಾನದ ಮಳೆ ಹೊಸ ಜನಾಂಗಕ್ಕೆ ಮಳೆ,ಪ್ರವಾಹದ ತೊಂದರೆ, ಭೀತಿಯನ್ನು ಪರಿಚಯಿಸಿತ್ತು.

ಈ ವರ್ಷ ಈ ಪ್ರಮಾಣದ ತೊಂದರೆಗಳಾಗಿಲ್ಲವಾದರೂ ಈ ವಾರದ ಮಳೆ ಹಿಂದಿನ ವರ್ಷದ ಈ ಮಳೆ, ಈ ವಾರದ ಸಂಕಟವನ್ನು ನೆನಪಿಸಿದೆ. ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳನ್ನು ಸೇರಿ ನೆರೆ ಜಿಲ್ಲೆಗಳ ಸುಮಾರು ಮತ್ತೊಂದು ಡಜನ್ ತಾಲೂಕುಗಳಲ್ಲಿ ಈ ಮಳೆ, ನೆರೆಯ ತೊಂದರೆ ಬಹುತೇಕ ಮಳೆಗಾಲಗಳ ದುಸ್ವಪ್ನವಾಗಿದೆ.

ಮಳೆಯಿಂದ ನೆರೆ ಬರುವುದು, ಪ್ರವಾಹವಾಗುವುದು ಒಂದು ಸಮಸ್ಯೆಯಾದರೆ ಈ ಮಲೆನಾಡು,ಕರಾವಳಿ ಭಾಗದಲ್ಲಿ ಜಲಾಶಯ, ಜಲಾಗಾರಗಳ ಒಳಹರಿವು ಹೆಚ್ಚಾಗಿ ಕೃತಕ ನೆರೆ ಕೂಡಾ ಸಂಭವಿಸುತ್ತದೆ. ಕಡಿಮೆ ಮಳೆಯಾದರೆ ಜಲಾಶಯಗಳು ಭರ್ತಿಯಾಗುವುದಿಲ್ಲ ಆದರೆ ವಿಪರೀತ ಮಳೆಯಲ್ಲಿ ಜಲಾಶಯ, ಜಲಾಗಾರಗಳು ಯಾವಾಗ ತುಂಬುತ್ತವೆ ಎಂದು ನಿರ್ಧರಿಸುವುದು ಕಷ್ಟ. ಹಾಗಾಗಿ ಕೆ.ಪಿ.ಸಿ. ಮತ್ತು ಇತರ ಸಣ್ಣ, ಬೃಹತ್ ನೀರಾವರಿ ಇಲಾಖೆಗಳ ಜವಾಬ್ಧಾರಿಯ ಜಲಾಶಯಗಳು,ಜಲಾಗಾರಗಳು ತುಂಬಿ ಕೃತಕ ನೆರೆ ಸೃಷ್ಟಿಸುತ್ತವೆ. ಇದರಿಂದ ಕರಾವಳಿ ಭಾಗದ ಜನಜೀವನ ಮೂರಾಬಟ್ಟೆಯಾಗುತ್ತದೆ.

ಇಂಥ ಕೃತಕ ಪ್ರವಾಹದ ಬಗ್ಗೆ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಻ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ. ಈ ವಾರದ ಪ್ರವಾಹ ಮತ್ತು ಈ ತಿಂಗಳಲ್ಲಿ ಯಾವ ಗಳಿಗೆಯಲ್ಲೂ ಬರಬಹುದಾದ ಕೃತಕ ಪ್ರವಾಹದ ಬಗ್ಗೆ ಸ್ಥಳಿಯರೂ ಎಚ್ಚೆತ್ತುಕೊಳ್ಳಬೇಕಾದ ಻ಅವಶ್ಯಕತೆಯನ್ನು ಈ ವಿದ್ಯಮಾನ ಎತ್ತಿಹೇಳಿದೆ. ಅಂದಹಾಗೆ ಜಿಲ್ಲೆಯ ಜಲಾಶಯಗಳ ನಿರ್ವಹಣೆಯ ಜವಾಬ್ಧಾರಿಯ ಇಂಜಿನಿಯರ್ಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಈ ಸಕಾಲಿಕ ಎಚ್ಚರಿಕೆ ನೀಡಿದ್ದು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *