a uniqe structure of malnaadu house-ಆರ್.ಆರ್. ಹೆಗಡೆ ಮತ್ತವರ ಐನಕೈ ಭವಂತಿ ಮನೆ

ಸಿದ್ಧಾಪುರದ ಕ್ಯಾದಗಿಯ ಐನಕೈ ಬಹುಪ್ರಸಿದ್ಧ ಗ್ರಾಮ. ಈ ಗ್ರಾಮದ ಅನೇಕರು ಹೊರ ಊರು,ಪರ ರಾಜ್ಯಗಳಿಗೆಲ್ಲಾ ಹೋಗಿ ಶ್ರಮದಿಂದ ಹೆಸರು ಮಾಡಿದ್ದಾರೆ. ಇಂಥ ಐನಕೈನ ವೆಂಕಟರಾಮಯ್ಯ ಎನ್ನುವವರು ಸುಮಾರು ನೂರು ವರ್ಷದ ಕೆಳಗೆ ಆ ಭಾಗದ ಪ್ರಮುಖರು.

ಅವರು ತಮ್ಮ ಬುದ್ಧಿ-ಶ್ರಮ ಬಳಸಿ ಸ್ವಾತಂತ್ರ್ಯಾ ನಂತರ ಸಿದ್ಧಾಪುರ ಮತ್ತು ಕುಮಟಾಗಳನ್ನು ಸಂಪರ್ಕಿಸುವ ಬಿಳಗಿ ಸೇತುವೆ ನಿರ್ಮಾಣಕ್ಕೆ ಕಾರಣವಾದರು. ಈ ಸಮಾಜಮುಖಿ ವೆಂಕಟಸುಬ್ಬಯ್ಯನವರ ಮಗ ರಾಮಪ್ಪ ಹೆಗಡೆ,ಅವರೂ ಜಮೀನ್ಧಾರರಾಗಿ ಅಪ್ಪ. ಮನೆಯ ಹೆಸರು ಉಳಿಸುತ್ತಲೇ ಸಾಮಾಜಿಕ ಕಾರ್ಯಕರ್ತರಾಗಿ ದುಡಿದರು.

ಅವರಿಗೆ ಐದು ಜನ ಗಂಡು ಮಕ್ಕಳು ಇತಿಹಾಸಕಾರ ರಾಜರಾಮ ಹೆಗಡೆ, ಪತ್ರಕರ್ತ ರಂಗಕರ್ಮಿ ರಮಾನಂದ ಹೆಗಡೆ (ಐನಕೈ) ಸೇರಿದ ಻಻ಅನೇಕ ಸಹೋದರರು, ಸಹೋದರಿಯರು, ಸೊಸೆಯಂದಿರು, ಮಕ್ಕಳ ಈ ತುಂಬುಕುಟುಂಬ ಸುಶಿಕ್ಷಿತ ಜನರ ಮನೆ. ಇವರ ಹಳೆಯ ಮನೆ ಭವಂತಿ ಮನೆಯಾಗಿದ್ದು ಮಲೆನಾಡಿನ ಸೋಗೆಮುಚ್ಚಿದ ಬೆಚ್ಚಗಿನ ಮನೆಯಾಗಿದ್ದನ್ನು ನಾವೆಲ್ಲಾ ಕಂಡವರು. ಆನಂತರ ಆರ್.ಆರ್.ಹೆಗಡೆ ಹೊಸಮನೆ ಕಟ್ಟತೊಡಗಿದಾಗ ಭವಂತಿಮನೆಯ ಕಾಲ ಮುಗಿಯಿತು ಎಂದುಕೊಂಡವರೇ ಹೆಚ್ಚು.

ಆದರೆ, ಈಗಿನ ಆಧುನಿಕ ತಂತ್ರಜ್ಞಾನದ ನೂತನ ಗೃಹ ಕೂಡಾ ಹಳೆಯ ಭವಂತಿ ಮನೆಯ ಬಹುತೇಕ ವಿಶೇಶಗಳನ್ನು ಮೇಳೈಸಿಕೊಂಡೇ ನಿರ್ಮಾಣವಾಗಿದೆ. ನಮ್ಮ ಎಂದಿನ ರೂಢಿಯಂತೆ ಐನಕೈ ಮನೆಗೆ ಹೋದಾಗ ಟಿ.ಎಸ್.ಎಸ್. ನಿಂದ ನಿವೃತ್ತರಾದಂತೆ, ಚಿಕ್ಕ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡವರಂತೆ ಓದಿನಲ್ಲಿ ಮುಳುಗಿದ್ದ ಆರ್.ಆರ್. ಹೆಗಡೆವರನ್ನು ಆಕಸ್ಮಿಕ, ಻಻ಅನಿರೀಕ್ಷಿತ ಎನ್ನುವಂತೆ ಮಾತಿಗೆಳೆದವು. ಹಿರಿಯ ಗೆಳೆಯ ಸುರೇಂದ್ರ ದಫೇದಾರ್ ಚಿತ್ತೀಕರಿಸಿದ ಈ ವಿಡಿಯೋ ಐನಕೈ ಮತ್ತು ಅವರ ಮನೆಯನ್ನು ಪರಿಚಯಿಸಬಹುದೆನ್ನುವ ವಿಶ್ವಾಸದಿಂದ ಇಲ್ಲಿ ಜೋಡಿಸಿದ್ದೇವೆ. ಅಂದಹಾಗೆ… ಹಳೆ ನೆನಪು, ವೈಶಿಷ್ಟ್ಯ ಉಳಿಸಿಕೊಂಡ ಐನಕೈ ಭವಂತಿಮನೆಯ ಉಪಮೆಯೊಂದಿಗೆ ಈ ಕುಟುಂಬದ ಸಾಮಾಜಿಕ ಕೆಲಸ, ಕೊಡುಗೆ ಕೂಡಾ ಪುನರ್ ಮನನಕ್ಕೆ ಯೋಗ್ಯ. ಯಾಕೆಂದರೆ ಸರಿಸುಮಾರು ಒಂದು ಶತಮಾನದ ಹಿಂದಿನಿಂದ ಈ ಭಾಗಕ್ಕೆ ಸಂಪರ್ಕ ರಸ್ತೆ, ಸೇತುವೆ, ಆರೋಗ್ಯ ವ್ಯವಸ್ಥೆಗಳ ಹಿಂದಿನ ಕೈ ಈ ಐನಕೈ. ಈ ಕುಟುಂಬಕ್ಕೆ ಆಕಾಲದಲ್ಲಿ ಬಲಗೈ ಯಂತಿದ್ದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *