ಟಿ.ಎಸ್.ಎಸ್. ವಿರುದ್ಧ ಹೆಗ್ಗೋಡಮನೆ ಕುಟುಂಬದ ಆರೋಪ, ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು, ಟಿ.ಎಸ್.ಎಸ್. ನಲ್ಲಿ ಬಾಲ ದೇಹ ಅಲ್ಲಾಡಿಸುವ ಅವ್ಯವಸ್ಥೆ ವಿರುದ್ಧ ಸಮರ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಻಻ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಻ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ ಗುರುತರ ಆರೋಪ ಮಾಡಿರುವ ಸಿದ್ಧಾಪುರ ಹೆಗ್ಗೋಡಮನೆ ಗೌಡರ ಕುಟುಂಬ ಟಿ.ಎಸ್.ಎಸ್. ಸಂಸ್ಥೆ ಸೇವೆಯ ಹೆಸರಲ್ಲಿ ವಾಣಿಜ್ಯದ ಲಾಭದ ವ್ಯವಹಾರದಲ್ಲಿ ತೊಡಗಿದ್ದು ಈ ಲಾಭಬಡುಕತನದಿಂದಾಗಿ ಸದಸ್ಯರಿಗೆ,ಸ್ಥಳಿಯರಿಗೆ ಅನ್ಯಾಯವಾಗುತ್ತಿದೆ ಎಂದು ದೂ ರಿದೆ.

ಇಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಕರೆದ ಮಾಧ್ಯಮಗೋಷ್ಠಿ ಯಲ್ಲಿ ಈ ಆರೋಪ ಮಾಡಿರುವ ಹೆಗ್ಗೋಡಮನೆ ಸಹೋದರರು ಟಿ.ಎಸ್.ಎಸ್. ನಲ್ಲಿ ನಾವು ಹಲವಾರು ವರ್ಷಗಳಿಂದ ಸದಸ್ಯರಾಗಿ ವ್ಯವಹರಿಸುತಿದ್ದೇವೆ. ನಮ್ಮ ವ್ಯಾಪಾರವ್ಯವಹಾರ, ಖರೀದಿ-ಮಾರಾಟಗಳೆಲ್ಲಾ ಟಿ.ಎಸ್.ಎಸ್. ನಲ್ಲೇ ನಡೆಯುತ್ತಿದೆ. ಆದರೆ ನಮಗೆ ಈ ಸಂಸ್ಥೆ ಎಷ್ಟು ಗೌರವ ನೀಡುತ್ತಿದೆ ಎನ್ನುವುದು ಆಗಷ್ಟ್ 18 ರಿಂದ 21 ರ ಻ಅವಧಿಯಲ್ಲಿ ಅರ್ಥವಾಗಿದೆ. ನಮ್ಮ ಸಹೋದರ ಜಯಶೀಲ ಗೌಡ ಈ ಸಂಸ್ಥೆಯ ಬೇಜವಾಬ್ಧಾರಿ, ನಿರ್ಲಕ್ಷದಿಂದಾಗಿ ಮರಣಹೊಂದುವಂತಾಯಿತು. ನಮ್ಮಂಥ ಪರಿಚಿತರು,ಒಡನಾಟದ ವ್ಯಕ್ತಿಗಳಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ ಹೆಗ್ಗೋಡಮನೆ ಸಹೋದರರು. ಅಗತ್ಯವಿದ್ದಾಗ ನಿರ್ಲಕ್ಷ ಮಾಡಿ ನಂತರ ಶವಸಂಸ್ಕಾರದ ವೆಚ್ಚವನ್ನು ಮನೆಗೆ ತಲುಪಿಸುವಾಗಲೂ ಸೌಜನ್ಯ ತೋರಲಿಲ್ಲ ಹಾಗಾಗಿ ಟಿ.ಎಸ್.ಎಸ್. ನೆರವು ಹತ್ತು ಸಾವಿರವನ್ನು ತಿರಸ್ಕರಿಸುವ ಜೊತೆಗೆ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ವಿವರಿಸಿದರು.

ಘಟನೆಯ ವಿವರ- ಹೆಗ್ಗೋಡಮನೆ ಕುಟುಂಬದ ಜಯಶೀಲ ಸದಾಶಿವ ಗೌಡರ್ ಆಗಷ್ಟ್ 18 ರಂದು ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಮಾರ್ಗದರ್ಶನದಂತೆ 19 ರಂದು ಶಿರಸಿಯ ಟಿ.ಎಸ್.ಎಸ್. ಆಸ್ಫತ್ರೆ ಕಡವೆ ವೈದ್ಯಕೀಯ ಸಂಸ್ಥೆಯ ಆಸ್ಫತ್ರೆಗೆ ಹೆಚ್ಚಿನ ಪರೀಕ್ಷೆ, ಚಿಕಿತ್ಸೆಗೆ ರವಾನಿಸುತ್ತಾರೆ. ಅಲ್ಲಿ ಆಸ್ಫತ್ರೆಗೆ ಪ್ರವೇಶ ನೀಡದ ಻ಅಲ್ಲಿಯ ಸಿಬ್ಬಂದಿಗಳು ಆಸ್ಫತ್ರೆಯ ಹೊರಗೆ ರೋಗಿಯನ್ನು ಕಾಯಿಸುತ್ತಾರೆ. ನಂತರ ಹುಬ್ಬಳ್ಳಿ ಕೆ.ಎಂ.ಸಿ. ಯಲ್ಲಿ ಅವಶ್ಯ ಚಿಕಿತ್ಸೆ ಪಡೆಯುವ ಮೊದಲು ವಿಳಂಬವಾಗಿ ಜಯಶೀಲ ಗೌಡರ್ ಆಗಷ್ಟ್ 22 ರಂದು ಮರಣ ಹೊಂದುತ್ತಾರೆ.

ಮಾಧ್ಯಮಗೋಷ್ಥಿಯ ಪ್ರಮುಖ ಻ಅಂಶಗಳು- ನಾವೆಲ್ಲಾ ಟಿ.ಎಸ್.ಎಸ್. ನ ಸದಸ್ಯರು ಆದರೆ ನಮ್ಮಂಥ ಻಻ಅನೇಕ ಸದಸ್ಯರ ಹಣದಿಂದ ಸ್ಥಾಪನೆಯಾಗಿ ನಡೆಯುತ್ತಿರುವ ಟಿ.ಎಸ್.ಎಸ್. ಆಸ್ಫತ್ರೆಯಲ್ಲಿ ನಮಗೆ ಅವಕಾಶ, ವ್ಯವಸ್ಥೆ ಸಿಗದಿದ್ದರೆ ಸಾಮಾನ್ಯರ ಪಾಡೇನು? ಈಗಾಗಲೇ ಅವರ ಻ಅಂತ್ಯಸಂಸ್ಕಾರದ ಹಣವನ್ನು ತಿರಸ್ಕರಿಸಿ ಆಸ್ಫತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ.ಸಿದ್ಧಾಪುರದಲ್ಲಿ ಲೋಕೇಶ್ ಡಾಕ್ಟರ್ ಬಿಟ್ಟರೆ ಸರ್ಕಾರಿ ಆಸ್ಫತ್ರೆಯಲ್ಲಿ ವ್ಯವಸ್ಥೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ಆಪತ್ಕಾಲದಲ್ಲಿ ನಮ್ಮ ಸಂಸ್ಥೆಯ ಟಿ.ಎಸ್.ಎಸ್. ಆಸ್ಫತ್ರೆ ಇದೆ ಎಂದು ತೆರಳಿದರೆ, ಅಲ್ಲಿ ನಮಗೆ ಪ್ರವೇಶವೇ ಇಲ್ಲ, ಹುಬ್ಬಳ್ಳಿ ಕೆ.ಎಂ.ಸಿ. ಅವ್ಯವಸ್ಥೆಯ ಕೊಂಪೆ ಇಂಥ ಻ಅವ್ಯವಸ್ಥೆ, ತೊಂದರೆಗಳನ್ನು ಕೇಳಲು ಸರ್ಕಾರ, ಜನಪ್ರತಿನಿಧಿಗಳಿಲ್ಲವೆ? ಹೀಗಾದರೆ ಜನಸಾಮಾನ್ಯರ ಪಾಡೇನು? ಇದಕ್ಕೆ ನ್ಯಾಯ ದೊರಕಿಸುವವರ್ಯಾರು? -ಸಿ.ಎಸ್. ಗೌಡರ್,ನಿವೃತ್ತ ನೌಕರರ ಸಂಘದ ಻಻ಅಧ್ಯಕ್ಷ

ಸಿದ್ಧಾಪುರದಲ್ಲಿ ಸರ್ಕಾರಿ, ಖಾಸಗಿ ಆಸ್ಫತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಿಗಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬಾರದ ಇಲ್ಲಿಯ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು -ಪರಮೇಶ್ವರಯ್ಯ ಕಾನಳ್ಳಿ ಮಠ, ಻ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಿದ್ಧಾಪುರ.

ನಮಗೆ ಟಿ.ಎಸ್.ಎಸ್. ಅಥವಾ ಮತ್ತ್ಯಾರ ನೆರವಿನ ಻಻ಅಗತ್ಯವಿಲ್ಲ. ನಮ್ಮ ಕುಟುಂಬಕ್ಕಾದ ಻಻ಅನ್ಯಾಯ ಮತ್ಯಾವ ಕುಟುಂಬಕ್ಕೂ ಆಗಬಾರದು. ಸಾಯುವವರನ್ನು ಉಳಿಸುವ ನಮ್ಮ ಕುಟುಂಬಕ್ಕೆ ನಮ್ಮವರನ್ನೇ ಉಳಿಸಿಕೊಳ್ಳದ ಻ಅನಿವಾರ್ಯತೆಗೆ ಸಿಕ್ಕಿಸಿದ್ದು ಇಲ್ಲಿಯ ವೈದ್ಯಕೀಯ ಻ಅವ್ಯವಸ್ಥೆ, ಟಿ.ಎಸ್.ಎಸ್. ನ ಬೇಜವಾಬ್ಧಾರಿ. ಹಣ, ಖಾತೆಗೆ ಟಿ.ಎಸ್.ಎಸ್. ಸೇವೆ, ಅನಿವಾರ್ಯತೆಗೆ ಕಡವೆ ಸಂಸ್ಥೆಗೂ ಟಿ.ಎಸ್.ಎಸ್. ಗೂ ಸಂಬಂಧವಿಲ್ಲ ಎಂದರೆ…. ನಮಗಾದ ನೋವು ಇತರ ಸದಸ್ಯರಿಗೆ ಆಗಬಾರದು. ಈ ಬಗ್ಗೆ ಇತರ ಸದಸ್ಯರೂ ಎಚ್ಚೆತ್ತುಕೊಳ್ಳಬೇಕು. – ಸುಧೀರ್ ಗೌಡರ್, ತಾ.ಪಂ. ಅಧ್ಯಕ್ಷ ಸಿದ್ಧಾಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *