ಈಡೂರು ಪರಶುರಾಮಪ್ಪ ನೆನಪು

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಈಡೂರಿನ ಪರಶುರಾಮಪ್ಪ ಜಮೀನ್ಧಾರರಾಗಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರೂ ಅವರ ಸಾಮಾಜಿ ಕ, ಧಾರ್ಮಿಕ ಸೇವೆಗಳು ನಾಡಿನಾದ್ಯಂತ ವಿಸ್ತರಿಸಿದ್ದವು. ಉತ್ತರ ಕನ್ನಡ ಜಿಲ್ಲೆ ಗುಡ್ನಾಪುರದ ಬಂಗಾರೇಶ್ವರ ಟ್ರಸ್ಟ್ ಅಧ್ಯಕ್ಷರಾಗಿ, ಅಂಡಗಿ ಮಠದ ಸಕ್ರೀಯ ಕಾರ್ಯಕರ್ತರೂ ಪ್ರಮುಖರಾಗಿ ಸೊರಬ ಮತ್ತು ಶಿರಸಿ ತಾಲೂಕಿಗೆ ಸೇತುವೆಯಂತಿದ್ದ ಪರಶುರಾಮಪ್ಪ ಅಜಾನುಭಾವು ಆಗಿದ್ದಂತೆ ಹೃದಯವೈಶಾಲ್ಯತೆ ಉಳ್ಳವರಾಗಿದ್ದರು.

ಸಾಮಾಜಿಕ,ಧಾರ್ಮಿಕ,ರಾಜಕೀಯ ಸೇರಿದಂತೆ ಸಮಾಜದ ಆಗುಹೋಗುಗಳೊಂದಿಗೆ ಬೆರೆತಿರುತಿದ್ದ ಅವರು ಪ್ರಗತಿಪರ ಕೃಷಿಕರಾಗಿ ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮೊದಲು ರಾಜಕೀಯವಾಗಿ ಚುರುಕಾಗಿದ್ದವರು. ಬಂಗಾರಪ್ಪ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಮುಖಂಡರು, ನಾಯಕರೊಂದಿಗೆ ಸ್ನೇಹ, ಸಮರ, ಪ್ರೀತಿ- ಹೋರಾಟಗಳ ಬಹುಮುಖಿ ಚಟುವಟಿಕೆಯಲ್ಲಿದ್ದ ಪರಶುರಾಮಪ್ಪನವರಿಗೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ನೇತೃತ್ವಕ್ಕಿಂತ ಧಾರ್ಮಿಕ ನೇತೃತ್ವವೇ ಖಾಯಂ ಎನ್ನುವಂತಾಗಿತ್ತು.

ಮಂಗಳೂರಿನ ಗೋಕರ್ಣನಾಥೇಶ್ವರ, ಬನವಾಸಿ, ಗುಡ್ನಾಪುರಗಳ ಧಾರ್ಮಿಕ, ಚಾರಿತ್ರಿಕ ಚಟುವಟಿಕೆ, ಸಂಘ ಸಂಸ್ಥೆಗಳ ನೇತೃತ್ವ ಹೀಗೆ ಪರಶುರಾಮಪ್ಪ ದೀವರ ಸಮೂದಾಯ, ಜನತಾಪರಿವಾರ, ಪ್ರಗತಿಪರ ಚಟುವಟಿಕೆಗಳ ಒಕ್ಕೂಟ ಎಲ್ಲೆಂದರೆ ಎಲ್ಲೆಲ್ಲೂ ಸಲ್ಲುವ ಪರಶುರಾಮಪ್ಪ ನಿಷ್ಠೂರತೆಗೂ ಹೆಸರಾಗಿದ್ದರು. ಹೊಸಜನಾಂಗ, ಶಿಕ್ಷಿತರು, ಬಡವರು, ಬಲ್ಲಿದರೆನ್ನದೆ ಎಲ್ಲರನ್ನೂ ಪ್ರೀತಿಸುತಿದ್ದ ಜನಪರ ಸಮಾಜಮುಖಿ ವ್ಯಕ್ತಿತ್ವದ ಈಡೂರು ಪರಶುರಾಮಪ್ಪ ಈ ವಾರ ನಿಧನರಾಗುತಿದ್ದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದ ರಾಜ್ಯದ ಅನೇಕ ಜಿಲ್ಲೆಗಳು, ರಾಜಧಾನಿ ಸೇರಿದಂತೆ ನಾಡಿನಾದ್ಯಂತ ಶ್ರದ್ಧಾಂಜಲಿಯ ಸಂದೇಶಗಳು ಬಂದಿವೆ.

ಜನಮುಖಿಯಾಗಿದ್ದ ಪರಶುರಾಮಪ್ಪ ಸ್ಫಂದನಶೀಲತೆಯಿಂದಾಗಿ ಹೆಸರು ಮಾಡಿ ಸಾಮಾಜಿಕ ಸೇವೆ-ಹೋರಾಟ, ಬದ್ಧತೆಗಳಿಂದ ಪ್ರಸಿದ್ಧರಾಗಿದ್ದರು. ಶರಣರ ಘನತೆ ಮರಣದಲ್ಲಿ ಕಾಣು ಎನ್ನುವಂತೆ ಪರಶುರಾಮಪ್ಪ ನಿಜ ಶರಣರಾಗಿ ನಿಧನರಾಗುವ ಮೂಲಕ ಅವರ ಪ್ರಸ್ತುತತೆ, ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *