ರವೀಂದ್ರ, ವಿ.ಎನ್. ನಾ., ಕೆ.ಜಿ. ನಾ.? ಹೊಸಬಾಳೆ, ದೊಡ್ಡೂರು ಯಾರಾಗ್ತಾರೆ ಡಿ.ಸಿ.ಸಿ. ಅಧ್ಯಕ್ಷ?

ಕಾಂಗ್ರೆಸ್ ನಲ್ಲಿ ಬಣಗಳ ಮೇಲಾಟ, ಬಿ.ಜೆ.ಪಿ.ಯಲ್ಲಿ ಹಿಂದುತ್ವವಾದಿಗಳ ಜಾತಿ ಪ್ರೇಮ, ಪ್ರಾಮಾಣಿಕ ಕಾರ್ಯಕರ್ತರ ಉಪೇಕ್ಷೆ ಗಳು ಸುದ್ದಿಮಾಡುತ್ತಿರುವಂತೆ ಜನತಾದಳದಲ್ಲಿ ಪಕ್ಷದ ಅಳಿವು ಉಳಿವಿನ ವಿಚಾರ ಈಗ ಚರ್ಚೆಯ ವಿಷಯಗಳಾಗಿವೆ.

ಶಿರಸಿಯಲ್ಲಿ ಬಿ.ಜೆ.ಪಿ ಯೊಂದಿಗೆ ರಾತ್ರಿ ಸ್ನೇಹ ಇಟ್ಟುಕೊಂಡಿದ್ದ ಕೆಲವು ವಲಸಿಗರು ಈಗ ತಮ್ಮ ನಾಯಕಿಯೊಬ್ಬರನ್ನು ಕರೆತರುವ ಮೂಲಕ ಬಿ.ಜೆ.ಪಿಗೆ ನೆರವಾಗಲು ಟೊಂಕಕಟ್ಟಿ ನಿಂತಿದ್ದಾರೆ ಎನ್ನುವ ವಿದ್ಯಮಾನ ಚರ್ಚೆಯಾಗುತ್ತಿರುವಂತೆ ವಲಸೆ ಅಭ್ಯರ್ಥಿಗಳ ಆಗಮನದ ಸುದ್ದಿ ತಿಳಿದ ಕೆಲವು ಕಾಂಗ್ರೆಸ್ ಮುಖಂಡರು ಬಿ.ಜೆ.ಪಿ. ಸೇರಲಿದ್ದಾರೆ ಎನ್ನುವ ಗಾಳಿಸುದ್ದಿ ಹಾರಾಡುತ್ತಿದೆ. ಈ ಬಹಿರಂಗ ವಿದ್ಯಮಾನಗಳ ನಡುವೆ ಮತ್ತೊಂದು ಪ್ರಮುಖ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ.

ಅದೆಂದರೆ…… ಅದೂ ಕೂಡಾ ಕಾಂಗ್ರೆಸ್ ವಿಚಾರವೇ. ನಿರೀಕ್ಷೆಯಂತೆ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ತಮ್ಮ ಮೂರು ಅವಧಿಯ ನಿರಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಯ ಕುರ್ಚಿ ಬಿಡುತಿದ್ದಾರೆ. ಭೀಮಣ್ಣ ಅವಧಿ ಮುಕ್ತಾಯದನಂತರ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ವಿಚಾರ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ರವೀಂದ್ರ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ್ ದೊಡ್ಡೂರು, ವಿ,ಎನ್. ನಾಯ್ಕ, ಕೆ.ಜಿ. ನಾಗರಾಜ್ ಇವರಲ್ಲಿ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ.

ಸಿದ್ಧಾಪುರದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ,ಇನ್ನೊಬ್ಬ ಜಿ.ಪಂ ಮಾಜಿ ಸದಸ್ಯ ವೆಂಕಟೇಶ್ ಹೆಗಡೆ ಹೊಸಬಾಳೆ ಶಿರಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಪ್ರಯತ್ನಿಸುತಿದ್ದು ವಿ.ಎನ್. ನಾಯ್ಕ ಕೆ.ಪಿ.ಸಿ.ಸಿ. ಶಿರಸಿ ಉಸ್ತುವಾರಿ ಸುಷ್ಮಾ ರೆಡ್ಡಿಯವರ ಅಭ್ಯರ್ಥಿಯಾಗಿದ್ದರೆ, ವೆಂಕಟೇಶ್ ಹೆಗಡೆ ಕಾಂಗ್ರೆಸ್ ರಾಜ್ಯಮುಖಂಡರ ಸಂಪರ್ಕದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರೊಬ್ಬರ ಅಭ್ಯರ್ಥಿ ಎನ್ನಲಾಗುತ್ತಿದೆ.!

ಶಿರಸಿಯ ದೀಪಕ್ ದೊಡ್ಡೂರು,ಸಿದ್ಧಾಪುರದ ಮಾಜಿ ಬ್ಲಾಕ್ ಅಧ್ಯಕ್ಷ ಕೆ.ಜಿ. ನಾಗರಾಜ್ ದೇಶಪಾಂಡೆಯವರ ಅಭ್ಯರ್ಥಿಗಳಾಗಿದ್ದು ಇವರಿಗೆ ಈಗಿನ ಅಧ್ಯಕ್ಷರ ಭೀಮಬಲದ ಅಭಯವಿದೆ ಎನ್ನಲಾಗುತ್ತಿದೆ.

ಈ ಹೆಸರುಗಳ ಮಧ್ಯೆ ತೇಲಿಬರುತ್ತಿರುವ ಇನ್ನೊಂದು ಹೆಸರು ಎ. ರವೀಂದ್ರ ಯಾನೆ ರವೀಂದ್ರನಾಥ್ ನಾಯ್ಕ ಈ ಬಣಗಳ ಬೆಂಬಲವಿಲ್ಲದೆ ನೇರವಾಗಿ ರಾಜ್ಯ ಮುಖಂಡರ ಅಭಯದಿಂದ ಡಿ.ಸಿ.ಸಿ. ಅಧ್ಯಕ್ಷರಾಗುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಬಿ.ಕೆ. ಹರಿಪ್ರಸಾದ್, ಕಾಗೋಡು ತಿಮ್ಮಪ್ಪ ಸೇರಿದಂತೆ ಕೆಲವು ಪ್ರಮುಖ ನಾಯಕರು ರವೀಂದ್ರರ ಬೆನ್ನಿಗೆ ನಿಂತಿದ್ದು ಉತ್ತರ ಕನ್ನಡ ಜಿಲ್ಲೆಯ ಜಮೀನ್ಧಾರಿ ರಾಜಕಾರಣ ಮತ್ತು ಚುನಾವಣೆ ವೇಳೆಯ ವಲಸೆ ರಾಜಕಾರಣಕ್ಕೆ ವಿರುದ್ಧವಾಗಿ ಅವಿರತ ಹೋರಾಟಗಾರ, ಜನಪರ ಚಿಂತನೆಗಳ ರವೀಂದ್ರ ನಾಯ್ಕ ರೆಡ್ಡಿ ಮತ್ತು ದೇಶಪಾಂಡೆ ಗಳ ಹಣದ ರಾಜಕೀಯಕ್ಕೆ ವಿರುದ್ಧವಾಗಿ ಗುಣದ ರಾಜಕೀಯದ ಮೂಲಕ ಸೊರಗಿರುವ ಡಿ.ಸಿ.ಸಿ. ಗೆ ಜೀವತುಂಬುವ ಜವಾಬ್ಧಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *