ನಾಳೆ ಗಾಂಧಿ ಜಯಂತಿ- ನಿಮ್ಮೂರಲ್ಲಿದೆಯಾ ಗಾಂಧಿ ಪ್ರತಿಮೆ, ಗಾಂಧಿ ವೃತ್ತ?

ಶಾಂತಿದೂತ ಗಾಂಧಿ ಜಗತ್ತಿನ ಬೆಳಕು. ಗಾಂಧಿ ಪರಿಚಯಿಸಿ,ಪ್ರತಿಪಾದಿಸಿದ ಸತ್ಯ, ಅಹಿಂಸೆ ಎಂದೆಂದೂ ಪ್ರಸ್ತುತ. ಗಾಂಧಿ ನೆನಪು, ಚಿತ್ರದೊಂದಿಗೆ ಸ್ಮರಣೆಗೆ ಬರುವ ಅವರ ಚಿತ್ರ ಸತ್ಯ, ಶಾಂತಿ,ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಈ ಕಾರಣ, ಮಹತ್ವದ ಕಾರಣಗಳಿಗಾಗಿ ಗಾಂಧೀಜಿಯವರ ವೃತ್ತ- ಮೂರ್ತಿ ಎಲ್ಲೆಡೆ ಕಾಣುವ ಉಪಮೆ.

ಹೊರದೇಶ, ದೇಶ, ರಾಜ್ಯ,ಜಿಲ್ಲೆ, ತಾಲೂಕು,ಗ್ರಾ.ಪಂ. ಮಟ್ಟದ ವರೆಗೆ ಕಾಣುವ ಗಾಂಧಿ ಚಿತ್ರ, ಮೂರ್ತಿ, ವೃತ್ತ ಸಿದ್ಧಾಪುರದಲ್ಲೆಲ್ಲೂ ಕಾಣದಿರುವುದು ಈಗ ಚರ್ಚೆಯ ವಿಷಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗಾಂಧೀಜಿಯವರ ನೆನಪಿಗಾಗಿ ಕಾರವಾರದ ಗಾಂಧಿಮಾರ್ಗದಲ್ಲಿ, ನಗರದ ವೃತ್ತವೊಂದರಲ್ಲಿ ಗಾಂಧೀಜಿ ಮೂರ್ತಿ ಸ್ಥಾಪಿಸಲಾಗಿದೆ.

1936 ರಲ್ಲಿ ಜಿಲ್ಲೆಗೆ ಬಂದಿದ್ದ ಮಹಾತ್ಮಗಾಂಧೀಜಿಯವರ ಅಹಿಂಸೆ ಪ್ರತಿಪಾದನೆಯ ಶಿರಸಿ ಮಾರಿಕಾಂಬಾ ದೇವಾಲಯದ ಭೇಟಿ, ಅಲ್ಲಿಯ ಕೋಣನ ಬಲಿಗೆ ವಿರೋಧ ವ್ಯಕ್ತಪಡಿಸಿ ಪ್ರಾಣಿವಧೆ ನಿಲ್ಲಿಸಿದ ಮಹಾತ್ಮ ಈಗಲೂ ಶಿರಸಿ ಗಾಡಿಬಿಡ್ಕಿಯಲ್ಲಿ ಅಜರಾಮರ.

ಇದೇ ಮಹಾತ್ಮ ಅಸ್ಪೃಶ್ಯತೆ,ಬಾಲವಿದವೆಯರ ಕೇಶಮಂಡನ ಆಚರಣೆ ವಿರೋಧಿಸಿ ಸಿದ್ಧಾಪುರಕ್ಕೆ ಭೇಟಿ ನೀಡಿದ್ದರು ಎಂದು ಚಾರಿತ್ರಿಕ ದಾಖಲೆಗಳು ಸ್ಫಷ್ಟಪಡಿಸುತ್ತವೆ. ಆದರೆ ಈ ನೆನಪಿಗೆ ಸಿದ್ಧಾಪುರದಲ್ಲಿ ಗಾಂಧಿ ಪ್ರತಿಮೆಯಾಗಲಿ, ಗಾಂಧಿ ವೃತ್ತವಾಗಲಿ ಇಲ್ಲ. ಸಿದ್ಧಾಪುರ ಅಶೋಕ ರಸ್ತೆಯ ಮನೆಯೊಂದಕ್ಕೆ ಮಹಾತ್ಮಗಾಂಧಿ ಭೇಟಿ ನೀಡಿ ಅಲ್ಲಿ ಮಹಾದೇವಿ ತಾಯಿ ಯವರನ್ನು ಭೇಟಿ ಮಾಡಿದ್ದ ಗಾಂಧೀಜಿ ನೆನಪಿಗೆ ರಾಧಾಕೃಷ್ಣ ಹೆಗಡೆ ತಮ್ಮ ಮನೆಯನ್ನು ಹಿಂದಿನಂತೆಯೇ ಉಳಿಸಿಕೊಂಡಿದ್ದಾರೆ. ಅವರೇ ಹೇಳುವ ಪ್ರಕಾರ ಬಹುಹಿಂದೆ ಅವರ ಮನೆಗೆ ಬರುತಿದ್ದ ಪತ್ರಗಳೆಲ್ಲಾ ಗಾಂಧಿವೃತ್ತ ಎನ್ನುವ ವಿಳಾಸದಿಂದ ಬರುತಿದ್ದವಂತೆ ಆದರೆ ಈಗ ಗಾಂಧಿ ನೆನಪಿಸುವವರೇ ಇಲ್ಲ.

ಕೆಲವು ವರ್ಷಗಳ ಕೆಳಗೆ ಇಲ್ಲಿಯ ನಿವೃತ್ತ ನೌಕರರು ಸಿದ್ಧಾಪುರದ ಈಗಿನ ಪಟ್ಟಣ ಪಂಚಾಯತ್ ವೃತ್ತಕ್ಕೆ ಗಾಂಧಿವೃತ್ತ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದರು. ಈ ಬಗ್ಗೆ ಪ.ಪಂ. ಗೆ ಮನವಿಯೊಂದನ್ನೂ ನೀಡಿದ್ದರು. ಆದರೆ ಈ ಬೇಡಿಕೆ ಈವರೆಗೆ ಈಡೇರಿಲ್ಲ. ಸಿದ್ಧಾಪುರದಲ್ಲಿ ಗಾಂಧಿ ವೃತ್ತ, ಗಾಂಧಿ ಪ್ರತಿಮೆಗಳಿಲ್ಲದ ಬಗ್ಗೆ ವಿಷಾದಿಸಿರುವ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮತ್ತು ಕಾರ್ಮಿಕ ಮುಖಂಡೆ ಯುಮುನಾ ಗಾಂವ್ಕರ್ ಜನಾಭಿಪ್ರಾಯ, ಗಾಂಧಿ ಮಹತ್ವಕ್ಕೆ ಮನ್ನಣೆ ನೀಡಿ ಅವರ ಹೆಸರಿನ ವೃತ್ತ, ಪ್ರತಿಮೆ ನಿರ್ಮಾಣಮಾಡಬೇಕು ಎಂದು ಸ್ಥಳಿಯ ಆಡಳಿತವನ್ನು ಆಗ್ರಹಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *