ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿರುವ ಗುಡುಂಕಲ್ ಜಲಪಾತ

ಕರೋನಾ, ಅಕಾಲಿಕ ಮಳೆಗಳಿಲ್ಲದಿದ್ದರೆ… ಈ ಅವಧಿಯಲ್ಲಿ ಜಲಪಾತ ನೋಡಿ, ದಣಿದು ಬಸವಳಿಯುವುದಿದೆಯಲ್ಲಾ… ಅದರ ಅನುಭವಕ್ಕೆ ಅದೇ ಸಾಟಿ. ನಮ್ಮ ಜಿಲ್ಲೆಯ ಜಲಪಾತಗಳನ್ನು ಅಲೆದು ಅನುಭವ ಪೇರಿಸಿಕೊಂಡ ಹೊರಗಿನವರಿಗೆ ಹೋಲಿಸಿಕೊಂಡರೆ ನಮಗೆ ಈ ಪ್ರಕೃತಿಯ ಸೊಬಗಿನ ಬಗ್ಗೆ ಮರುಕವೋ? ವಿಸ್ಮೃತಿಯೋ ತಿಳಿಯದ ಗೊಂದಲ.

ಮೊನ್ನೆ ಕೃಷಿ ಅಧಿಕಾರಿ ಪ್ರಶಾಂತ್ ಮಾಹಿತಿ ಆಧರಿಸಿ ಹಂದಿಮನೆಯ ಹೊಳೆಯ ಚಿಕ್ಕ ಜಲಪಾತ ನೋಡಿದಾಗ ಅದೇನೋ ಅಲ್ಹಾದ ಉಂಟಾದಂತಾಯಿತು. ಅಲ್ಲಿ ನಮಗೆ ಸಿಕ್ಕ ಸ್ಥಳಿಯರು ಕಾಣಿಸಿದ ಈ ಗುಡುಂಕಲ್ ಜಲಪಾತಕ್ಯಾದಗಿಯಿಂದ ಕುಮಟಾ ಮಾರ್ಗದಲ್ಲಿ 2 ಕಿ.ಮೀ. ನಂತರ ಹಂದಿಮನೆಯ ಹೊಳೆ ಸೃಷ್ಟಿಸಿರುವ ಸೊಬಗು. ರೈತರು ಈ ಹೊಳೆ ಕಟ್ಟಿ ಒಡ್ಡು ಮಾಡುವ ಸಂಕ್ರಾಂತಿಯ ಮೊದಲು ಕುಟುಂಬ ಸಹಿತ ಹೋಗಿ ನೋಡಿಬರಬಹುದಾದ ಹಂದಿಮನೆ, ಗುಡುಂಕಲ್ ಜಲಪಾತದ ವಿಶೇಷವೆಂದರೆ… ಶ್ರಮವೂ ಬೇಡ, ಅಪಾಯವೂ ಇಲ್ಲ. ಇಂಥ ಜಲಪಾತವನ್ನು ಆ ಭಾಗದ ಎಸ್,ಆರ್. ನಾಯ್ಕ, ಕೆ.ಟಿ. ನಾಯ್ಕರಂಥವರು ಸರ್ವ ಋತು ಜಲಪಾತವನ್ನಾಗಿಸಬಹುದಿತ್ತೇನೋ?ಒಂದು ಬ್ಯಾರೇಜ್ ಮಾದರಿಯ ನೀರು ಸಂಗ್ರಹದ ಚಿಕ್ಕ ಆಣೆಕಟ್ಟೆಮಾಡಿ, ಮಳೆಗಾಲದಲ್ಲಿ ನೀರು ಹರಿಯಬಿಟ್ಟು ಮಳೆಯ ನಂತರ ನೀರು ಸಂಗ್ರಹಿಸಿದರೆ ಜಲಪಾತದ ಸೊಬಗು ವೃದ್ಧಿಸುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಇದರಿಂದ ಅನುಕೂಲಗಳಾಗಬಹುದು.

ಇದು ಒಂದು ಸಲಹೆಯಾದರೆ ಈಗಿರುವ ಸ್ಥಿತಿಯಲ್ಲೇ ಈ ಜಲಪಾತಕ್ಕೆ ಸಣ್ಣ ರಸ್ತೆ, ಒಂದು ನಾಮಫಲಕ ಇಟ್ಟು ಮಕ್ಕಳಿಗೆ ಜಲಪಾತ ಭೇಟಿ, ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳು ಖುಷಿಪಡುತ್ತಾರೆ. ಈ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರಿಸಿದ್ದೇನೆ. ಇದೇ ಪಂಚಾಯತ್ ನ ಬುರುಡೆ ಜಲಪಾತದ ತಲೆ-ಬುಡ, ಬುರುಡೆ ಕಾಣದಂತೆ ಪ್ರವಾಸೋದ್ಯಮ ಇಲಾಖೆ ಬುರುಡೆ ಜಲಪಾತದ ಮುಖ ಕಟ್ಟಿದೆ. ಈ ಜಲಪಾತದಲ್ಲಿ ಸಾವು-ನೋವುಗಳಾಗದಂತೆ ತಡೆಯಲು ಅವಶ್ಯ ಕೆಲಸ ಮಾಡುವುದನ್ನು ಬಿಟ್ಟು ಅಪೂರ್ಣ ಮೆಟ್ಟಿಲು ಮಾಡಿ ವೀಕ್ಷಣೆಗೆ ನಿರ್ಬಂಧ ಹೇರಿರುವ ಜಲಪಾತವನ್ನು ನೋಡಲು ಬರುವವರಿಗೆ ನಿರಾಸೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನಮ್ಮ ನಾಡಿನ ಸೊಬಗನ್ನು ಹೊರಗಿನವರಿಗೆ ಪರಿಚಯಿಸಲು ಶ್ರಮಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಂದಿಗೆ ಸ್ಥಳಿಯರೂ ಬೇಸರಿಸಿದರು. ಸಿದ್ಧಾಪುರ, ಉತ್ತರ ಕನ್ನಡದ ಕಾಡು-ಜಲ ಗಳ ಸೊಬಗನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಬೇಕಾದ ನಾಯಕತ್ವ ಈ ಜಿಲ್ಲೆಗೆ ಶಾಪ ಎಂದೆನಿಸದೇ ಇರಲಿಲ್ಲ. ಈ ಗುಡುಂಕಲ್ ಮಕ್ಕಳ ಜಲಪಾತ, ಚಾರಿತ್ರಿಕ,ಪರಿಸರ ಮಹತ್ವದ ವಿಶ್ವವಿಖ್ಯಾತ ಬುರುಡೆ ಜಲಪಾತ ಸ್ಥಳಿಯರೊಂದಿಗೆ,ಪ್ರವಾಸಿಗರಿಗೂ ಹತ್ತಿರವಾಗಬೇಕಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *