ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿರುವ ಗುಡುಂಕಲ್ ಜಲಪಾತ

ಕರೋನಾ, ಅಕಾಲಿಕ ಮಳೆಗಳಿಲ್ಲದಿದ್ದರೆ… ಈ ಅವಧಿಯಲ್ಲಿ ಜಲಪಾತ ನೋಡಿ, ದಣಿದು ಬಸವಳಿಯುವುದಿದೆಯಲ್ಲಾ… ಅದರ ಅನುಭವಕ್ಕೆ ಅದೇ ಸಾಟಿ. ನಮ್ಮ ಜಿಲ್ಲೆಯ ಜಲಪಾತಗಳನ್ನು ಅಲೆದು ಅನುಭವ ಪೇರಿಸಿಕೊಂಡ ಹೊರಗಿನವರಿಗೆ ಹೋಲಿಸಿಕೊಂಡರೆ ನಮಗೆ ಈ ಪ್ರಕೃತಿಯ ಸೊಬಗಿನ ಬಗ್ಗೆ ಮರುಕವೋ? ವಿಸ್ಮೃತಿಯೋ ತಿಳಿಯದ ಗೊಂದಲ.

ಮೊನ್ನೆ ಕೃಷಿ ಅಧಿಕಾರಿ ಪ್ರಶಾಂತ್ ಮಾಹಿತಿ ಆಧರಿಸಿ ಹಂದಿಮನೆಯ ಹೊಳೆಯ ಚಿಕ್ಕ ಜಲಪಾತ ನೋಡಿದಾಗ ಅದೇನೋ ಅಲ್ಹಾದ ಉಂಟಾದಂತಾಯಿತು. ಅಲ್ಲಿ ನಮಗೆ ಸಿಕ್ಕ ಸ್ಥಳಿಯರು ಕಾಣಿಸಿದ ಈ ಗುಡುಂಕಲ್ ಜಲಪಾತಕ್ಯಾದಗಿಯಿಂದ ಕುಮಟಾ ಮಾರ್ಗದಲ್ಲಿ 2 ಕಿ.ಮೀ. ನಂತರ ಹಂದಿಮನೆಯ ಹೊಳೆ ಸೃಷ್ಟಿಸಿರುವ ಸೊಬಗು. ರೈತರು ಈ ಹೊಳೆ ಕಟ್ಟಿ ಒಡ್ಡು ಮಾಡುವ ಸಂಕ್ರಾಂತಿಯ ಮೊದಲು ಕುಟುಂಬ ಸಹಿತ ಹೋಗಿ ನೋಡಿಬರಬಹುದಾದ ಹಂದಿಮನೆ, ಗುಡುಂಕಲ್ ಜಲಪಾತದ ವಿಶೇಷವೆಂದರೆ… ಶ್ರಮವೂ ಬೇಡ, ಅಪಾಯವೂ ಇಲ್ಲ. ಇಂಥ ಜಲಪಾತವನ್ನು ಆ ಭಾಗದ ಎಸ್,ಆರ್. ನಾಯ್ಕ, ಕೆ.ಟಿ. ನಾಯ್ಕರಂಥವರು ಸರ್ವ ಋತು ಜಲಪಾತವನ್ನಾಗಿಸಬಹುದಿತ್ತೇನೋ?ಒಂದು ಬ್ಯಾರೇಜ್ ಮಾದರಿಯ ನೀರು ಸಂಗ್ರಹದ ಚಿಕ್ಕ ಆಣೆಕಟ್ಟೆಮಾಡಿ, ಮಳೆಗಾಲದಲ್ಲಿ ನೀರು ಹರಿಯಬಿಟ್ಟು ಮಳೆಯ ನಂತರ ನೀರು ಸಂಗ್ರಹಿಸಿದರೆ ಜಲಪಾತದ ಸೊಬಗು ವೃದ್ಧಿಸುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಇದರಿಂದ ಅನುಕೂಲಗಳಾಗಬಹುದು.

ಇದು ಒಂದು ಸಲಹೆಯಾದರೆ ಈಗಿರುವ ಸ್ಥಿತಿಯಲ್ಲೇ ಈ ಜಲಪಾತಕ್ಕೆ ಸಣ್ಣ ರಸ್ತೆ, ಒಂದು ನಾಮಫಲಕ ಇಟ್ಟು ಮಕ್ಕಳಿಗೆ ಜಲಪಾತ ಭೇಟಿ, ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳು ಖುಷಿಪಡುತ್ತಾರೆ. ಈ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರಿಸಿದ್ದೇನೆ. ಇದೇ ಪಂಚಾಯತ್ ನ ಬುರುಡೆ ಜಲಪಾತದ ತಲೆ-ಬುಡ, ಬುರುಡೆ ಕಾಣದಂತೆ ಪ್ರವಾಸೋದ್ಯಮ ಇಲಾಖೆ ಬುರುಡೆ ಜಲಪಾತದ ಮುಖ ಕಟ್ಟಿದೆ. ಈ ಜಲಪಾತದಲ್ಲಿ ಸಾವು-ನೋವುಗಳಾಗದಂತೆ ತಡೆಯಲು ಅವಶ್ಯ ಕೆಲಸ ಮಾಡುವುದನ್ನು ಬಿಟ್ಟು ಅಪೂರ್ಣ ಮೆಟ್ಟಿಲು ಮಾಡಿ ವೀಕ್ಷಣೆಗೆ ನಿರ್ಬಂಧ ಹೇರಿರುವ ಜಲಪಾತವನ್ನು ನೋಡಲು ಬರುವವರಿಗೆ ನಿರಾಸೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನಮ್ಮ ನಾಡಿನ ಸೊಬಗನ್ನು ಹೊರಗಿನವರಿಗೆ ಪರಿಚಯಿಸಲು ಶ್ರಮಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಂದಿಗೆ ಸ್ಥಳಿಯರೂ ಬೇಸರಿಸಿದರು. ಸಿದ್ಧಾಪುರ, ಉತ್ತರ ಕನ್ನಡದ ಕಾಡು-ಜಲ ಗಳ ಸೊಬಗನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಬೇಕಾದ ನಾಯಕತ್ವ ಈ ಜಿಲ್ಲೆಗೆ ಶಾಪ ಎಂದೆನಿಸದೇ ಇರಲಿಲ್ಲ. ಈ ಗುಡುಂಕಲ್ ಮಕ್ಕಳ ಜಲಪಾತ, ಚಾರಿತ್ರಿಕ,ಪರಿಸರ ಮಹತ್ವದ ವಿಶ್ವವಿಖ್ಯಾತ ಬುರುಡೆ ಜಲಪಾತ ಸ್ಥಳಿಯರೊಂದಿಗೆ,ಪ್ರವಾಸಿಗರಿಗೂ ಹತ್ತಿರವಾಗಬೇಕಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *