ವಿಸ್ಮಯ- ಕನ್ನೇಶ್ ಕೋಲಶಿರ್ಸಿ ಬರೆದ ಕವಿತೆ

ವಿಸ್ಮಯ

ಎಲ್ಲಿಯದೋ ಕಲ್ಲು, ಯಾರದೋ ಉಳಿ ಕಲೆತು
ಕಟಿದು ಒಂದಾದ ಮೇಲಲ್ಲವೆ?
ಬೆರಗಾಗಿ
ನಾವದಕೆ ವಿರಾಗಿ, ಬಾಹುಬಲಿ
ಎಂದು ಹೆಸರಿಟ್ಟಿದ್ದು.
ಆಳ ಕಡಲಿನ ಲವಣ,
ದೂರದ ಸೂರ್ಯನ ಕಿರಣ
ಕಲೆತು ಬಡಿದಾಡಿ ಗಾಳಿ- ಬಿಸಿಗೆ ತಾಗಿ
ರುಚಿಯ ಮೂಲವಾದ ಮೇಲಲ್ಲವೆ?
ನಾವದಕೆ ಉಪ್ಪೆಂದು ನಾಮಕರಣ ಮಾಡಿದ್ದು
ಉತ್ತಿ-ಬಿತ್ತಿ ತಿಂಗಳು ಕಳೆದು
ಮಳೆ-ಬಿಸಿಲು, ಗಾಳಿಗೆ ತಲೆಯೊಡ್ಡಿ
ವರ್ಷದೊಳಗೆ ಸಸಿಯ ತುದಿಗೆ ಬಂದ
ಹೂವಿನ ಮಗನಲ್ಲವೆ ನಮ್ಮ ಭತ್ತ-ಅಕ್ಕಿ?
ಭೂಮಿಯ ಚರ್ಮವನ್ನೇ ಸೀಳಿ
ಅದರ ಅಂಗವನ್ನೇ ಕಡಿದು,
ಅಡಿಪಾಯ ಮೇಲ್ಮೈ ಆಗಿ ಬಸಿದು
ಅದಕ್ಕೇ ರಸಾಯನ, ತಂಪು ಅಮೃತವ ಎರೆದು
ರೂಪ ಬಂದ ಮೇಲಲ್ಲವೆ?
ನಾವು ಅದಕೆ ರಸ್ತೆಯೆಂದು ಕರೆದದ್ದು.
ಲೋಕ ಹೀಗೂ ಉಂಟು, ಹಾಗೂ ಉಂಟು
ಅಂಕೋ? ಡೊಂಕೊ?
ಉಪ್ಪು,ಹುಳಿ-ಒಗರು.
ಸಾಧಿಸುವವನಿಗೆ ಲೋಕವೇ ಬಯಲು
ಮೇಲು-ಕೀಳಿನ ಮಲಿನ ಸಾಗಿ
ನಾ ಶ್ರೇಷ್ಠ, ನೀ ಕನಿಷ್ಠ
ಎಲ್ಲಾ ಕನಿಷ್ಟ ಮತಿಗಳ ಸೃಷ್ಟಿ
ಎತ್ತಿಕೋ ನಿನ್ನ ಪಾಲಿನ ಕತ್ತಿ
ತುಂಡರಿಸಿ ಬಿಡು,
ಮೂರು ಎಳೆಯ ಬಂಧನ
ಕೀಳರಿಮೆ, ಮೇಲರಿಮೆ ಅವವರದೇ ಕರ್ಮ
ದೂರಾಗಿ, ಬೋರಲಾಗಿ, ಬಯಲಾಗಿ ಸೇರಲಿ ಗಮ್ಯ
-ಕನ್ನೇಶ್ ಕೋಲಶಿರ್ಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *