ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಗೆ ಬೆಣ್ಣೆ!

ಒಟ್ಟಾರೆ ಈ ಅವ್ಯವಸ್ಥೆ, ದುರಾಡಳಿತಗಳಿಗೆ 25 ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಾ ಸ್ವಜಾತಿ ನೌಕರರನ್ನು ತುಂಬಿಕೊಂಡು ಹಿಂದುತ್ವ, ಧರ್ಮ ರಕ್ಷಿಸುತ್ತಿರುವ ಬ್ರಷ್ಟ-ದುಷ್ಟ ಶಾಸಕರು, ಸಂಸದರೇ ಈ ಕರಾಳತನಗಳ ಪೋಷಕರು ಎನ್ನುವ ಆಕ್ಷೇಪವನ್ನೂ ಸಾರ್ವಜನಿಕ ವಲಯ ಎತ್ತುತ್ತಿರುವುದು ಇಲ್ಲಿಯ ಶಾಸಕರು,ಸಂಸದರ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಯಂತಿದೆ.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಅಥವಾ ಪಂಚಾಯತ್ ರಾಜ್ ಇಲಾಖೆಗೆ ಬೆಣ್ಣೆ ಎನ್ನುವ ವಿದ್ಯಮಾನ ಇಂದು ನಡೆದಿದೆ. ತಾ.ಪಂ. ಸಭಾಭವನದಲ್ಲಿ ಇಂದು ತಾಲೂಕಾ ಪಂಚಾಯತ್ ಕೆ.ಡಿ.ಪಿ. ಮತ್ತು ಸಾಮಾನ್ಯ ಸಭೆಗಳು ಒಟ್ಟೊಟ್ಟಿಗೇ ನಡೆದವು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರೊಬ್ಬರ ನಡವಳಿಕೆ ಹಿನ್ನೆಲೆಯಲ್ಲಿ ತಾ.ಪಂ.ಸದಸ್ಯ ನಾಶಿರ್ ಖಾನ್ ಆಕ್ಷೇಪಕ್ಕೆ ಸಹಮತ ವ್ಯಕ್ತಪಡಿಸದ ಸ್ಥಾಯೀ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮತ್ತು ವಿವೇಕ ಭಟ್ ಹಾಗೂ ನಾಶಿರ್ ಖಾನ್ ನಡುವೆ ವಾಗ್ವಾದ ನಡೆದು ಸಭೆ ಕೆಲವು ಕಾಲ ಬಿಸಿಯ ವಾತಾವರಣ ನಿರ್ಮಿಸಿತು.

ನಂತರ ಸದಸ್ಯ ವಿವೇಕ ಭಟ್ ತಮ್ಮ ಭಾಗದ ಕಂದಾಯ ನಿರೀಕ್ಷಕರೊಬ್ಬರ ಪ್ರಜಾಪೀಡನೆ ಬಗ್ಗೆ ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿ ಕೂಡಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ನಮ್ಮ ಸಹಕಾರಿ ಸಂಘದ ಜಾಗವೊಂದರ ನೋಂದಣಿಗೆ ಲಂಚಕ್ಕಾಗಿ ಕೆಲಸ ವಿಳಂಬ ಮಾಡಿದರು. ಎಂದರು.

ಇದೇ ಚರ್ಚೆ ಮುಂದುವರಿದು ತಾಲೂಕಿನಲ್ಲಿ ಲಂಚಗುಳಿತನ ಹೆಚ್ಚಾಗಿದೆ. ಇದರಿಂದ ಶಾಸಕರು, ಸಂಸದರಿಗೆ ಕೆಟ್ಟ ಹೆಸರು ಬರುತ್ತಿದೆ. ತಾಲೂಕಿನ ಲಂಚಗುಳೀತನ, ವೃಥಾ ವಿಳಂಬಗಳಿಂದ ಸಾರ್ವಜಿನಿಕರಿಗೆ ತೊಂದರೆ ಮಾಡದೆ ಕೆಲಸ ನಿರ್ವಹಿಸಲು ಮಹಾಬಲೇಶ್ವರ ಹೆಗಡೆ ಅಧಿಕಾರಿಗಳಿಗೆ ವಿನಂತಿಸಿದರು.

ಇದರ ನಂತರ ಅರಣ್ಯ ಇಲಾಖೆಯ ಬಗ್ಗೆ ಆಕ್ಷೇಪಗಳು ಕೇಳಿಬಂದವು. ಸಭೆಯಲ್ಲಿ ಅಧಿಕಾರಿಯನ್ನು ಪ್ರಶ್ನಿಸಿದ ವಿವೇಕ ಭಟ್ ಅರಣ್ಯ ಇಲಾಖೆಯ ಕೆಲಸ, ಪ್ರಗತಿ ವಿವರಿಸುತ್ತೀರಿ ಅದಕ್ಕೆ ಕರ್ಚಾದ ಹಣ ಎಷ್ಟು ಎಂದು ಎಲ್ಲಿಯೂ ಹೇಳುವುದಿಲ್ಲ. ಎಂದು ಪ್ರಶ್ನಿಸಿದರು. ಈ ಚರ್ಚೆ ಮುಂದುವರಿಸಿದ ಅಧ್ಯಕ್ಷ ಸುಧೀರ್ ಗೌಡರ್ ಅರಣ್ಯ ಇಲಾಖೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರ ಸಹಕಾರ ಇಲ್ಲದೆ ಅರಣ್ಯ, ವನ್ಯಪ್ರಾಣಿಗಳು ಉಳಿಯಲು ಸಾಧ್ಯವೆ? ಎಂದು ಪ್ರಶ್ನಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಲು ಆದೇಶಿಸಿದರು.

ಹೀಗೆ ಅರಣ್ಯ, ಕಂದಾಯ, ಲೋಕೋಪಯೋಗಿ, ಸಣ್ಣ ನೀರಾವರಿ, ಕುಡಿಯುವ ನೀರು ಪೂರೈಕೆ ಇಲಾಖೆಗಳ ಬಗ್ಗೆ ಆಕ್ಷೇಪಿಸಿದ ತಾ.ಪಂ. ಸದಸ್ಯರು ತಮ್ಮ ಇಲಾಖೆಯಾದ ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ಆಧಾ ರಿತ ಕಾಮಗಾರಿಗಳ ದೆಸೆಯಿಂದಾಗಿ ಜನಸಾಮಾನ್ಯ ರೈತರಿಗೆ ಸಲ್ಲಬೇಕಾದ ನರೇಗಾ ಯೋಜನೆಯ ಅನುಷ್ಠಾನ ವಿಫಲತೆಯ ಪ್ರಶ್ನೆಯನ್ನು ಯಾರೂ ಕೇಳಲೇಇಲ್ಲ. ಹಿಂದಿನ ವಾರ ತಾಲೂಕಿಗೆ ಭೇಟಿ ನೀಡಿದ್ದ ನರೇಗಾ ಒಂಬುಡ್ಸ್ ಮನ್ ಆರ್.ಜಿ. ನಾಯಕ ಪಂಚಾಯತ್ ರಾಜ್ ಇಲಾಖೆಯ ನಿರ್ಲಕ್ಷ, ಕರ್ತವ್ಯ ಲೋಪದಿಂದ ತಾಲೂಕಿಗೆ ನೂರಾರು ಕೋಟಿ ಹಾನಿಯಾಗಿರುವ ಬಗ್ಗೆ ಆಕ್ಷೇಪಿಸಿದ್ದರು. ಸಾವಿರ, ಲಕ್ಷ ರೂಪಾಯಿಗಳ ಲೆಕ್ಕದ ಅವ್ಯವಸ್ಥೆಗಳನ್ನು ಉಗ್ರವಾಗಿ ಖಂಡಿಸಿ ಹಾರಾಡಿ, ಚೀರಾಡಿದ ಸದಸ್ಯರು ತಾ.ಪಂ. ನರೇಗಾ ಲೋಪ, ವಿಫಲತೆಗಳ ಬಗ್ಗೆ ಮುಗುಮ್ಮಾಗಿರುವುದೇಕೆ ಎಂದು ಕೆಲವರು ಪ್ರಶ್ನಿಸಿದ್ದು ಮಾಧ್ಯಮ ಪ್ರತಿನಿಧಿಗಳ ಕಿವಿಗಳಿಗೆ ಬೀಳದೆ ಇರಲಿಲ್ಲ.

ಒಟ್ಟಾರೆ ಈ ಅವ್ಯವಸ್ಥೆ, ದುರಾಡಳಿತಗಳಿಗೆ 25 ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಾ ಸ್ವಜಾತಿ ನೌಕರರನ್ನು ತುಂಬಿಕೊಂಡು ಹಿಂದುತ್ವ, ಧರ್ಮ ರಕ್ಷಿಸುತ್ತಿರುವ ಬ್ರಷ್ಟ-ದುಷ್ಟ ಶಾಸಕರು, ಸಂಸದರೇ ಈ ಕರಾಳತನಗಳ ಪೋಷಕರು ಎನ್ನುವ ಆಕ್ಷೇಪವನ್ನೂ ಸಾರ್ವಜನಿಕ ವಲಯ ಎತ್ತುತ್ತಿರುವುದು ಇಲ್ಲಿಯ ಶಾಸಕರು,ಸಂಸದರ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಯಂತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *