ಮಾನವೀಯತೆ ಮೆರೆದ ಲಂಬಾಪುರ ಸೇವಾ ಸಹಕಾರಿ ಸಂಘದ ನೌಕರರು

ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೋಮವಾರ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ 2019-20ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ಹಾಲಿನ ಶೇಖರಣೆ ಹಾಗೂ ಪಶು ಆಹಾರ ಮಾರಾಟ ಕಡಿಮೆ ಆಗಿದ್ದರಿಂದ ಲಾಭಾಂಶವೂ ಕಡಿಮೆ ಆಗಿದೆ. ಆದರೂ ಪ್ರತಿವರ್ಷದಂತೆ ಸಂಘಕ್ಕೆ ಹೆಚ್ಚು ಹಾಲು ನೀಡಿದ ಹಾಗೂ ಹಾಲು ಹಾಕುವ ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತಿದೆ. ಸಂಘದ ಎಲ್ಲ ಖರ್ಚು ವೆಚ್ಚಗಳನ್ನು ತೆಗೆದು 11ಸಾವಿರದ 957ರೂ ಲಾಭ ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ ಮಾತನಾಡಿ ಕರೊನಾ ಸಾಂಕ್ರಮಿಕ ರೋಗ ಹರಡುವಿಕೆಯ ಹಿನ್ನೆಲೆಯಲ್ಲಿ ಹಾಲಿನ ಶೇಖರಣೆ ಕಡಿಮೆ ಆಗಿದ್ದು ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರಿಗೆ ಪ್ರೋತ್ಸಾಹ ದನವನ್ನು ನೀಡಲಾಗುವುದು. ಸಂಘದ ಎಲ್ಲ ಸದಸ್ಯರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯರಾಗಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.


ಬಹುಮಾನ: ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಗೋಪಾಲಕೃಷ್ಣ ದೇವರು ಹೆಗಡೆ ಊರತೋಟ, ಶ್ರೀಧರ ಭಟ್ಟ ಮಾಣಿಕ್ನಮನೆ(ಪ್ರಥಮ), ಗಣೇಶಮೂರ್ತಿ ಆರ್.ಹೆಗಡೆ ಊರತೋಟ, ಸವಿತಾ ನಾರಾಯಣ ಗೌಡ ಹಾರ್ಸಿಕಟ್ಟಾ(ದ್ವಿತೀಯ), ಎಂ.ಜಿ.ನಾಯ್ಕ ಹುಬ್ಬಗೈ,ಎಂ.ಎಚ್.ನಾಯ್ಕ ಹುಬ್ಬಗೈ(ತೃತೀಯ)ಬಹುಮಾನ ಹಾಗೂ ಎಲ್ಲ ಸದಸ್ಯರಿಗೆ ಮಾಸ್ಕನ್ನು ವಿತರಿಸಲಾಯಿತು.
ಉಪಾಧ್ಯಕ್ಷ ಮಂಜುನಾಥ ಗಣಪ ನಾಯ್ಕ, ಜಿ.ಡಿ.ಹೆಗಡೆ, ಅನಂತ ಹೆಗಡೆ, ಎ.ವಿ.ಹೆಗಡೆ, ಸವಿತಾ ಹೆಗಡೆ, ಮೋಹನ ರಾಮ ನಾಯ್ಕ, ಎಸ್.ಡಿ.ಹೆಗಡೆ ಹೇಗೆ ಸೇರಿದಂತೆ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಪ್ರಮೋದ ಕೊಡಿಯಾ ಹೊನ್ನೆಹದ್ದ ಸಹಕರಿಸಿದರು.

ಮಾನವೀಯತೆ ಮೆರೆದ ಲಂಬಾಪುರ ಸೇವಾ ಸಹಕಾರಿ ಸಂಘದ ನೌಕರರು
ಸಿದ್ಧಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಲಂಬಾಪುರದಲ್ಲಿ ಸಾಲ ಪಡೆದ ಸಾಲಗಾರರು ಮರಣ ಹೊಂದಿದ ಕಾರಣ ಅವರ ಸಾಲದ ಬಾಬ್ತನ್ನು ವಿ.ಎಸ್.ಎಸ್. ನೌಕರರು ಭರಿಸಿದ ಅಪರೂಪದ ಘಟನೆ ವರದಿಯಾಗಿದೆ.

ಸಂಘದ ಸದಸ್ಯರು ಪ ಡೆದ ಸಾಲ ಸುಸ್ತಿ ಬಾಕಿ ಆಗಿದ್ದು, ಸಾಲ ವಸೂಲಿಗಾಗಿ ಮನೆಬಾಗಿಲಿಗೆ ಹೋದಾಗ ವಾರಸುದಾರರದಯನೀಯ ಸ್ಥಿತಿ ಕಂಡ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಬಾಲಚಂದ್ರ ಜಿ ಭಟ್‍ ಸಂಘದ ಸಿಬ್ಬಂಧಿಗಳಿಗೆ ಈ ವಿಚಾರ ಹೇಳಿ ಸಾಲಗಾರರಾದಗಾಯತ್ರಿ ಶ್ರೀಧರ ನಾಯ್ಕ್ ಹುಕ್ಕಳಿ ಮತ್ತು ಬಂಗಾರಿಕನ್ನ ಹಸ್ಲರ್ ಗೊದ್ದಲಮನೆ ಎನ್ನುವವರ ಸಾಲವನ್ನು ಸಂಘದ ಸಿಬ್ಬಂಧಿಗಳ ಪಗಾರಿನಿಂದ ಸಾಲ ಚುಕ್ತ ಮಾಡಿಕೊಡುವ ವಿಚಾರ ಮಾಡಿ ಸಂಘದಎಲ್ಲಾ ಸಿಬ್ಬಂಧಿಗಳಿಂದ ರೂ 93790 ಹಣವನ್ನು ದಿನಾಂಕ 23/12/2020 ರಂದು ನಡೆದ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಶೇಕಡ 2% ಬಡ್ಡಿಯಲ್ಲಿ ಸಾಲ ಚುಕ್ತಪಡಿಸಿಕೊಡುವುದಾಗಿ ಘೋಷಣೆ ಮಾಡಿದರು. ನೌಕರರ ಮಾನವೀಯತೆಯಘೋಷಣೆ ಕೇಳಿ ಸಭೆಯಲ್ಲಿ ಹಾಜರಾದಎಲ್ಲಾ ಸದಸ್ಯರು ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಿದರು.
ಸಂಘದ 61 ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದಅಧ್ಯಕ್ಷ ಎಂ ಐ ನಾಯ್ಕ್ ಕೆಳ್ಗಿನಸಸಿ ಈ ವರ್ಷ ಸಂಘವು 11.48 ಲಕ್ಷ ಲಾಭ ಗಳಿಸಿದೆ ಎಂದುಘೋಷಣೆ ಮಾಡಿದರು.

ಸಭೆಯಲ್ಲಿ ಆಡಳಿತ ಕಮೀಟಿಯಎಲ್ಲಾ ಸದಸ್ಯರು, ಟಿ.ಎಂ.ಎಸ್‍ಅಧ್ಯಕ್ಷರುಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ಧೇಶಕ ಆರ್ ಎಂ ಹೆಗಡೆ ಬಾಳೇಸರ ಹಾಜರಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 28-12-2020 ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ
ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 38089 40009 39889
2 ತಟ್ಟಿಬೆಟ್ಟೆ 30089 38699 34899
3 ಕೆಂಪಗೋಟು 22199 26100 25089
4 ಬಿಳಿಗೋಟು 19999 29389 27000
5 ಚಾಲಿ 36689 37339 37139
6 ಹೊಸ ಚಾಲಿ 27309 32139 31799
7 ಕೋಕಾ 15509 27800 24199
8 ಕಾಳುಮೆಣಸು 32469 33139 33139
9 ಹಸಿ ಅಡಿಕೆ 5101 5359 5227
10 ಹಣ್ಣು ಅಡಿಕೆ 5680 6256 5819

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *