ಕಾಡು ಹಂದಿ ಊರಿಗೆ ಬಂದಿತ್ತ….

.ಮಲೆನಾಡಿನಲ್ಲಿ ಹೆಚ್ಚಿದ ಹಂದಿ ಕಾಟ
ಮಲೆನಾಡಿಗೂ ಕಾಡು ಹಂದಿಗೂ ನಂಟು.
ಮಲೆನಾಡಿನ ಪರಿಸರದಲ್ಲಿ ಕಾಡು ಹಂದಿ ವಾಸ್ತವ ಆಗಿರುವುದರಿಂದ ಮಲೆನಾಡಿನ ಸಾಹಿತ್ಯ ಸಂಗೀತ, ಸಿನೆಮಾಗಳಲ್ಲೂ ಕಾಡು ಹಂದಿ ಒಂದು ಪಾತ್ರ. ಯೋಗರಾಜ್ ಭಟ್ ರ ಗಾಳಿಪಟದಲ್ಲಿ ಕಾಡು ಹಂದಿ ಒಂದು ಪಾತ್ರವಾಗಿರುವುದನ್ನು ಮರೆಯುವಂತಿಲ್ಲ.
ತೇಜಸ್ವಿಯವರ ಸಾಹಿತ್ಯದಲ್ಲಂತೂ ಕಾಡು ಹಂದಿ ಪಾತ್ರ, ಮಾಂಸ, ರುಚಿ, ವಾಸನೆಯಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಮಲೆನಾಡಿನ ಹಂದಿಗಳು ನಿರುಪದ್ರವಿಗಳು ಎನ್ನುತ್ತಾರೆ ಆದರೆ, ಹಂದಿಯ ಗಟ್ಟಿತನ, ಸಿಟ್ಟು, ಹುಂಬತನ ಅದನ್ನು ನೋಡಿದವರಿಗೇ ಗೊತ್ತು. ಮಲೆನಾಡಿನ ಹಂದಿ ಸೋಯಿಬೇಟೆ, ಬಲೆಬೇಟೆ ಹಿಂದೆ ಮರೆಯದ ಮನರಂಜನೆ ಈಗ ಇತಿಹಾಸ.
ಈಗ ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಬೇಟೆ ನಿಷಿದ್ಧ ಹಾಗಾಗಿ ಕಾಡು ಹಂದಿ ಈಗ ಉಪದ್ರವಿಯಾಗಿ ಬದಲಾಗಿದೆ.
ಚಿತ್ರನಟ ನೀರ್ನಳ್ಳಿ ಗಣಪತಿಯವರ ತೋಟದಲ್ಲಿ ತೆಂಗು-ಬಾಳೆ ಅಡಿಕೆ ನಾಶ ಮಾಡಿದ ಹಂದಿಯ ಉಪಟಳದ ಬಗ್ಗೆ ರಾಘವೇಂದ್ರ ಬೆಟ್ಟಕೊಪ್ಪ ತಮ್ಮ ಬರಹದಲ್ಲಿ ಪ್ರಸ್ಥಾಪಿಸಿದ್ದಾರೆ.
ಇಲ್ಲಿ ಸಿದ್ದಾಪುರದಲ್ಲಿ ರೈತರಿಗೆ ಹಂದಿಗಳು ನೀಡುತ್ತಿರುವ ಉಪಟಳದ ವರದಿಯಿದೆ. ಕಾಡುಹಂದಿ ವರ್ಷಪೂರ್ತಿ ರೈತರಿಗೆ ಕೊಡುವ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಕಾಡುಹಂದಿ ಮತ್ತು ಕಾಡುಕೋಣಗಳು, ಕೋಡಗಗಳ ಉಪಟಳದಿಂದ ಬೇಸತ್ತು ಕೃಷಿ ಮಾಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದ ರೈತರೂ ಇದ್ದಾರೆ.
ಮಲೆನಾಡಿನ ಕೋತಿ, ಕಾಡುಹಂದಿ, ಕಾಡುಕೋಣಗಳಿಂದ ಮಲೆನಾಡು, ಕರಾವಳಿ ತಾಲೂಕುಗಳಲ್ಲಿ ಕೊಟ್ಯಂತರ ಹಾನಿ ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ನೂರು, ಸಾವಿರ ಲೆಕ್ಕದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ.
ನಾವೇ ಉತ್ತಮರು ಎಂದು ಒಂದು ಅವಧಿಗೆ ಎರಡ್ಮೂರು ಮುಖ್ಯಮಂತ್ರಿಗಳಾಗುವವರು, ಹೊಸ ಸಂಪುಟ, ಸಚಿವಾಲಯದ ಸದಸ್ಯರಾಗುವವರು ಮಲೆನಾಡಿನ ಈ ಸಮಸ್ಯೆ ಕೇಳಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.
ಸಿದ್ದಾಪುರ
ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ತಾರಗೋಡ ಆಲಳ್ಳಿಯ ಸುಬ್ರಾಯ ಹೆಗಡೆ ಯವರ ಅಡಕೆ ತೋಟಕ್ಕೆ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ 40ಕ್ಕೂ ಹೆಚ್ಚು ಅಡಕೆ ಹಾಗೂ ಬಾಳೆಸಸಿಗಳನ್ನು ನಾಶಪಡಿಸಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅಡಕೆ ತೋಟಕ್ಕೆ ದಾಳಿ ನಡೆಸುತ್ತಿರುವ ಕಾಡು ಹಂದಿಗಳು ಅಡಕೆ ಹಾಗೂ ಬಾಳೆ ಸಸಿಗಳನ್ನು ನಾಶಪಡಿಸಿವೆ. ಇನ್ನೊಂದೆಡೆ ಮಂಗಗಳು ಅಡಕೆ ಮಿಳ್ಳೆಗಳನ್ನು ನಾಶಪಡಿಸುತ್ತಿವೆ. ದಿನದಿಂದ ದಿನಕ್ಕೆ ರೈತರು ಬೆಳೆದ ಬೆಳೆಗಳೆಲ್ಲ ಕಾಡುಪ್ರಾಣಿಗಳ ಪಾಲಾಗುತ್ತಿರುವುದರಿಂದ ರೈತರ ಸಂಕಷ್ಟ ಹೆಚ್ಚಾಗುತ್ತಿದೆ. ಈ ಕುರಿತು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಹಾಗೂ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಾಯ ಹೆಗಡೆ ಆಲಳ್ಳಿ ಆಗ್ರಹಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *