..ಇರುವುದೆಲ್ಲವ ಬಿಟ್ಟು.. ಸಣ್ಣ ಕತೆ

ಇಬ್ಬರು ಆತ್ಮೀಯ ಸ್ನೇಹಿತರು ಸದಾ ಕೆಲಸ,ಪ್ರಗತಿ, ಹಣ ಎಂದೆಲ್ಲಾ ಯೋಚಿಸುತಿದ್ದರು. ತಮ್ಮ ಸಾಮರ್ಥ್ಯಕ್ಕೆ ಈ ಊರೇನು,ತಾಲೂಕು, ಜಿಲ್ಲೆ, ರಾಜ್ಯ, ರಾಜಧಾನಿ,ದೇಶದ ರಾಜಧಾನಿ ಗಳೆಲ್ಲಾ ಬೇಡ ವಿದೇಶಕ್ಕೇ ಹೋಗಿ ದುಡಿದು ಬಂದು ಇಲ್ಲಿ ಏನಾದರೂ ಮಾಡೋಣ ಎಂದು ನಿರ್ಧರಿಸಿ ಹೊರದೇಶಕ್ಕೂ ಹೊರಟು ಹೋದರು. ಅಲ್ಲಿ ಹಗಲಿರುಳೆನ್ನದೆ ದುಡಿದರು. ನಿರಂತರ ದುಡಿಮೆ ಒಬ್ಬನಿಗೆ ಸಕ್ಕರೆ ಖಾಯಿಲೆಯನ್ನೂ ದಯಪಾಲಿಸಿತು. ಸಕ್ಕರೆ ಖಾಯಿಲೆಯಿಂದ ಹೆದರಿದ ಮೊದಲ ಸ್ನೇಹಿತ ಮತ್ತೊಬ್ಬನ ಬಳಿ ಅಲವತ್ತುಕೊಂಡ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಬೇಸರಿಸಿದ. ಇದಕ್ಕೆ ನಿರುತ್ತರನಾದ ಮೊದಲಸ್ನೇಹಿತ ಸಕ್ಕರೆ ಖಾಯಿಲೆ ಬದುಕನ್ನೇ ಮುಳುಗಿಸುವಷ್ಟು ಅಪಾಯಕಾರಿಯೇ ಎಂದು ಯೋಚಿಸಿದ.

ಡಯಾಬಿಟಿಕ್‌ ಸ್ನೇಹಿತನಿಗೆ ನೀನು ಊರಿಗೆ ಮರಳು ಅಲ್ಲಿ ನಿನ್ನ ಸಕ್ಕರೆ ಖಾಯಿಲೆ ಚಿಕಿತ್ಸೆ ಜೊತೆಗೆ ಈ ಬಾರಿ ಶಾಸಕನಾಗುವ ಬಗ್ಗೆಯೂ ತಯಾರಿ ಮಾಡಿಕೊ ನಿನ್ನ ಎಲ್ಲಾ ಕೆಲಸಕ್ಕೆ ನನ್ನ ನೆರವಂತೂ ಇದ್ದೇ ಇರುತ್ತದೆ ಎಂದೂ ಭರವಸೆ ಕೊಟ್ಟ. ಸಕ್ಕರೆ ಸ್ನೇಹಿತ ಊರಿಗೆ ಮರಳಿದ ಸಕ್ಕರೆ ಖಾಯಿಲೆ ನಿಯಂತ್ರಿಸಿಕೊಂಡ ಸಾಮಾಜಿಕ ಕೆಲಸಗಳನ್ನೂ ಶುರು ಹಚ್ಚಿಕೊಂಡ ನೋಡುನೋಡುತ್ತಲೇ ಸಕ್ಕರೆ ಸ್ನೇಹಿತನ ಪ್ರಚಾರ,ಪ್ರಭಾವ ಬೆಳೆಯತೊಡಗಿತು. ಚುನಾವಣೆ ಸಮೀಪಿಸಿ ಶಾಸಕನೂ ಆಗಿಬಿಟ್ಟ. ಎಲ್ಲದಕ್ಕೂ ನೆರವಾಗುತಿದ್ದ ಸ್ನೇಹಿತ ಗ್ರಾಮಕ್ಕೆ ಮರಳಿ ಸ್ನೇಹಿತನ ಸಾಧನೆ ಮೆಚ್ಚಿ ನಾನೂ ಕೆಲವು ವರ್ಷ ಮಾತ್ರ ಅಲ್ಲಿ, ಕಡೆಗೆ ಇತ್ತ ಬಂದರಾಯಿತು. ಎಂದುಕೊಂಡ ಅದಕ್ಕೊಂದು ನೀಲನಕ್ಷೆಯನ್ನೂ ಹಾಕಿಕೊಂಡ. ಈಗ ಎಲ್ಲವೂ ಅಂದುಕೊಂಡಂತೇ ನಡೆಯತೊಡಗಿತ್ತು. ಸಕ್ಕರೆ ಸ್ನೇಹಿತ ಎಣಿಸಿದಂತೆ ಎಲ್ಲವೂ ನಡೆಯುತ್ತಿರಲಿಲ್ಲ. ಸಕ್ಕರೆಪ್ರಮಾಣ ಹೆಚ್ಚತೊಡಗಿತು. ಕನಸು ನನಸಾಗಿತ್ತಾದರೂ ಸದನದ ಒಳಗೆ ಹೊರಗೆ ಎಲ್ಲವೂ ಈತನಿಗೆ ವ್ಯತಿರಕ್ತವಾಗೇ ನಡೆಯತೊಡಗಿದ್ದವು.

ಸಕ್ಕರೆ ಸ್ನೇಹಿತ ಆತ್ಮೀಯ ಸ್ನೇಹಿತನಿಗೆ ವಾಸ್ತವ ತಿಳಿಸಿದ. ಶಾಸಕತ್ವ, ಜನಪ್ರತಿನಿಧಿ ಎಂದರೆ ನಾವಂದುಕೊಂಡಂತಲ್ಲ ಕಾಲಮಿತಿಯಲ್ಲ ನಾವು ಎಲ್ಲವನ್ನೂ ಸಾಧಿಸಲೂ ಸಾಧ್ಯವಿಲ್ಲ. ನನಗ್ಯಾಕೋ ಮರಳಿ ನೀನಿದ್ದಲ್ಲಿಗೇ ಬಂದು ಬಿಡಬೇಕು ಎನಿಸುತ್ತದೆ ಎಂದು ಎಲ್ಲಾ ಸಾಧನಗಳ ಮೂಲಕ ಸ್ಫಷ್ಟಪಡಿಸಿದ. ಆತ್ಮೀಯ ಸ್ನೇಹಿತ ಹುಟ್ಟೂರಿಗೆ ಮರಳಬೇಕು ಸಕ್ಕರೆ ಸ್ನೇಹಿತ ವಿದೇಶಕ್ಕೆ ಹಾರಬೇಕು ಎನ್ನುವ ಯೋಚನೆಗಳೆಲ್ಲಾ ಮನೋವೇಗದಂತೇ ನಡೆದುಹೋದವು. ಸಕ್ಕರೆ ಸ್ನೇಹಿತ ಊರುಬಿಟ್ಟ, ಆತ್ಮೀಯ ಸ್ನೇಹಿತ ಮರಳಿಬಿಟ್ಟ ವಿಧಿಲಿಖಿತವೋ? ಕಾಕತಾಳೀಯವೋ ಎಲ್ಲವೂ ಸಣ್ಣ ಸಮಯದಲ್ಲೇ ಸಂದು ಹೋದವು.

ಸಕ್ಕರೆ ಸ್ನೇಹಿತನ ಶಾಸಕತ್ವದ ರಾಜೀನಾಮೆ ಆತ್ಮೀಯ ಸ್ನೇಹಿತನ ಕೆಲಸದ ರಾಜೀನಾಮೆಏಕಸಮಯದಲ್ಲೇ ನಡೆದುಹೋದವು. ಸಕ್ಕರೆ ಸ್ನೇಹಿತ ವಿದೇಶ ಸೇರಿಕೊಂಡ ಅವನ ದುಡುಕಿನ ತೀರ್ಮಾನದ ಬಗ್ಗೆ ಆತ್ಮೀಯ ಸ್ನೇಹಿತನಿಗೂ ಹಿತವೆನಿಸಲಿಲ್ಲ. ಇಬ್ಬರ ದಾರಿಗಳೂ ಬೇರೆ ಆದಂತಾದವು ವಿದೇಶದಿಂದ ಮರಳಿದ ಆತ್ಮೀಯ ಸ್ನೇಹಿತ ಕೃಷಿ ಆಯ್ದುಕೊಂಡ ಮಾಜಿ ಶಾಸಕರೂ ಮರಳಿ ಕೃಷಿಗೇ ಧುಮಿಕಿದರು. ಬರಗಾಲ ಹೆಚ್ಚಾಯಿತು. ಸಕ್ಕರೆ ಕಡಿಮೆಯಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ನಮಗೆ ಗ್ಯಾರಂಟಿ ಸಹಾಯಕ…

ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ: ಗೀತಾ ಶಿವರಾಜ್’ಕುಮಾರ್ (ಸಂದರ್ಶನ) ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೀತಾ ಶಿವರಾಜಕುಮಾರ್ ಅವರು,...

ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ

ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ...

modi namskar!- ಮೋದಿ ನಮಸ್ಕಾರ! ಇದು ಪಂಗನಾಮ….?

ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಮೋದಿ...

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತದಾನ ಹೆಚ್ಚಳ: ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಅಂಶ, ಸೌಜನ್ಯಾ ಹತ್ಯೆ ಪ್ರಕರಣದಿಂದಾಗಿ ಮತದಾನದಲ್ಲಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ನೋಟಾ ಅಭಿಯಾನ, ಎಸ್‌ಡಿಪಿಐ ಸ್ಪರ್ಧೆಯಲ್ಲಿ ಇಲ್ಲದಿರುವುದು ಮತ್ತು...

ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ

ಶಿರಸಿಯಲ್ಲಿ ಕಾಗೇರಿ ವಿರುದ್ಧ ವಾಗ್ದಾಳಿ ನಡೆಸಿದ ಆರ್ ವಿ ದೇಶಪಾಂಡೆ. ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *