ರಾಮ,ಗಾಮ,ಗ್ರಾಮ ದೇವರುಗಳೆಂದರೆ… ಯಾರು?

ಭಾರತೀಯರು ವೈದಿಕ ಸಂಸ್ಕೃತಿ,ಸಂಸ್ಕಾರಗಳಿಗೆ ದಾಸರಾಗುತ್ತ ಬೆಳೆದವರು. ದ್ರಾವಿಡರಲ್ಲಿ ದೈವಾರಾಧನೆ ವಿಭಿನ್ನ ಸ್ವರೂಪದಲ್ಲಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ದ್ರಾವಿಡರಲ್ಲಿ ಕೂಡಾ ವೈದಿಕ ಆಚಾರ, ವಿಚಾರಗಳನ್ನು ತುರುಕಿ ಅವರ ಸಾಂಸ್ಕೃತಿಕ ಅನನ್ಯತೆಯನ್ನು ಮೃಧುಗೊಳಿಸಲಾಗುತ್ತಿದೆ.

ದ್ರಾವಿಡ ಮೂಲದ ಜನಾಂಗೀಯ ಮೂಲದವರನ್ನು ಹೊಂದಿರುವ ಮಲೆನಾಡಿನಲ್ಲಿ ಪ್ರತಿಗ್ರಾಮದಲ್ಲಿ ಗಾಮ ಅಥವಾ ಗ್ರಾಮ ದೇವರ ಆರಾಧನೆ ಇದೆ. ಗ್ರಾಮ, ಮತ್ತು ಗಾಮ ದೇವರ ದೇವಾಲಯಗಳನ್ನು ಹೊಂದಿರುವ ಬಹುತೇಕ ಗ್ರಾಮಗಳಲ್ಲಿ ಗಾಮನ ಆರಾಧನೆ ಇದೆ. ಈ ಗಾಮ ಯಾರು? ಗ್ರಾಮ ದೇವಾಲಯದಲ್ಲಿ ಇರುವ ಗಾಮ ದೇವರು ಅಥವಾ ಗ್ರಾಮ ದೇವರ ನಿಜಸ್ವರೂಪವೇನು ಎನ್ನುವ ಸತ್ಯ ಬಹುತೇಕರಿಗೆ ಗೊತ್ತೇ? ಇಲ್ಲ.

ಮಲೆನಾಡು, ಬಯಲುಸೀಮೆಗಳಲ್ಲಿ ಗಾಮ, ಗ್ರಾಮ ದೇವರು ಎಂದು ಕರೆಯಲಾಗುವ ದೇವರು ಮೂಲದಲ್ಲಿ ರಾಮ! ಆದರೆ ಸನಾತನಿಗಳು ಆರಾಧಿಸುವ ರಾಮಾಯಣದ ಕಾಲ್ಫನಿಕ ರಾಮ ಈ ರಾಮನಲ್ಲ. ಅವೈದಿಕರು ಆರಾಧಿಸುವ ರಾಮ ಚರಿತ್ರೆಯ ಕುಮಾರ ರಾಮ. ಕುಮಾರ ರಾಮ ಒಬ್ಬ ರಾಜಪುತ್ರ ಆತ ತನ್ನ ತ್ಯಾಗ, ಶೌರ್ಯ, ವೀರತ್ವಗಳಿಂದಲೇ ಅಮರನಾದವನು.

ಭಾರತೀಯ ಪರಂಪರೆಯಲ್ಲಿ ವೀರರು, ಧೀರರು, ಪರಾಕ್ರಮಿಗಳಿಗೆ ಪ್ರಮುಖ ಸ್ಥಾನ. ಕುಮಾರ ರಾಮ ತನ್ನ ತಂದೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ವೀರ, ಐತಿಹಾಸಿಕ ದಾಖಲೆಗಳ ಪ್ರಕಾರ ಮೊಗಲರು, ಬ್ರೀಟೀಷರ ವಿರುದ್ಧ ಹೋರಾಡಿದ ವೀರಪರಾಕ್ರಮಿ ಈ ರಾಮ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕೊಪ್ಪಳ-ಗಂಗಾವತಿ, ಚಿತ್ರದುರ್ಗ ಸೇರಿದಂತೆ ಕೆಲವು ಕಡೆ ಅತಿ ವಿರಳವಾಗಿ ಈ ಕುಮಾರ ರಾಮನದೇವಾಲಯಗಳಿವೆ.

ಈ ಕುಮಾರರಾಮನನ್ನು ರಾಮ ಎಂದು ಆರಾಧಿಸುತ್ತ ಇದೇ ರಾಮ ಗಾಮ ಎಂದು ಅಪಭ್ರಂಶವಾಗಿ ನಂತರ ಗ್ರಾಮ ದೇವರು ಎಂದು ರೂಢಿಯಾಯಿತು ಎನ್ನುವ ಐತಿಹಾಸಿಕ ದಾಖಲೆಗಳಿವೆ. ಹಾಗಾಗಿ ಮಲೆನಾಡಿನ ಕುಮಾರ ರಾಮ ರಾಮಾಯಣದ ರಾಮನಲ್ಲ, ಮಳೆಗಾಲದ ಆರಿದ್ರ ಹಬ್ಬ ಅಥವಾ ಆರಿದ್ರಮಳೆಯ ಹನಿಹಬ್ಬದಲ್ಲಿ ಕೆಳವರ್ಗಗಳು ಆರಾಧಿಸುವ ಗಾಮನ ಮುಖ, ರಾಮ, ಗ್ರಾಮ ದೇವರುಗಳೆಲ್ಲಾ ಮೂಲದಲ್ಲಿ ರಾಮ ದೇವರುಗಳೇ ಆದರೂ ಅವರು ವೈದಿಕ ರಾಮರಲ್ಲ ಬದಲಾಗಿ ಅವೈದಿಕ ಕುಮಾರ ರಾಮರು ಇವರನ್ನೇ ಗಾಮ ದೇವರು, ಗ್ರಾಮ ದೇವರು ಎಂದು ಆರಾಧಿಸಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *