ಟಿಕೇಟ್‌ ಪಡೆಯುವಲ್ಲಿ ಗೆದ್ದ ಕಾಗೇರಿ ಸಮರ ಗೆಲ್ಲುವರೆ?

ನೇಪಥ್ಯಕ್ಕೆ ಸರಿಯುವ ಮಾತನಾಡಿದ್ದ ಸಂಸದ ಅನಂತಕುಮಾರ ಹೆಗಡೆ ದಿಢೀರನೆ ಎದ್ದು ಕುಳಿತು ನಾನೇ ಅಭ್ಯರ್ಥಿ ಎಂದು ಹೂಂಕರಿಸಿ ಕ್ಷೇತ್ರದಾದ್ಯಂತ ಸುತ್ತಾಡತೊಡಗಿದಾಗ ಆಶ್ಚರ್ಯ ಚಕಿತರಾದ ಎಲ್ಲರೂ ಕೇಳಿದ್ದು ಅನಿ ಐಲ್‌ ಮರೆ ಅನಂತ ಹೆಗಡೆ ಎಂದು … ಯಾಕೆಂದರೆ ಸಂಸದ, ಸಚಿವರಾಗಿ ಮನೆಯೊಳಗೆ ಅವಿತಿದ್ದು ನಾಪತ್ತೆಯಾದರು ಎನ್ನುತ್ತಿರುವಾಗ ಅನಂತಕುಮಾರ ಹೆಗಡೆ ಹೊರಬಂದಿದ್ದರು.

ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ.ಯ ಉತ್ತರ ಕನ್ನಡದ ಅಭ್ಯರ್ಥಿಯಾಗುತ್ತಾರೆ ಎಂದು ಓಡಾಟ ಪ್ರಾರಂಭಿಸಿದ್ದಾಗ ಅನಂತಕುಮಾರ ಹೆಗಡೆ ಹಿಂದಿನ ಚುನಾವಣೆಗಳಂತೆ ಈ ಬಾರಿ ಕೂಡಾ ಗಡಿಬಿಡಿಯಿಂದ ಹೊರ ಬಂದಿದ್ದರು.

ಕಾಳಿಂಗ ಸರ್ಪದಂತೆ ಆರಾಂ ಆಗಿ ತಿಂದುಂಡು ಹಾಯಾಗಿ ನಿದ್ರೆ ಮಾಡುತಿದ್ದ ಅನಂತ ಕುಮಾರ ಹೆಗಡೆ ಪ್ರಾರಂಭದ ಒಂದೆರಡು ಅವಧಿ ಸ್ವಲ್ಫ ಕ್ಷೇತ್ರ ಸುತ್ತಿದ್ದನ್ನು ಬಿಟ್ಟರೆ ಆ ನಂತರ ಹಿಂದುತ್ವ ವಾದಿ ಹೆಗಡೆ ರೈಲ್‌ ಬಿಟ್ಟಿದ್ದೇ ಹೆಚ್ಚು. ಇಂಥ ಅನಂತ ಹೆಗಡೆ ಈ ಬಾರಿ ಸ್ಫರ್ಧೆಯಲ್ಲಿ ಇಲ್ಲ. ಬಿ.ಜೆ.ಪಿ. ಗೆ ಅಭ್ಯರ್ಥಿ ಮುಖ್ಯವಲ್ಲ ನಮಗೆ ಕಮಲವೇ ಅಭ್ಯರ್ಥಿ ಎಂದು ಹೇಳುವ ಬಿ.ಜೆ.ಪಿ.ಯ ಮಾಮೂಲು ಡೈಲಾಗ್‌ ಹೇಳುತ್ತಲೇ ಅನಂತಕುಮಾರ ಹೆಗಡೆ ಒಂದೆರಡು ಬಾರಿ ನಿಮ್ಮಲ್ಲ್ಲಿ ಯಾರಿಗಾದರೂ ಗಂಡಸ್ಥನವಿದ್ದರೆ, ತಾಕತ್ತಿದ್ದರೆ ಬನ್ನಿ ಎಂದು ಪಂಥಾಹ್ವಾನ ಮಾಡಿ ಕಾಲು ಕೆದರಿದ್ದ ಹೆಗಡೆಗೆ ಮರ್ಮಾಘಾತ ವಾಗುವಂತೆ ಅವರ ಜಾತಿಯ ಹಿರಿಯ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಸೆಡ್ಡು ಹೊಡೆದು ಟಿಕೆಟ್‌ ತಂದಿದ್ದಾರೆ.

ಈ ಹಿಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅತಿ ಆತ್ಮವಿಶ್ವಾಸದಿಂದ ಸೋತ ವಿಶ್ವೇಶ್ವರ ಹೆಗಡೆ ಈ ಬಾರಿ ಮೋದಿ ನಾಮಬಲವೇ ತನಗೆ ಗೆಲ್ಲಿಸುತ್ತೆ ಎಂದು ನಂಬಿದ್ದಾರೆ. ಆದರೆ ವಾಸ್ತವ ಬೇರೆ. ಇವರ ಎದುರಾಳಿ ಡಾ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದ ಬಹುಸಂಖ್ಯಾತ ಮರಾಠಿ ಭಾಷಿಕರ ಪ್ರತಿನಿಧಿ. ಆಡಳಿತ ಕಾಂಗ್ರೆಸ್‌ ನ ೫ ಜನ ಶಾಸಕರ ಬೆಂಬಲ ಕಾಂಗ್ರೆಸ್‌ ಅಭ್ಯರ್ಥಿಗಿದೆ.

ತನ್ನ ಮೂವತ್ತು ವರ್ಷಗಳ ರಾಜಕೀಯದಲ್ಲಿ ಅನಂತಕುಮಾರ ಹೆಗಡೆಯಂತೆ ಜಿಲ್ಲೆಯ ಈಡಿಗ-ನಾಮಧಾರಿ- ದೀವರನ್ನು ಬಳಸಿಕೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ನಿಂತಿದ್ದೇ ಇಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ಕೆಲವರು ಮೇಲ್ವರ್ಗದವರನ್ನೂ ತುಳಿದ ಕಾಗೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರ ಕ್ಷೇತ್ರ ಬಯಸುವ ವ್ಯಕ್ತಿತ್ವದವರಲ್ಲ. ಇಂಥ ಅನೇಕ ಮೈನಸ್‌ ಗಳ ನಡುವೆ ಹಾಲಿ ಸಂಸದ ಅನಂತಕುಮಾರ ಹೆಗಡೆಯವರ ವಿರೋಧ ವಿಶ್ವೇಶ್ವರ ಹೆಗಡೆಯವರ ಲಾಗಾಯ್ತಿನ ಅನಾನುಕೂಲ.

ಹೀಗೆ ಶಾಸಕರು, ಸಂಸದರು , ವಿಧಾನಸಭಾ ಅಧ್ಯಕ್ಷರು ಆಗಿದ್ದಾಗ ಹಿಂದುತ್ವದ ಹೆಸರಲ್ಲಿ ವೈದಿಕತೆ ಮೆರೆದ ವಿಶ್ವೇಶ್ವರ ಹೆಗಡೆ ಸಂಭಾವಿತರಾದರೂ ಅನಂತಕುಮಾರ ಹೆಗಡೆಯವರಂತೆ ನೇರ- ನಡೆಯವರಲ್ಲ ಈ ಅಂಶಗಳೇ ಮಾರಕವಾಗಿ ಈ ಬಾರಿ ಗ್ಯಾರಂಟಿ ಹೋಶ್‌ ನಲ್ಲಿರುವ ಕಾಂಗ್ರೆಸ್‌ ಮಹಿಳೆಯೊಬ್ಬರಿಂದ ವಿಶ್ವೇಶ್ವರ ಹೆಗಡೆಯವರನ್ನು ಸೋಲಿಸುವ ಮೂಲಕ ಬಿ.ಜೆ.ಪಿ.ಯ ಬಣ್ಣದ ಮಾತುಗಳಿಗೆ ಶಾಸ್ತಿ ಮಾಡಲಿರುವ ಲಕ್ಷಣ, ಉತ್ಸಾಹ ಜನಮಾನಸದಲ್ಲಿ ಕಾಣುತ್ತಿದೆ. ಮೋದಿ ನಾಮಬಲ ನಂಬಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಭಾವದಿಂದ ಟಿಕೆಟ್‌ ತಂದಂತೆ ಗೆದ್ದು ತೋರಿಸುವರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *