ಬಿಳಗಿ ಕಂಡುಮನೆಗೆ ಬೇಕು ಸರ್ವ ಋತು ರಸ್ತೆ, ಉಕ್ಕಿ ಹರಿದ ಅಘನಾಶಿನಿ: ಮುಳುಗಿದ ಸರ್ಕುಳಿ

ಮಲೆನಾಡೆಂದರೆ.. ಭೂಪಟದಲ್ಲಿ ಬೆಟ್ಟ, ನೀರು, ಗಿರಿ ವೃಕ್ಷಗಳ ಚಿತ್ರ. ಆದರೆ ಮಲೆನಾಡೆಂದರೆ ಇವುಗಳಿಗೂ ಮೀರಿದ ವಿಶೇಶ ಜೀವನ ಶೈಲಿಯ ತಾಣ  ಎಂಬುದು ಅನೇಕರಿಗೆ ತಿಳಿದಿಲ್ಲ.   ಮಲೆನಾಡಿನಲ್ಲಿ ಮಳೆ ಬಂತೆಂದರೆ ಅದು ಸುಮಧುರ ಹಾಡಿನಂತೆ ಅಬ್ಬರವಿಲ್ಲದೆ ಸುರಿದರೆ  ಸಂಗೀತ,ಸಾಹಿತ್ಯದ  ಖುಷಿ ನೀಡಬಲ್ಲದು ಅದೇ ರುದ್ರನರ್ತನಕ್ಕಿಳಿದರೆ ಭೂಮಿ,ಬದುಕು ನಲುಗತೊಡಗುತ್ತದೆ. ಈ ಕಾರಣಕ್ಕೇ ಮಲೆನಾಡಿನಲ್ಲಿ ಮಳೆಗಾಲವೆಂದರೆ  ಕಭಿ ಕುಷಿ ಕಭಿ ಗಮ್.


  ಕರ್ನಾಟಕವನ್ನು ಆಳಿದ ತುಂಡರಸರಲ್ಲಿ ಬಿಳಗಿ ಅರಸರ ಮನೆತನವೂ ಒಂದು. ಈ ಬಿಳಗಿ ಕೋಟೆ ವ್ಯಾಪ್ತಿಯ ಕಂಡುಮನೆ ಎನ್ನುವ  ಈ ಗ್ರಾಮವೇ ಮಲೆನಾಡಿನ ಜನಜೀವನ, ಸಾಹಸಕ್ಕೆ ಸಾಕ್ಷಿ. ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಎನ್ನುವಂತೆ ಬಿಳಗಿ ಕೇಂದ್ರದಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದ ಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮ ತಾಲೂಕು ಕೇಂದ್ರ ಸಿದ್ಧಾಪುರ ದಿಂದ ಬಹುದೂರದಲ್ಲಿಲ್ಲ. ಆದರೆ  ಈಗ್ರಾಮಕ್ಕೆ ಸರ್ವ ಋತು ರಸ್ತೆ ಇಲ್ಲದಿರುವುದರಿಂದ ಕಂಡುಮನೆ ಜೊತೆಗೆ ಇಲ್ಲಿಂದ ಕಾಲುದಾರಿಯಲ್ಲಿ  ಹೋಗುವ ಅರ್ಧ ಡಜನ್ ಗೂ ಹೆಚ್ಚಿನ ಗ್ರಾಮಗಳಿಗೆ ಮಳೆಗಾಲವೆಂದರೆ ಶಿಕ್ಷೆ.


ತೋಟ, ಭತ್ತದ ಗದ್ದೆ ಬಳಸಿ ಸಾಗುವ ಹೆಮ್ಮನಬೈಲು ಕಂಡುಮನೆ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಅನಾನುಕೂಲಕರ ಇರುವುದರಿಂದ ಮಳೆಗಾಲದ ಮೂರು ತಿಂಗಳು ಈ ಗ್ರಾಮಗಳಿಗೆ ವಾಹನ ಸಂಚಾರ ಇರುವುದಿಲ್ಲ. ಮನುಷ್ಯ ಸುಲಭವಾಗಿ ಹೊತ್ತೊಯ್ಯುವ ವಸ್ತುಗಳನ್ನು ಬಿಟ್ಟು ವಾಹನದಿಂದ ತರುವ ವಸ್ತು,ಸಲಕರಣೆಗಳನ್ನು ಮಳೆ ಬರುವ ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೆಂದು ಶಾಲೆ, ಸಂತೆ, ಇತರ ಅಗತ್ಯಗಳಿಗೂ ಪೇಟೆ, ನಗರಕ್ಕೆ ಬರದಿದ್ದರೆ ಹ್ಯಾಗೆ ಹೇಳಿ. ಇಲ್ಲಿಯ ಜನ ಅನಿವಾರ್ಯ ಪ್ರಸಂಗಗಳಲ್ಲಿ ಅನಾರೋಗ್ಯಕ್ಕೀಡಾದವರನ್ನು ಮೈಮೇಲೆ ಹೊತ್ತೇ ಸಾಗಿಸಬೇಕು. ಇರುವ  ಒಂದು ಕಾಲು ಸಂಕದ ಚಿಕ್ಕ ಸೇತುವೆ ಕೂಡಾ ಮಳೆನೀರಿನಲ್ಲಿ ಕೊಚ್ಚಿಹೋಗುವಂತಿದೆ.
ಇಂಥ ಹಲವು ಸಮಸ್ಯೆಗಳ ಬೀಡಾಗಿರುವ ಈ ಹಳ್ಳಿಗೆ ನಾಗರಿಕ ಸೌಲಭ್ಯ ಒದಗಿಸಬೇಕೆಂದು ಈ ಹಳ್ಳಿಗಳ ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇಂಥ ನೂರಾರು ಹಳ್ಳಿಗಳಿರುವ ಉತ್ತರ ಕನ್ನಡ ಜಿಲ್ಲೆ ಮಲೆನಾಡಿನ ಮಳೆಗಾಲದ ತೊಂದರೆಗೆ ಜ್ವಲಂತ ಸಾಕ್ಷಿ. ಇಂಥ ಗ್ರಾಮಗಳಿಗೆ ಮಳೆನೀರು, ಪ್ರವಾಹ ನುಗ್ಗಿದರೆ ಕಾಡೊಳಗೆ ಮನೆ ಮಾಡಿ ಮಳೆ-ಪ್ರವಾಹಕ್ಕೆ ಅಂಜಿದೊಡೆಂತಯ್ಯ ಎನಬಹುದೆ? ಇದು ಮಲೆನಾಡ ಮಳೆಗಾಲದ ಬದುಕಿಗೆ ಒಂದು ದೃಷ್ಟಾಂತ ಮಾತ್ರ.

ಉಕ್ಕಿ ಹರಿದ ಅಘನಾಶಿನಿ: ಮುಳುಗಿದ ಸರ್ಕುಳಿ
…….
ಕಳೆದ ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನೆ ಏರಿಕೆಯಾಗಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಸರಕುಳಿ ನೀರಿನ ಪ್ರವಾಹಕ್ಕೆ ಸಿಲುಕಿದೆ.
ಗುರುವಾರ ಸಂಜೆಯವರೆಗೂ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದ ನೀರು ರಾತ್ರಿಯ ವೇಳೆ ಅಪಾಯದ ಮಟ್ಟದಲ್ಲಿ ಹರಿದಿದೆ. ಇದರಿಂದಾಗಿ ಇಲ್ಲಿ ಮಹಿಷಾಸುರ ಮರ್ಧಿನಿ ದೇವಾಲಯದ ಒಳಗೆ ನೀರು ನುಗ್ಗಿದೆ.
ಇಲ್ಲಿಯ ಶ್ರೀಧರ ನಾಯ್ಕ ಅವರ ಮನೆಯೊಳಗೆ ಸೊಂಟದಷ್ಟೆತ್ತರಕ್ಕೆ ನೀರು ಹರಿದಿದ್ದು, ಮನೆಯಲ್ಲಿರುವ ಸಾಮಾನು ಸರಂಜಾಮುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಹೊರ ಸಾಗಿಸಲಾಯಿತು. ಇಲ್ಲಿಯ ಗಣಪತಿ ಶೆಟ್ಟಿ ಅವರ ಮನೆ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಡೆಯಾಗಿ ಮನೆಯೊಳಗಿರುವ ವಸ್ತುಗಳೆಲ್ಲ ಕೊಚ್ಚಿಹೋಗಿವೆ. ಅಘನಾಶಿನಿ ಪ್ರವಾಹದಿಂದಾಗಿ ಇಲ್ಲಿಯ ಅನೇಕ ಮನೆಗಳ ನಿವಾಸಿಗಳು ಅನಿವಾರ್ಯವಾಗಿ ಮನೆ ಬಿಡುವಂತಾಗಿವೆ.

ದೇವಾಲಯದಲ್ಲೇ ಸಿಲುಕಿದ ಅರ್ಚಕರು..
ಇಲ್ಲಿಯ ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಗಣಪತಿ ಭಟ್ ದೇವಾಲಯದೊಳಗೇ ಸಿಲುಕಿ ಸ್ಥಳೀಯರು ಆತಂಕ ಪಡುವಂತಾಯಿತು.
ದೇವಾಲಯದ ಆವರಣದಲ್ಲಿ ಇರುವ ಅವರ ಮನೆಯಲ್ಲಿ ಗಣಪತಿ ಭಟ್ ಇದ್ದರಾದರೂ ಕೆಲವೇ ಕ್ಷಣದಲ್ಲಿ ನೀರು ಏರಿಕೆ ಆಗಿದ್ದರಿಂದ ಅವರಿಗೆ ಹೊರ ಬರಲು ಸಾಧ್ಯವಾಗಲಿಲ್ಲ. ಮುಂದಿನ ಕೆಲ ಕ್ಷಣಗಳಲ್ಲಿ ನೀರಿನ ಪ್ರವಾಹ ಏರಿಕೆಯಾಗಿ ಮನೆಯ ಮೊದಲ ಮಹಡಿ ಮುಳುಗಡೆಯಾಗಿದೆ. ಗಣಪತಿ ಭಟ್ ಅವರು ಶ್ರಮ ಪಟ್ಟು ಮನೆಯ ಮೆತ್ತು ಏರಿ ಆ ಕ್ಷಣಕ್ಕೆ ತಮ್ಮನ್ನು ರಕ್ಷಿಸಿಕೊಂಡಿದ್ದರು. ಆದರೆ, ನೀರಿನ ಪ್ರಮಾಣ ಇನ್ನೂ ಏರುತ್ತಿದ್ದುದರಿಂದ ಸ್ಥಳೀಯರು ಇನ್ನಷ್ಟು ಆತಂಕಕ್ಕೆ ಒಳಗಾದರು.
ಈ ವೇಳೆ ಸ್ಥಳೀಯರು ರಕ್ಷಣೆಗಾಗಿ ತಾಲೂಕು ಆಡಳಿತವನ್ನು ಸಂಪರ್ಕಿಸಿದರೂ, ಅವರು ಆಗಮಿಸುವುದು ತಡವಾಗಲಿದೆ ಎಂದು ಅರಿತ ಸ್ಥಳೀಯರು ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಧುಮುಕಿ ಈಜಿ ಗಣಪತಿ ಭಟ್ ಅವರ ಮನೆ ಮಹಡಿ ಏರಿದ್ದಾರೆ. ಬಳಿಕ ಮಹಡಿಯ ಹೆಂಚು ತೆಗೆದು ಗಣಪತಿ ಭಟ್ ಅವರನ್ನು ರಕ್ಷಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *