ನಂಬಿಕೆ,ಸೌಹಾರ್ದತೆಯ ಬೀರಗುಂಡಿ ಭೂತೇಶ್ವರ ಜಾತ್ರೆ

ಜಾತ್ರೆ,ಹಬ್ಬಗಳಲ್ಲಿ ಜನರಿಗೆ ರಕ್ಷಣೆ ಭದ್ರತೆ ನೀಡುವ ಪೊಲೀಸರು ಜಾತ್ರೆ ನಡೆಸಿದರೆ ಹೇಗಿರುತ್ತೆ ಎನ್ನುವ ಕತೂಹಲವಿದ್ದವರು ಈ ಸ್ಟೋರಿಯನ್ನು ಕಡ್ಡಾಯವಾಗಿ ಓದಲೇಬೇಕು. ಹೌದು ಇದು  ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬೀರಗುಂಡಿ ಭೂತೇಶ್ವರ ಜಾತ್ರೆ, ಈ ಜಾತ್ರೆಯ ವಿಶೇಶವೆಂದರೆ ಇಲ್ಲಿ ಜಾತ್ರೆ ಸಂಘಟಕರು ಪೊಲೀಸರು.

ಈ ದಿನ ಇಲ್ಲಿ ಪೊಲೀಸರು ಸಮವಸ್ತ್ರ ತೊಡದೆ ಜಾತ್ರೆಯ ಭಜಕರಾಗಿ ಕೆಲಸಮಾಡುತ್ತಾರೆ. ಈ ಜಾತ್ರೆಯನ್ನು ಪೊಲೀಸರೇ ಯಾಕೆ ನಡೆಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ, ಅದಕ್ಕೂ ಒಂದು ಚರಿತ್ರೆಯಿದೆ. ಹಲವು ವರ್ಷಗಳ ಹಿಂದೆ ಈಗ ಪೊಲೀಸ್‌ ಠಾಣೆ ಇರುವ ಪ್ರದೇಶದಲ್ಲಿ ಈ ಭೂತೇಶ್ವರ ದೇವರಿದ್ದಿತ್ತಂತೆ ನಂತರ ಈ ಪ್ರದೇಶದಲ್ಲಿ ಪೊಲೀಸ್‌ ಠಾಣೆ ನಿರ್ಮಾಣವಾದ ಮೇಲೆ ಸ್ಥಳಾಂತರವಾದ ಭೂತೇಶ್ವರ ದೇವರಿಗೆ  ಪೂಜಿಸಿ ಹರಕೆ ಹೊತ್ತುಕೊಂಡರೆ ಕಳ್ಳರನ್ನು ಹಿಡಿಯುವುದು ಸೇರಿದಂತೆ ಪೊಲೀಸರ ಕೆಲಸಗಳೆಲ್ಲಾ ಸರಾಗವಾಗಿ ಆಗುತಿದ್ದವಂತೆ.
ಇಂಥ ನಂಬಿಕೆ ಕಾರಣಕ್ಕೆ ಪೊಲೀಸರು ಸಂಘಟಿಸಲು ಪ್ರಾರಂಭಿಸಿದ ಈ ಜಾತ್ರೆಗೆ ಈಗ ೩೦ ವರ್ಷ ಕಳೆದಿದೆ.

ಪ್ರತಿವರ್ಷ ಹೊಸವರ್ಷದ ಒಂದು ದಿನ ನಡೆಯುವ ಈ ಜಾತ್ರೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೂಡಾ ಮಾಡುತ್ತಾರೆ. ಇಂದು ನಡೆದ ಈ ಜಾತ್ರೆಯಲ್ಲಿ ಪಾಲ್ಗೊಂಡ ಪೊಲೀಸ್‌ ಅಧಿಕಾರಿಗಳು ಜಾತ್ರೆಗೆ ಬಂದವರಿಗೆ ಅಡಿಗೆ ಬಡಿಸಿ,ಜನರೊಂದಿಗೆ ತಾವೂ ಬೆರೆತು ಊಟ ಮಾಡಿದರು.
ಹೀಗೆ ದೇವರಿಗೆ ಪೂಜಿಸಿ, ಅನ್ನಸಂತರ್ಪಣೆ ಮಾಡಿ ಸಾರ್ವಜನಿಕರೊಂದಿಗೆ ಬೆರೆತರೆ ಜನಸ್ನೇಹಿ ಪೊಲೀಸ್‌ ಉದ್ದೇಶವೂ ಈಡೇರಿದಂತಾಗುತ್ತದೆ ಎನ್ನುವುದು ಇಲಾಖೆಯ ಅಭಿಮತ.ಪೊಲೀಸರೇ ನಡೆಸುವ ಈ ಜಾತ್ರೆಗೆ ಎಲ್ಲಾ ಸಹಕಾರ ನೀಡುವ ಸ್ಥಳಿಯರು ಪೊಲೀಸರು,ಅವರ ಕುಟುಂಬದೊಂದಿಗೆ ಬೆರೆತು ಸಂಬ್ರಮಿಸುತ್ತಾರೆ. ದಿನಂಪ್ರತಿ ಜಾತ್ರೆ, ಹಬ್ಬ,ಕಾರ್ಯಕ್ರಮಗಳಿಗೆ ರಕ್ಷಣೆ ನೀಡುವ ಪೊಲೀಸರು ಈ  ಜಾತ್ರೆಯಲ್ಲಿ ಸಮವಸ್ತ್ರ,ಇಲಾಖೆಯ ರೀತಿ ರಿವಾಜುಗಳನ್ನು ಬಿಟ್ಟು ಜನಸಾಮಾನ್ಯರಂತೆ ಪಾಲ್ಗೊಳ್ಳುವುದರಿಂದ ಸ್ಥಳೀಯರಿಗೂ ಪೊಲೀಸರ ಬಗ್ಗೆ ಭಿನ್ನ ಭಾವ ಉಂಟಾಗುತ್ತದೆ. ನಂಬಿಕೆ,ಸಾಹಾರ್ದತೆ,ಸಮಾಧಾನಗಳ ಹಿನ್ನೆಲೆಯಲ್ಲಿ ಪೊಲೀಸರ ಸಂಘಟನೆಯಲ್ಲಿ ನಡೆಯುವ ಈ ಜಾತ್ರೆ ರಾಜ್ಯದ ಅಪರೂಪದ ಪೊಲೀಸ್‌ ಜಾತ್ರೆಗಳಲ್ಲಿ ಒಂದು ಎನ್ನಲಾಗಿದೆ. ಈ ಜಾತ್ರೆಯಲ್ಲಿ ಪೊಲೀಸರೊಂದಿಗೆ ಇತರ ಇಲಾಖೆಯ ಸಿಬ್ಬಂದಿಗಳೂ ಸಾರ್ವಜನಿಕರಂತೆ ಬೆರೆತು ಜಾತ್ರೆ ಆಚರಿಸುವುದು ಬೀರಗುಂಡಿ ಭೂತೇಶ್ವರ ಜಾತ್ರೆಯ ವಿಶೇಶ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *