ಗಣೇಶ್‌ ಹೆಗಡೆ ಸಂಶಯಾಸ್ಪದ ಸಾವು ಕೊಲೆ ಶಂಕೆ!

ಸಿದ್ಧಾಪುರ,ಮಾ.೨೩- ಇಲ್ಲಿಯ ವಾಟಗಾರ್‌ ಕುಂಟೆಹೊಳೆ ಬಳಿ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಸಾವು ಕೊಲೆ ಇರಬಹುದೆ? ಎನ್ನುವ ಸಂಶಯಕ್ಕೆ ಕಾರಣವಾಗಿದೆ.

ಮಾ.೨೨ ರ ರಾತ್ರಿಯಿಂದ ೨೩ ರ ಮುಂಜಾನೆ ಮಧ್ಯದಲ್ಲಿ ನಡೆದಿರಬಹುದಾದ ಈ ಘಟನೆಯಲ್ಲಿ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ರವಿವಾರ ಮುಂಜಾನೆ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್‌ ದೂರು ನೀಡಿರುವ ಮೃತರ ಸಹೋದರ ಶ್ರೀಧರ ಹೆಗಡೆ. ಗಣೇಶ್‌ ಹೆಗಡೆ ಸುಂಗೊಳ್ಳಿಮನೆಯಲ್ಲಿ ಏಕಾಂಗಿಯಾಗಿ ಬದುಕುತಿದ್ದರು. ಅವರ ಮಗ ಉಡುಪಿಯಲ್ಲಿರುತಿದ್ದು ವಾಟಗಾರಿನ ಸ್ಥಳೀಯರ ಮಾಹಿತಿ ಮೇರೆಗೆ ವಾಟಗಾರಿನ ಹೊಳೆ ಸಮೀಪ ನೋಡಿದಾಗ ಬಲಬದಿ ಗಣೇಶ್‌ ಹೆಗಡೆ ಉಪಯೋಗಿಸುತಿದ್ದ ‌ಮೊಪೆಡ್ ಸ್ಕೂಟರ್‌ ಪತ್ತೆಯಾಗಿದ್ದು ಅದರ ಪಕ್ಕದಲ್ಲಿಯೇ ಗಣೇಶ್‌ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವಿನ ಬಗ್ಗೆ ಬಲವಾದ ಸಂಶಯ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಶಯಾಸ್ಫದ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ವಿದುರನಾದ ಗಣೇಶ್‌ ಹೆಗಡೆ ಜೂಜಿನ ವ್ಯವಹಾರಸ್ಥರಾಗಿದ್ದು ಮುಸ್ಸಂಜೆಯ ಮೊದಲು ಮನೆ ಸೇರುವ ಪ್ರವೃತ್ತಿಯವಾರಾಗಿದ್ದರು ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಗಣೇಶ್‌ ಹೆಗಡೆ ಶುಕ್ರವಾರದ ಸಾಯಂಕಾಲ ಆರು-ಏಳು ಗಂಟೆಯ ನಂತರ ಕೂಡಾ ಪೇಟೆಯಲ್ಲಿದ್ದರು. ಅವರ ಜೊತೆಗಿದ್ದವರ್ಯಾರು ಎನ್ನುವ ಮಾಹಿತಿ ಆಧರಿಸಿ ನಗರದ ಸಿ.ಸಿ. ಟಿ.ವಿ. ಪರಶೀಲಿಸಲಾಗಿ ನಗರದಲ್ಲಿ ಸಿ.ಸಿ. ಟಿ.ವಿ.ಗಳು ಸುಸ್ಥಿತಿಯಲ್ಲಿರದಿದ್ದುದರಿಂದ ಈ ಮಾಹಿತಿ ಲಭ್ಯವಾಗಿಲ್ಲ.

ಓ.ಸಿ. ಮಟಕಾ, ಇಸ್ಫೀಟ್‌ ಹವ್ಯಾಸಿಯಾಗಿದ್ದ ಗಣೇಶ್‌ ಹೆಗಡೆಯವರ ಜೊತೆ ಇದ್ದವರ್ಯಾರು? ಅವರ ಬಳಿ ಹಣ ಇದ್ದಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಇವರನ್ನು ಕೊಲೆ ಮಾಡಿ ಹಣ ಅಪಹರಿಸಿರಬಹುದೆ? ಎನ್ನುವ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯ ಮೂಲಗಳನ್ನಾಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ಲೊರೆನ್ಸಿಕ್‌ ವರದಿ ಅಧರಿಸಿ ತನಿಖೆ ನಡೆಸಲಿರುವ ಪೊಲೀಸರು ಈ ಸಾವಿನ ರಹಸ್ಯ ಭೇದಿಸಬಹುದೆ? ಎನ್ನುವ ಕುತೂಹಲ ಎಲ್ಲರಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *